Pages

Sunday, September 25, 2011

ಪರಾಠ

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’


೧. ಆಲೂ ಪರಾಠ
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಆಲೂಗಡ್ಡೆ :೨
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಗರಂ ಮಸಾಲ : ಅರ್ಧ ಚಮಚ
ಆಮ್ಚೂರ್ ಹುಡಿ :ಅರ್ಧ ಚಮಚ

ಎಣ್ಣೆ :ಸ್ವಲ್ಪ




ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಆಲೂಗಡ್ಡೆ ಯನ್ನು ಕುಕ್ಕರ್ ನಲ್ಲಿ ಬೇಯಿಸಿ, ಸಿಪ್ಪೆ ತೆಗೆಯಿರಿ.
೩.ಬಳಿಕ ಅಲೂಗದ್ದೆಯನ್ನು ನುಣ್ಣಗೆ ಪುಡಿ ಮಾಡಿ, ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸು,ಜೀರಿಗೆ,ಗರಂ ಮಸಾಲ,ಅಮ್ಚೂರ್ ಹುಡಿ, ಕೊತ್ತಂಬರಿ ಸೊಪ್ಪು ,ಉಪ್ಪು ಇವುಗಳನ್ನು ಹಾಕಿ ಒಟ್ಟಿಗೆ ಕಲಸಿರಿ.
೪.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ. ಆಲೂಗಡ್ಡೆ ಮಿಶ್ರಣದಿಂದಲೂ ಉಮ್ದೆಗಳನ್ನು ಮಾಡಿ. ಇವು ಗೋಧಿ ಹಿಟ್ಟಿನ ಉ೦ಡೆಗಳಿಗಿಂತ ಸ್ವಲ್ಪ ದೊಡ್ಡ ಗಾತ್ರದಲ್ಲಿರಬೇಕು.
೫.ಗೋಧಿ ಹಿಟ್ಟಿನ ಉಂಡೆಗಳನ್ನು ೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು. ಇದರಲ್ಲಿ ಅಲೂಗಡ್ಡೆಯ ಉಂಡೆಯನ್ನು ಇಟ್ಟು ನಿಧಾನವಾಗಿ ಚಪಾತಿಯನ್ನು ಮದಚಬೇಕು.
ಅಲೂಗಡ್ಡೆಯ ಉಂಡೆ ಸರಿಯಾಗಿ ಮುಚ್ಚುವಂತೆ ಚಪಾತಿಯನ್ನು ಮದಚಬೇಕು.ಬಳಿಕ ಇದನ್ನು ನಿಧಾನವಾಗಿ ಲಟ್ಟಿಸಬೇಕು.
೬.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
೭ಆಲೂ ಪರಾಠ ತಯಾರಾಯಿತು . ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.


೨.ಗೋಬಿ ಪರಾಠ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಹೆಚ್ಚಿದ ಕೋಲಿ ಫ್ಲವರ್ :೨ ಲೋಟ
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಓಮ (ಅಜವಾನ ):ಅರ್ಧ ಚಮಚ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಕೋಲಿ ಫ್ಲವರ್,ಜೀರಿಗೆ,ಹಸಿ ಮೆಣಸು,ಕೊತ್ತಂಬರಿ ಸೊಪ್ಪು,ಓಮ ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಕೋಲಿ ಫ್ಲವರ್ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಗೋಬಿ ಪರಾಠ ತಯಾರಾಯಿತು .ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.

ವಿ.ಸೂ. ಕೋಲಿ ಫ್ಲವರ್ ಬದಲು ಹೆಚ್ಚಿದ ಮೂಲಂಗಿಯನ್ನು ಬಳಸಿದರೆ, ಮೂಲಿ ಪರಾಠ ವಾಗುತ್ತದೆ .


೩.ಪಾಲಕ್ ಪರಾಠ
ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು


ಹೆಚ್ಚಿದ ಪಾಲಕ್ :೨ ಲೋಟ
ಜೀರಿಗೆ :ಅರ್ಧ ಚಮಚ
ಕೆಂಪು ಮೆಣಸಿನ ಚೂರು: ಸ್ವಲ್ಪ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಇಂಗು :ಸ್ವಲ್ಪ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಪಾಲಕ್ ,ಜೀರಿಗೆ,ಕೆಂಪು ಮೆಣಸಿನ ಚೂರು,ಕೊತ್ತಂಬರಿ ಸೊಪ್ಪು,ಇಂಗು ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಪಾಲಕ್ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಪಾಲಕ್ ಪರಾಠ ತಯಾರಾಯಿತು .


೪.ಮೇಥಿ ಪರಾಠ
ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು


ಮೆಂತೆ ಸೊಪ್ಪು :1 ಲೋಟ
ನೀರುಳ್ಳಿ : ಒಂದು
ಬಟಾಟೆ :ಒಂದು
ಕ್ಯಾರೆಟ್ :ಅರ್ಧ
ಜೀರಿಗೆ ಹುಡಿ :ಅರ್ಧ ಚಮಚ
ಕೆಂಪು ಮೆಣಸಿನ ಚೂರು: ಸ್ವಲ್ಪ
ಕೊತ್ತಂಬರಿ ಪುಡಿ :ಸ್ವಲ್ಪ

ಬೆಣ್ಣೆ :ಸ್ವಲ್ಪ
ಎಣ್ಣೆ :ಸ್ವಲ್ಪ




ವಿಧಾನ :
೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಬೆಣ್ಣೆ ಬಿಸಿ ಮಾಡಿ ಅದರಲ್ಲಿ ಮೆಂತೆ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಚೆನ್ನಾಗಿ ಹುರಿಯಿರಿ.
೩.ಬಟಾಟೆಯನ್ನು ಬೇಯಿಸಿ,ಸಿಪ್ಪೆ ತೆಗೆದು ಪುಡಿ ಮಾಡಿ.
೪.ಈಗ ಹುರಿದ ಮೆಂತೆ ಸೊಪ್ಪು,ಈರುಳ್ಳಿ ,ಪುಡಿ ಮಾಡಿದ ಆಲೂಗಡ್ಡೆ ,ಕ್ಯಾರೆಟ್ ತುರಿ,ಜೀರಿಗೆ ಹುಡಿ,ಕೆಂಪು ಮೆಣಸಿನ ಚೂರು,ಕೊತ್ತಂಬರಿ ಪುಡಿ ,ಉಪ್ಪು ಹಾಕಿ ಕಲಸಿ,ಉಂಡೆಗಳನ್ನಾಗಿ ಮಾಡಿ.
೫.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಮೆಂತೆ ಸೊಪ್ಪಿನ ಮಿಶ್ರಣದ ಉಂಡೆ ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.

೫. ಈರುಳ್ಳಿ ಪರಾಠ

ಗೋಧಿ ಹಿಟ್ಟು : ಒಂದು ಕಾಲು ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ನೀರುಳ್ಳಿ : ೨
ಓಮ (ಅಜವಾನ ):2 ಚಮಚ
ಕೊತ್ತಂಬರಿ ಸೊಪ್ಪು :ಸ್ವಲ್ಪ
ಎಣ್ಣೆ :ಸ್ವಲ್ಪ


ವಿಧಾನ :
೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು,ಸಣ್ಣಗೆ ಹೆಚ್ಚಿದ ಈರುಳ್ಳಿ, ಅಜವಾನ ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು.
೩.ಇದಕ್ಕೆ ಎಣ್ಣೆ ಹಾಕಿ ಮಡಚಿ ಮತ್ತೆ ಲಟ್ಟಿಸಿ. ಈ ರೀತಿ ಎರಡು ಸಲ ಮಾಡಬೇಕು.
೪.ಬಳಿಕ ಕಾದ ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಿ.

Friday, August 5, 2011

ಫೇಸ್ ಬುಕ್ ಫ್ರೆಂಡ್ ಶಿಪ್

ವಿಜಯ next -ಆಗಸ್ಟ್ ೫ ೨೦೧೧ ರಲ್ಲಿ ಪ್ರಕಟಿತ .ಓದಲು ಈ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

Monday, June 20, 2011

ಬೆಟ್ಟದ ಜೀವ





ಕಾರಂತರ ’ಬೆಟ್ಟದ ಜೀವ’ ಕಾದಂಬರಿ ನನ್ನ ಅತೀ ಪ್ರಿಯವಾದ ಕಾದಂಬರಿಗಳ ಪೈಕಿ ಒಂದು. ನಾನು ಅದನ್ನು ’ನೋಡಿದ್ದು ’ ಮೂರನೇ ತರಗತಿಯಲ್ಲಿರುವಾಗ ನನ್ನ ಗುರುಗಳ ಬಳಿ. ’ಓದಿದ್ದು ’ ಕಾಲೇಜಿಗೆ ಬಂದ ಮೇಲೆ. ನನ್ನ ಆಪ್ತ ಗೆಳತಿಯೋರ್ವಳು ಅದರ ಬಗ್ಗೆ ವಿಮರ್ಶೆ ಬರೆದು, ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದಾಗ ನಾನು ಕಾದಂಬರಿಯನ್ನೂ ಆಕೆ ಬರೆದ ವಿಮರ್ಶೆಯನ್ನೂ ಜತೆ ಜತೆಯಾಗಿಯೇ ಓದಿದೆ.


’ಬೆಟ್ಟದ ಜೀವ ’ ಕಾಡಿನ ಮಧ್ಯೆ ಗೂಡು ಕಟ್ಟಿಕೊಂಡು ಪ್ರಕೃತಿಯ ಜತೆ ಜತೆಗೆ ಸಾಗಿಸುವ ಗೋಪಾಲಯ್ಯನವರು ಮತ್ತು ಅವರ ಪತ್ನಿ ಶಂಕರಿಯ ಕಥೆ.ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಚಿತ್ರಿತವಾಗಿದೆ. ಕಾದಂಬರಿ ನಡೆಯುವ ಸ್ಥಳ ನನ್ನ ಹುಟ್ಟೂರಾದ ಹೊಸಮಠದ ಆಸುಪಾಸು-ಪಂಜ ಮತ್ತು ಸುಬ್ರಹ್ಮಣ್ಯ. ಮತ್ತು ಅದರಲ್ಲಿ ಕಾಣಸಿಗುವ ಪ್ರಕೃತಿಯ ವರ್ಣನೆಗಳನ್ನು ನಾನು ಪ್ರತ್ಯಕ್ಷವಾಗಿ ಕಾಣುತ್ತಾ ಬೆಳೆದವಳಾದ ಕಾರಣ ಈ ಕಾದಂಬರಿ ನನ್ನ ಮನಸ್ಸಿಗೆ ಮತ್ತಷ್ಟು ಆಪ್ತವಾದದ್ದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೆ ಮುಗಿಯಲಿಲ್ಲ. ಸಮಾನ ಮನಸ್ಕ ಸ್ನೇಹಿತರು ಭೇಟಿಯಾದಾಗ ’ಬೆಟ್ಟದ ಜೀವ’ ನುಸುಳುವುದುಂಟು.ಹೇಗೆ ಅಂತೀರಾ ? " ಬೆಟ್ಟದ ಜೀವದಲ್ಲಿ ಬರುವ ಥರ ದೊಡ್ಡ ಗಿಂಡಿಯಲ್ಲಿ ಕಾಫಿ ಕುಡಿಯಬೇಕು ಎಂತಲೋ ಅಥವಾ ’ಬೆಟ್ಟದ ಜೀವದಲ್ಲಿ ಬರುವ ಥರ ಎಣ್ಣೆ ಸ್ನಾನ ಮಾಡಬೇಕು’ಎಂತಲೋ ಮಾತು ’ಪರಮ ಸುಖದ ’ ಕಲ್ಪನೆಗಳಲ್ಲಿ ಒಂದಾಗಿ ಹೋಗುತ್ತದೆ!!

ಬೆಟ್ಟದ ಜೀವ ಇಷ್ಟೆಲ್ಲಾ ಆಗಿರುವಾಗ ಈ ಸಿನೆಮಾ ಬಂದಾಗ ನನಗೆ ಇದನ್ನು ನೋಡಲೇಬೇಕೆಂದು ಅನಿಸಿದುದರಲ್ಲಿ ಅಚ್ಚರಿಯೇನೂ ಇಲ್ಲ. ಕಾದಂಬರಿ ಮತ್ತು ಚಲನಚಿತ್ರ ಎರಡೂ ವಿಭಿನ್ನ ಮಾಧ್ಯಮಗಳು. ಕಾದಂಬರಿಯು ಕೆಲವೊಂದು ಸಂಗತಿಗಳನ್ನು ಅತ್ಯುತ್ಕೃಷ್ಟವಾಗಿ ಅಭಿವ್ಯಕ್ತಿಗೊಳಿಸಿದರೆ ಮತ್ತೆ ಕೆಲವು ವಿಚಾರಗಳನ್ನು ಚಲನಚಿತ್ರ ಸೊಗಸಾಗಿ ಧ್ವನಿಸೀತು. ’ಬೆಟ್ಟದ ಜೀವ’ ದ ನಿರೂಪಣೆ ಮತ್ತು ಕಥಾನಾಯಕನ ಆಲೋಚನೆಗಳನ್ನು ಚಲನಚಿತ್ರದಲ್ಲಿ ಯಾವ ರೀತಿ ತೋರಿಸಿಯಾರೆಂದು ನನಗೆ ಕುತೂಹಲವಿತ್ತು.

ಸಿನೆಮಾದಲ್ಲಿ ಕೆಲವು ಕಡೆ ಮೂಲ ಕಥೆಗಿಂತ ಕೊಂಚ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಚಳುವಳಿಯು ಕಥೆಯ ಜತೆ ಜತೆಗೆ ಸಾಗುತ್ತದೆ. ಚಳುವಳಿಯಲ್ಲಿ ಭಾಗವಹಿಸಿದ ಶಿವರಾಮು ಓಡುತ್ತಾ ಓಡುತ್ತಾ ದೇರಣ್ಣ ಮತ್ತು ಬಟ್ಯನನ್ನು ಭೇಟಿಯಾಗುವುದು ಮತ್ತು ಅವರ ಮೂಲಕ ಭಟ್ಟರ ಮನೆ ತಲುಪುವುದರಿಂದ ಕಥೆ ಶುರುವಾಗುತ್ತದೆ. ಮಗನ ಅಗಲಿಕೆಯಿಂದ ಕಂಗಾಲಾಗಿರುವ ದಂಪತಿಗಳು ಶಿವರಾಮುವಿನಲ್ಲಿ ಮಗನನ್ನು ಕಾಣುತ್ತಾರೆ. ಊಟ,ತಿಂಡಿ ನೀಡಿ ಉಪಚರಿಸುತ್ತಾರೆ. ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಅವರ ಮಗನು ಮದುವೆಯಾಗಿ ಅವರಿಂದ ದೂರವಾಗಿರುತ್ತಾನೆ. ಆದರೆ ಇಲ್ಲಿ ಎರಡು-ಮೂರು ಬೇರೆ ಕಾರಣಗಳು ಹೆಣೆದುಕೊಳ್ಳುತ್ತವೆ. ಭಟ್ಟರು ತಮ್ಮ ಸ್ವಂತ ಮಗಳು-ಅಳಿಯನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದ ಲಕ್ಷ್ಮಿ, ನಾರಾಯಣರ ಮನೆಗೆ ಹೋದಾಗ ಲಕ್ಷ್ಮಿಯು "ಶಂಭು ( ಭಟ್ಟರ ಮಗ) ,ತನ್ನ ಜತೆ ಸಲುಗೆ ಮೀರಿ ವರ್ತಿಸಿದ ವಿಚಾರವನ್ನು ಅರುಹುತ್ತಾಳೆ. ಆದರೆ ತಾನು ಅದಕ್ಕೆ ಯಾವ ಪ್ರೋತ್ಸಾಹವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟುಹೋದ ’ ಎಂದು ಹೇಳುತ್ತಾಳೆ.

ಭಟ್ಟರ ಪತ್ನಿ- "ತಾನು ಮಗನಿಗೆ ಚಿನ್ನವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟು ಹೋದನೆಂದು ಹಲುಬಿ,ಚಿನ್ನವನ್ನು ಶಿವರಾಮುವಿನ ಕೈಗೊಪ್ಪಿಸುವ ದೃಶ್ಯವಂತೂ ಮನಕಲಕುತ್ತದೆ. ಹೊನ್ನಿನ ಮೋಹಕ್ಕಿಂತಲೂ ಸಂತಾನದ ಮೋಹವೇ ಮಿಗಿಲೆಂದು ಆಕೆ ಹೇಳುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ಭಟ್ಟರು ಚಳುವಳಿಗೆಂದು ಮನೆ ಬಿಟ್ಟು ಹೋದ ಮಗನ ಸಂಗತಿಯನ್ನು ತಿಳಿಸುತ್ತಾರೆ. "ಪ್ರಕೃತಿಯನ್ನು ಮಣಿಸಿರುವ ತನಗೆ ಮಗನನ್ನು ಮಣಿಸಲು ಅಸಾಧ್ಯವಾಯಿತು ಎಂಬುವುದು ಬಲು ದೊಡ್ಡ ಕೊರಗಾಗುತ್ತದೆ. ಮಗನ ಛಾಯಾಚಿತ್ರವನ್ನು ನೋಡುವಾಗ ಅವರಾಡುವ ಮಾತು " ವಾಸ್ತವದಲ್ಲಿ ಕಾಣಲಾಗದ್ದನ್ನು ನೆರಳಿನಾಟದಲ್ಲಿ ಕಾಣುವುದು ಹೇಗೆ" ಎನ್ನುವುದು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.


ಮೂಲ ಕಥೆಯಲ್ಲಿ ಶಿವರಾಮು ಅವರಿಗೆ ಜ್ವರ ಬರುವ ವಿಚಾರವಿದ್ದರೆ ಇಲ್ಲಿ ಅವರಿಗೆ ಕಾಲು ಉಳುಕುವುದು, ’ಮಾಂಕು’ ಬಂದು ಔಷಧಿ ನೀಡುವುದು, ನಾರಾಯಣ,ಲಕ್ಷ್ಮಿಯರು ಅವರನ್ನು ನೋಡಿಕೊಳ್ಳುವುದು ಇತ್ಯಾದಿ ಮಾರ್ಪಾಡು ಮಾಡಿದ್ದಾರೆ. ಹುಲಿಯನ್ನು ಕೊಲ್ಲಬೇಡಿರೆಂದು ಹೇಳುವುದು ’ಅಹಿಂಸಾತ್ಮಕ ಚಳುವಳಿಯ ’ ಒಂದು ರೂಪ ಎನ್ನಬಹುದು. ಅಂತೆಯೇ ’ಯಾವ ಜೀವಿಗೂ-ಮನುಷ್ಯನಿಗೂ,ಪ್ರಾಣಿಗೂ ತನ್ನ ಇಚ್ಛೆಯ ಪ್ರಕಾರ ಜೀವಿಸಲು ಬಿಡುವುದು, ಸ್ವಾತಂತ್ರ್ಯ ನೀಡುವುದು ಎಂಬ ಅರ್ಥವನ್ನೂ ಬಿಂಬಿಸುತ್ತದೆ. ಮಗನ ಅಗಲುವಿಕೆಯ ನೋವನ್ನು ಕಂಡ ಶಿವರಾಮು ತನ್ನ ಹೆತ್ತವರಲ್ಲಿ ಇಂಥ ನೋವನ್ನು ಉಂಟುಮಾಡಲಾರೆ ಎನ್ನುತ್ತಾ ತನ್ನ ಹೆತ್ತವರನ್ನು ನೋಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮೂಲಕಥೆಯಲ್ಲಿ ಭಟ್ಟ್ರು ಮಗನನ್ನು ಹುಡುಕಲು ಪುಣೆಗೆ ಹೊರಡುವಲ್ಲಿ ಕಥೆ ಕೊನೆಗೊಳ್ಳುತ್ತದೆ. ಚಲನಚಿತ್ರದಲ್ಲಿ ಆಧುನಿಕ ಕಾಲದಲ್ಲಿ ಮಧ್ಯ ವಯಸ್ಕ ಶಿವರಾಮು ಅವರು ಮಗನ ಜತೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬರುವುದು,ಅಲ್ಲಿಯ ಪ್ರಕೃತಿಯನ್ನು ಆರಾಧಿಸುವುದು, ಮತ್ತು ವೃದ್ಧ ದಂಪತಿಗಳ ಮಾತನ್ನು ಮೆಲುಕು ಹಾಕುವಲ್ಲಿ ಚಲನಚಿತ್ರಕ್ಕೆ ತೆರೆ ಬೀಳುತ್ತದೆ.


ಇಡೀ ಚಿತ್ರದ ಚಿತ್ರೀಕರಣ ಬಹಳ ಸೊಗಸಾಗಿದೆ. ಕಾಡು,ಬೆಟ್ಟ,ಗುಡ್ಡ,ನದಿ ಇವುಗಳ ಅನನ್ಯ ಸೌಂದರ್ಯವನ್ನು ಅತ್ಯಂತ ಸೊಗಸಾಗಿ ಚಿತ್ರೀಕರಣ ಮಾಡಿದ್ದಾರೆ. ಭೂತದ ಕೋಲ, ತೋಟ ಇವೆಲ್ಲ ತುಳುನಾಡಿನಲ್ಲಿ ಹುಟ್ಟಿ ಬೆಳೆದವರನ್ನೆಲ್ಲಾ ’ನಾಸ್ತಾಲ್ಜಿಯಾಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.ಭಟ್ಟರು, ಅವರ ಪತ್ನಿಯ ಅಭಿನಯವಂತೂ ಮನೋಜ್ನವಾಗಿದೆ. ದೇರಣ್ಣ,ಬಟ್ಯ ಅವರು ಹಾಡುವ ಹಾಡುಗಳು, ಅವರ ಮುಗ್ಧತೆಯಂತೂ ಕಣ್ಣಿಗೆ ಕಟ್ಟುತ್ತದೆ. ಸಂಭಾಷಣೆಯಲ್ಲಿ ತುಳು,ದಕ್ಷಿಣ ಕನ್ನಡ ಮತ್ತು ಹವ್ಯಕ ಶೈಲಿಯ ಕನ್ನಡ ಕಂಡುಬರುತ್ತದೆ. ದಕ್ಷಿಣ ಕನ್ನಡ ಶೈಲಿಯ ಕನ್ನಡವನ್ನು ಇನ್ನಷ್ಟು ಆಡುಮಾತಿನ ಶೈಲಿಯಲ್ಲಿ ಮಾತನಾಡುತ್ತಿದ್ದರೆ ಇನ್ನೂ ಸೊಗಸಾಗಿರುತ್ತಿತ್ತೇನೊ!


ಇಷ್ಟೆಲ್ಲಾ ಆದ ಮೇಲೆ ಇನ್ನೊಂದು ವಿಚಾರ ಹೇಳಬೇಕು. ಹಳ್ಳಿಗಳಲ್ಲಿ ಮಕ್ಕಳು ಉದ್ಯೋಗ ನಿಮಿತ್ತ ಪೇಟೆ ಸೇರುತ್ತಿದ್ದಾರೆ. ಹಳ್ಳಿಗಳಲ್ಲಿ ಕಾಣುವುದು ವೃದ್ಧ ತಂದೆ ತಾಯಿಯರು ಮಾತ್ರ. ನಮ್ಮೊರಿಗೆ ಬಂದರೆ ನಿಮಗೆ ಪ್ರತಿ ಮನೆಯಲ್ಲೂ ’ಬೆಟ್ಟದ ಜೀವ’ಗಳು ಕಾಣಸಿಕ್ಕೇ ಸಿಗುತ್ತಾರೆ!!




ಚಿತ್ರ ಕೃಪೆ : http://cdn2.supergoodmovies.com/FilesTwo/b3a1e2cf74074353baf7c06002387664.jpg

Thursday, June 9, 2011

ಮಳೆಗಾಲದ ತಿಂಡಿಗಳು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಇದರಲ್ಲಿ ಬರೆದಿರುವ ಬಾಳೆ ಕಾಯಿ ಕಾಪು, ದಹಿ maTar ಚಾಟ್ ,ಪೆಪ್ಪರ್ ಗಾರ್ಲಿಕ್ ಸೂಪ್ ಇದನ್ನು ನಾನು ಕಸ್ತೂರಿ ಟಿ.ವಿ. ಯ 'ನಳ ಪಾಕ 'ಕಾರ್ಯಕ್ರಮದಲ್ಲಿ ಅಡುಗೆ ಮಾಡಿ ತೋರಿಸಿದ್ದೆ :)

ಮಳೆಗಾಲ ಎಂದರೆ ಮೊದಲೇ ಮಳೆ..ಥಂಡಿ . ಏನಾದರೂ ಬಿಸಿ ಬಿಸಿ,ಖಾರ ಖಾರ ತಿಂಡಿಗಳನ್ನು ಚಪ್ಪರಿಸಲು ಮನ ಹಾತೊರೆಯುತ್ತದೆ. ನಿಮಗಿದೋ ಕೆಲವೊಂದು ಐಡಿಯಾ ಗಳು.

1.ಬಾಳೆ ಕಾಯಿ ಕಾಪು

ಬೇಕಾಗುವ ಸಾಮಗ್ರಿಗಳು

ಬಾಳೆಕಾಯಿ :1
ಅಕ್ಕಿ ಹಿಟ್ಟು : ಒಂದು ಲೋಟ
ಕೊತ್ತಂಬರಿ : ಎರಡು ಚಮಚ
ಒಣ ಮೆಣಸು : ೫
ಉದ್ದು : ಒಂದು ಚಮಚ
ತೆಂಗಿನ ತುರಿ : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ : ಸ್ವಲ್ಪ
ಹುಣಸೆ ಹುಳಿ : ಸಣ್ಣ ಗೋಲಿ ಗಾತ್ರದ್ದು
ಬೆಲ್ಲ : ಸಣ್ಣ ಚೂರು

ವಿಧಾನ.
೧.ಅಕ್ಕಿಹಿಟ್ಟನ್ನು ಬಾಣಲೆಗೆ ಹಾಕಿ ಪರಿಮಳ ಬರುವ ತನಕ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ಕೊತ್ತಂಬರಿ,ಒಣ ಮೆಣಸು, ಉದ್ದು,ತೆಂಗಿನ ತುರಿ,ಉಪ್ಪು,ಹುಣಸೆ, ಬೆಲ್ಲ ಮತ್ತು ಹುರಿದ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರನ್ನು ಮಿಶ್ರ ಮಾಡಿ ರುಬ್ಬಿ. ಈ ಮಿಶ್ರಣವು ಬೋಂಡ ಹಿಟ್ಟಿನ ಹದದಲ್ಲಿ ಇರಬೇಕು.
೩.ಬಾಳೆ ಕಾಯಿಯನ್ನು ಬಿಲ್ಲೆಗಳಾಗಿ ಹೆಚ್ಚಿ ಈ ಮಿಶ್ರಣದಲ್ಲಿ ಹಾಕಿ.
೪.ಕಾವಲಿಯನ್ನು ಬಿಸಿ ಮಾಡಿ, ಒಂದು ಚಮಚ ಎಣ್ಣೆ ಹಾಕಿ. ಅಕ್ಕಿ ಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಬಾಲೆಕಾಯಿಯ ಬಿಲ್ಲೆಗಳನ್ನು ಕಾವಲಿಯಲ್ಲಿ ಹಾಕಿ ಬೇಯಿಸಿ. ೨-೩ ನಿಮಿಷ ಕಳೆದ ಮೇಲೆ ಬಾಳೆ ಕಾಯಿ ಬಿಲ್ಲೆಗಳನ್ನು ಮಗುಚಿ ಹಾಕಿ ಬೇಯಿಸಬೇಕು.

೨.ಭೇಲ್ ಪುರಿ.



ಬೇಕಾಗುವ ಸಾಮಗ್ರಿಗಳು

ಮಂಡಕ್ಕಿ : ನಾಲ್ಕು ಲೋಟ
ನೀರುಳ್ಳಿ : ಒಂದು
ಟೊಮೇಟೊ :ಒಂದು,
ನಿಂಬೆ ರಸ : ಒಂದು ಚಮಚ
ಖಾರದ ಪುಡಿ : ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಎಣ್ಣೆ :ಎರಡು ಚಮಚ
ನೆಲಕಡಲೆ : ಒಂದು ಹಿಡಿ

ವಿಧಾನ :
೧.ನೀರುಳ್ಳಿ, ಟೊಮೇಟೊ ,ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ.
೨.ನೆಲಕಡಲೆಯನ್ನು ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
೩.ಒಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ (೧) ಮತ್ತು (೨) ರಲ್ಲಿ ಸೂಚಿಸಿದ ವಸ್ತುಗಳನ್ನು ಹಾಕಿ ಕಲಕಿ. ಇದಕ್ಕೆ ನಿಂಬೆ ರಸ, ಉಪ್ಪು, ಖಾರದ ಪುಡಿ,ಎಣ್ಣೆ ಹಾಕಿ ಚೆನ್ನಾಗಿ ಕಲಕಿ ಕೂಡಲೇ ತಿನ್ನಿ.

ವಿ.ಸೂ. ಬೇಕಿದ್ದರೆ ತೆಳ್ಳಗಿನ ಸೇವು ( ಖಾರದ ಖಡ್ಡಿ ) ಸೇರಿಸ ಬಹುದು.


೩.ಪೆಪ್ಪರ್ ಗಾರ್ಲಿಕ್ ಸೂಪ್


ಬೇಕಾಗುವ ಸಾಮಗ್ರಿಗಳು

ಕಾಳು ಮೆಣಸು : ಒಂದು ಚಮಚ
ಬೆಳ್ಳುಳ್ಳಿ ಎಸಳು :ಹತ್ತು
ತೆಂಗಿನ ತುರಿ : ಕಾಲು ಲೋಟ
ಉದ್ದು : ಒಂದು ಚಮಚ
ನೀರು :ಎರಡು ಲೋಟ
ರುಚಿಗೆ ತಕ್ಕಷ್ಟು ಉಪ್ಪು

ತುಪ್ಪ :ಒಂದು ಚಮಚ
ನಿಂಬೆ ರಸ :ಒಂದು chamcha

ವಿಧಾನ :
೧.ಕಾಳು ಮೆಣಸು ಮತ್ತು ಉದ್ದನ್ನು ಚೆನ್ನಾಗಿ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ತೆಂಗಿನ ತುರಿ, ಕಾಳು ಮೆಣಸು ಮತ್ತು ಉದ್ದನ್ನು ಹಾಕಿ ರುಬ್ಬಿ.
೩. ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ , ಬೆಳ್ಳುಳ್ಳಿಯನ್ನು ಕರಿಯಿರಿ.
೪.ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಸುರಿದು, ಅದಕ್ಕೆ ಕರಿದ ಬೆಳ್ಳುಳ್ಳಿಯನ್ನು ಸೇರಿಸಿ.
೫.ಈ ಮಿಶ್ರಣವನ್ನು ಕುದಿಯಲು ಬಿಡಿ,
೬.ಉಪ್ಪು ಮತ್ತು ನಿಂಬೆ ರಸ ಹಾಕಿ ಕೆಳಗಿಳಿಸಿ.

ಸೂಚನೆ : ಇದನ್ನು ಸೂಪ್ ನಂತೆ ಅಥವಾ ಸಾರಿನಂತೆ ಸವಿಯಬಹುದು. ಉದ್ದಿನ ಬದಲು ಜೀರಿಗೆ ಹಾಕಿದರೆ ವಿಭಿನ್ನ ರುಚಿ ಬರುತ್ತದೆ.


೪. ಕಷಾಯ

ಮಲೆನಾಡಿನಲ್ಲಿ ಕಷಾಯ ಎನ್ನುವುದು ಜನಪ್ರಿಯ ಪೇಯ.

ಬೇಕಾಗುವ ಸಾಮಗ್ರಿಗಳು

ಕಷಾಯದ ಪುಡಿ ಮಾಡಲು :
ಕಾಳು ಮೆಣಸು : ಎರಡು ಚಮಚ
ಜೀರಿಗೆ: ನಾಲ್ಕು ಚಮಚ
ಕೊತ್ತಂಬರಿ : ಒಂದು ಹಿಡಿ.
ಏಲಕ್ಕಿ : ಒಂದು
ಲವಂಗ: ೨
ಹಿಪ್ಪಲಿ : ಒಂದು ಚಮಚ
ಒಣ ಶುಂಥಿ : ಸಣ್ಣ ಚೂರು
ಅರಸಿನ : ಕಾಲು ಚಮಚ

ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ನುಣ್ಣಗೆ ನೀರು ಹಾಕದೆ ಪುಡಿ ಮಾಡಿ ಇಟ್ಟುಕೊಳ್ಳಿ. ಇದು ಕಷಾಯದ ಪುಡಿ.

ಕಷಾಯ ಮಾಡಲು

೧ ಚಮಚ ಕಷಾಯದ ಪುಡಿ
ಬೆಲ್ಲ : ಸಣ್ಣ ಚೂರು
ನೀರು :ಎರಡು ಲೋಟ

ನೀರಿಗೆ ಬೆಲ್ಲ, ಕಷಾಯದ ಪುಡಿ ಹಾಕಿ ಕುದಿಸಿ.
ಬಳಿಕ ಇದನ್ನು ಸೋಸಿ , ಕುಡಿಯಬೇಕು. ಬೇಕಿದ್ದರೆ ಹಾಲು ಸೇರಿಸಬಹುದು.

೫. ದಹಿ maTar ಚಾಟ್

ಬೇಕಾಗುವ ಸಾಮಗ್ರಿಗಳು

ಬಟಾಣಿ : ಎರಡು ಲೋಟ
ಮೊಸರು : ಕಾಲು ಲೋಟ
ಗರಂ ಮಸಾಲೆ ಅರ್ಧ ಚಮಚ
ಚಾಟ್ ಮಸಾಲೆ ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಹುಣಸೆ ರಸ :ಕಾಲು ಲೋಟ
ಬೆಲ್ಲ : ಸಣ್ಣ ಚೂರು
ಖಾರದ ಪುಡಿ : ಕಾಲು ಚಮಚ
ಕೊತ್ತಂಬರಿ ಸೊಪ್ಪು :swalpa
ನೀರುಳ್ಳಿ :೧

ವಿಧಾನ
೧.ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ.
೨.ಒಂದು ಪಾತ್ರೆಯಲ್ಲಿ ಹುಣಸೆ ರಸ ಹಾಕಿ ಕುದಿಸಿ.
೩.ಕುದಿ ಬರುತ್ತಿದ್ದಂತೆ ಅದಕ್ಕೆ ಬೆಲ್ಲ, ಉಪ್ಪು, ಖಾರದ ಪುಡಿ,ಚಾಟ್ ಮಸಾಲ, ಗರಂ ಮಸಾಲ ಹಾಕಿ ಕಲಕಿ.
೪.ಇದಕ್ಕೆ ಬೇಯಿಸಿದ ಬಟಾಣಿಯನ್ನು ಸೇರಿಸಿ ಮಂದ ಉರಿಯಲ್ಲಿ ಬೇಯಿಸಿ.
೫.ಇದನ್ನು ಬಡಿಸುವಗಾ ಒಂದು ತಟ್ಟೆಗೆ ಬೇಯಿಸಿದ ಬಟಾಣಿಮಿಶ್ರಣ ಹಾಕಿ, ಅದಕ್ಕೆ ಮೊಸರು, ಕೊತ್ತಂಬರಿ ಸೊಪ್ಪು ಮತ್ತು ಹೆಚ್ಚಿದ ನೀರುಳ್ಳಿ ಹಾಕಿ ತಿನ್ನಲು ಕೊಡಿ.ಲು

Thursday, June 2, 2011

ಪಾಯಸ

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’



ಪಾಯಸ

ಪಾಯಸ ಎನ್ನುವುದು ಪೀಯುಶ ಎಂಬ ಶಬ್ದದಿಂದ ಬಂದಿದೆ.ಪೀಯೂಶ ಎಂದರೆ ಮಕರಂದ. ಸವಿಯಾದದ್ದು. ಪಾಯಸವೂ ಸಿಹಿ ವಸ್ತು.ಹಾಗಾಗಿ ಈ ಹೆಸರಿನಿಂದ ಕರೆದಿರಬೇಕು.
ಹಿಂದಿಯ ಖೀರ್ ಎನ್ನುವುದು ಸಂಸ್ಕೃತದ ಕ್ಷೀರದಿಂದ ಬಂದದ್ದು. ಕ್ಷೀರವೆಂದರೆ ಹಾಲು.ಪಾಯಸದ ಮೂಲವಸ್ತು ಹಾಲು.ಉತ್ತರ ಭಾರತದ ಕಡೆ ದನ/ಎಮ್ಮೆಯ ಹಾಲನ್ನು ಬಳಸಿದರೆ,ದಕ್ಷಿಣ ಭಾರತದಲ್ಲಿ ತೆಂಗಿನ ಹಾಲಿನ ಬಳಕೆ ಹೆಚ್ಚು.

(I have got the above information from wiki pedia)


--------------------------
೧.ಗೋಧಿ ಕಡಿ ಪಾಯಸ

--------------------------



ಬೇಕಾಗುವ ವಸ್ತುಗಳು

ಗೋಧಿ ಕಡಿ :ಒಂದು ಲೋಟ
ಬೆಲ್ಲ:೧ ಲೋಟ
ತೆಂಗಿನಕಾಯಿ ತುರಿ:ಒಂದು ಲೋಟ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು
ತುಪ್ಪ :ಒಂದು ಚಮಚ
ಏಲಕ್ಕಿ ಪುಡಿ:ಚಿಟಿಕೆ
ನೀರು:ಎರಡು ಲೋಟ
ಬೆಲ್ಲದ ಪುಡಿ:ಒಂದು ಲೋಟ


ವಿಧಾನ.

೧.ಗೋಧಿ ಕಡಿಗೆ ನೀರು ಹಾಕಿ,ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೨.ತೆಂಗಿನ ತುರಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿ, ರಸ ಹಿಂಡಿ ಇಟ್ಟು ಕೊಳ್ಳಿ.
೩.ಬೆಂದ ಗೋಧಿ ಕಡಿ, ತೆಂಗಿನಕಾಯಿ ಹಾಲು, ಬೆಲ್ಲ ಹಾಕಿ ಕುದಿಸಿ.
೪.ಇದು ಕುದಿಯುತ್ತಿದ್ದಂತೆ ಇದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.


ಇದೇ ಥರ ಕಡ್ಲೆ ಬೇಳೆ, ಹೆಸರು ಬೇಳೆ,ಅಕ್ಕಿಯ ಪಾಯಸವನ್ನೂ ಮಾಡಬಹುದು.

----------------------------------------------------------------------


೨.ಕ್ಯಾರೇಟ್ ಪಾಯಸ

-----------------------------------------------------------------------

ಕ್ಯಾರ್‍ಏಟ್ :ನಾಲ್ಕು
ತೆಂಗಿನ ಕಾಯಿ ಹಾಲು:ಎರಡು ಲೋಟ
ಸಕ್ಕರೆ:ಎರದು ಲೋಟ
ಏಲಕ್ಕಿ ಪುಡಿ:ಚಿಟಿಕೆ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು
ತುಪ್ಪ :ಒಂದು ಚಮಚ


೧.ಕ್ಯಾರ್‍ಏಟನ್ನು ಹೆಚ್ಚಿ ರುಬ್ಬಿ,ಕಾಯಿ ಹಾಲಿನಲ್ಲಿ ಬೇಯಿಸಿ.
೨.ಇದಕ್ಕೆ ಸಕ್ಕರೆ ಹಾಕಿ ಒಂದು ಕುದಿ ಬರಿಸಿ.
೩.ತುಪ್ಪದಲ್ಲಿ ಹುರಿದ ದ್ರಾಕ್ಷಿ,ಗೋಡಂಬಿಗಳನ್ನು ಸೇರಿಸಿ ಕಲಕಿ.
೪.ಏಲಕ್ಕಿ ಪುಡಿ ಉದುರಿಸಿ.

---------------------------------------------------



೩.ಖರ್ಜೂರದ ಪಾಯಸ

---------------------

ಬೇಕಾಗುವ ವಸ್ತುಗಳು

ಸಣ್ಣಗೆ ಹೆಚ್ಚಿದಖರ್ಜೂರ :ಒಂದು ಲೋಟ
ಬೆಲ್ಲದ ಪುಡಿ :೨ ಚಮಚ
ಏಲಕ್ಕಿ ಪುಡಿ:ಚಿಟಿಕೆ
ಗೋಡಂಬಿ:ನಾಲ್ಕು
ತೆಂಗಿನಕಾಯಿ ಹಾಲು:ಎರಡು ಲೋಟ
ತುಪ್ಪ:ಒಂದು ಚಮಚ

ವಿಧಾನ

೧.ಖರ್ಜೂರದ ಹತ್ತು ಸಣ್ಣ ಚೂರುಗಳನ್ನು ಪಕ್ಕಕ್ಕಿರಿಸಿ,ಉಳಿದ ಚೂರುಗಳನ್ನು ಕಾಲು ಲೋಟ ತೆಂಗಿನಹಾಲಿನ ಜತೆ ರುಬ್ಬಿ.
೨.ರುಬ್ಬಿದ ಮಿಶ್ರಣವನ್ನು ಕುದಿಸಿ.ಇದಕ್ಕೆ ಉಳಿದ ತೆಂಗಿನಹಾಲು,ಬೆಲ್ಲ,ಏಲಕ್ಕಿ ಪುಡಿ ಹಾಕಿ ಕುದಿಸಿ.
೩.ಕುದಿಯುತ್ತಿದ್ದಂತೆ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ಉಳಿದ ಖರ್ಜೂರದ ಚೂರುಗಳಿಂದ ಅಲಂಕರಿಸಿ.


----------------------------------------------------------------
೪.ಗೋಡಂಬಿ ಪಾಯಸ
--------------------------------------------------------------

ಬೇಕಾಗುವ ವಸ್ತುಗಳು

ಗೋಡಂಬಿ:ಎರಡು ಲೋಟ
ಹಾಲು :ಎರಡು ಲೋಟ
ಸಕ್ಕರೆ:ಎರಡು ಲೋಟ
ಬಾದಾಮಿ:೪
ಕೇಸರಿ ದಳ:ನಾಲ್ಕು


ವಿಧಾನ

೧.ಗೋಡಂಬಿಯನ್ನು ಸ್ವಲ್ಪ ನೀರಿನಲ್ಲಿ ರಾತ್ರಿ ಇಡೀ ನೆನೆಸಿಡಿ.ನೆನೆದ ಗೋಡಂಬಿಯನ್ನು ಸ್ವಲ್ಪ ಹಾಲಿನ ಜತೆ ರುಬ್ಬಿ .
೨.ಕೇಸರಿ ದಳಗಳನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ.
೩.ಹಾಲು,ರುಬ್ಬಿದ ಗೋಡಂಬಿ ಇವುಗಳನ್ನು ಸಣ್ಣ ಉರಿಯಲ್ಲಿ ಕುದಿಯಲು ಬಿಡಿ.ಮಿಶ್ರಣವು ಅರ್ಧದಷ್ಟಾಗುವ ತನಕ ಕಲಕುತ್ತಾ ಇರಿ.
೪.ಸಕ್ಕರೆಯನ್ನು ಸೇರಿಸಿ,ನಿಧಾನವಾಗಿ ಕಲಕಿ.
೫.ಇದಕ್ಕೆ ಹೆಚ್ಚಿದ ಬಾದಾಮಿ ಮತ್ತು ನೆನೆಸಿದ ಕೇಸರಿ ದಳಗಳಿಂದ ಅಲಂಕರಿಸಿ.
೬.ಸ್ವಲ್ಪ ತಣಿಸಿ, ತಿನ್ನಲು ಕೊಡಿ

ಇದೇ ರೀತಿ ಬಾದಾಮಿಯ ಪಾಯಸವನ್ನು ಮಾಡಬಹುದು. ಬಾದಾಮಿಯ ಸಿಪ್ಪೆಯನ್ನು ತೆಗೆದ ಬಳಿಕ ಹಾಲಿನ ಜತೆ ರುಬ್ಬಬೇಕು.

--------------------------------------------------------------------------
೫.ಪರಡಿ ಪಾಯಸ
--------------------------------------------------------------------------


ಬೇಕಾಗುವ ವಸ್ತುಗಳು

ಅಕ್ಕಿ :ಒಂದು ಲೋಟ
ತೆಂಗಿನ ಹಾಲು:ಎರಡು ಲೋಟ
ಬೆಲ್ಲದ ಪುಡಿ:ಒಂದು ಲೋಟ
ಏಲಕ್ಕಿ ಪುಡಿ:ಚಿಟಿಕೆ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು
ತುಪ್ಪ :ಒಂದು ಚಮಚ

ವಿಧಾನ

೧.ಅಕ್ಕಿಯನ್ನು ನೀರಿನಲ್ಲಿ ಸುಮಾರು ೩ ಗಂಟೆಗಳ ಕಾಲ ನೆನೆಸಿ,ಸ್ವಲ್ಪ ನೀರಿನ ಜತೆ ರುಬ್ಬಿ.
೨.ಬೆಲ್ಲ,ಕಾಯಿಹಾಲು ಕುದಿಯಲು ಇಡಿ.
೩.ಅದು ಕುದಿಯುತ್ತಿದ್ದಂತೆ ತೂತಿರುವ ಸೌಟಿನ ಮೂಲಕ ರುಬ್ಬಿದ ಅಕ್ಕಿ ಹಿಟ್ಟನ್ನು ಬೀಳಿಸಿ.
೪.ಇನ್ನೂ ಸ್ವಲ್ಪ ಹೊತ್ತು ಕುದಿಯಲು ಬಿಡಿ.
೫.ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.


--------------------------------------

೬.ಸಜ್ಜಿಗೆ ಪಾಯಸ
-------------------------------------

ರವೆ:ಒಂದು ಲೋಟ
ತೆಂಗಿನ ಹಾಲು:ಎರಡು ಲೋಟ
ಸಕ್ಕರೆ:ಒಂದು ಲೋಟ
ತುಪ್ಪ :ಕಾಲು ಲೋಟ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು

ವಿಧಾನ

ರವೆಯನ್ನು ತುಪ್ಪದಲ್ಲಿ ಹುರಿದು, ತೆಂಗಿನ ಹಾಲು,ಸಕ್ಕರೆಯ ಜತೆ ಕುದಿಸಿ.
ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.


------------------------------------------
೭.ಸೇಮಿಗೆ ಪಾಯಸ
-----------------------------------------

ಸೇಮಿಗೆ (ವರ್ಮಿಸೆಲ್ಲಿ) : ಒಂದು ಲೋಟ
ತೆಂಗಿನ ಹಾಲು:ಎರಡು ಲೋಟ
ಸಕ್ಕರೆ:ಒಂದು ಲೋಟ
ತುಪ್ಪ :ಕಾಲು ಲೋಟ
ಗೋಡಂಬಿ,ದ್ರಾಕ್ಷಿ :ತಲಾ ಹತ್ತು


ವಿಧಾನ:
೧.ಒಂದು ಲೋಟ ನೀರು ಕುದಿಯಲು ಬಿಡಿ.
೨.ಸೇಮಿಗೆಯನ್ನು ತುಪ್ಪದಲ್ಲಿ ಹುರಿದು, ಕುದಿಯುತ್ತಿರುವ ನೀರಿಗೆ ಹಾಕಿ.
೩.ತೆಂಗಿನ ಹಾಲು,ಸಕ್ಕರೆ ಸೇರಿಸಿ, ಇನ್ನಷ್ಟು ಕುದಿಸಿ.
೪.ತುಪ್ಪದಲ್ಲಿ ಕರಿದ ದ್ರಾಕ್ಷಿ ,ಗೋಡಂಬಿ ಇವುಗಳನ್ನು ಹಾಕಿ ,ಸೌಟಿನಿಂದ ಒಮ್ಮೆ ಕದಡಿಸಿ.

-----------------------------------------------
೮.ರಬ್ಡೀ
-----------------------------------------------

ಹಾಲು:ನಾಲ್ಕು ಲೋಟ
ಸಕ್ಕರೆ:ಎರಡು ಲೋಟ
ಕೇಸರಿ ಎಸಳು:ನಾಲ್ಕು

ಹಾಲನ್ನು ಕುದಿಸಿ,ಅರ್ಧಕ್ಕೆ ಇಳಿಸಿ. ಸಕ್ಕರೆ ಹಾಕಿ ಕಲಕಿ.
ಹಾಲಿನಲ್ಲಿ ನೆನೆದ ಕೇಸರಿ ಎಸಳುಗಳನ್ನು ಹಾಕಿ.
ಕತ್ತರಿಸಿದ ಬಾದಾಮಿ ಚೂರುಗಳಿಂದ ಅಲಂಕರಿಸಿ.


ಬೇಕಿದ್ದರೆ ಇದಕ್ಕೆ ಸ್ವಲ್ಪ ರೋಸ್ ಎಸೆನ್ಸನ್ನು ಹಾಕಬಹುದು.


--------------------------------------------------------
೯.ಬೀಟ್ರೂಟ್ ಪಾಯಸ
-------------------------------------
ಬೀಟ್ರೂಟನ್ನು ಸಣ್ಣಗೆ ತುರಿದು,ಹಾಲಿನಲ್ಲಿ ಬೇಯಿಸಿ, ಸಕ್ಕರೆ ಹಾಕಿ ಕಲಕಿ.


----------------
೧೦.ತಂಬಿಟ್ಟು
-----------------


ಅಕ್ಕಿ,ಬೆಲ್ಲ,ತೆಂಗಿನ ತುರಿ:ತಲಾ ಒಂದು ಲೋಟ
ಅಕ್ಕಿಯನ್ನು ಸುಮಾರು ಒಂದು ಗಂಟೆಕಾಲ ನೀರಿನಲ್ಲಿ ನೆನೆಸಿ,ಬಳಿಕ ಬೆಲ್ಲ,ತೆಂಗಿನ ತುರಿಯ ಜತೆ ರುಬ್ಬಿ.ತಂಬಿಟ್ಟು ತಯಾರು.ಇದನ್ನು ನಾಗರಪಂಚಮಿಗೆ ಮಾಡುತ್ತಾರೆ.

Tuesday, May 24, 2011

ಕೇರಳ ಅಡಿಗೆ

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಕೇರಳದ ಅಡಿಗೆಯಲ್ಲಿ ತೆಂಗು ಮತ್ತು ತೆಂಗಿನ ಎಣ್ಣೆಯ ಬಳಕೆ ಅತಿ ಹೆಚ್ಚು.
------------------------------------------------------------
೧.ಅವಿಯಲ್
--------------------------------------------


ಅವಿಯಲ್ ಎನ್ನುವುದು ಮಿಶ್ರ ತರಕಾರಿಗಳ ಮೇಲೋಗರ.
ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ಸುವರ್ಣ ಗೆಡ್ಡೆ: ಒಂದು ಲೋಟ
ಬಾಳೆಕಾಯಿ : ೨
ಕ್ಯಾರೆಟ್: ೧
ಹೆಚ್ಚಿದ ಪಡುವಲಕಾಯಿ : ಅರ್ಧ ಲೋಟ
ಕುಂಬಳಕಾಯಿ ,ಬೀನ್ಸ್: ತಲಾ ಅರ್ಧ ಲೋಟ
ನುಗ್ಗೆಕಾಯಿ : ೨
ಹಸಿ ಮೆಣಸು : ೨
ಅರಸಿನ :ಚಿಟಿಕೆ
ತೆಂಗಿನೆಣ್ಣೆ : ೨ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಹುಣಸೆ ರಸ : ೨ ಚಮಚ ಅಥವಾ ಹಸಿ ಮಾವಿನ ಹೋಳು : ಒಂದು
ಕರಿ ಬೇವಿನೆಲೆ : ೧೦

ಅರೆಯಲು :
ತೆಂಗಿನ ತುರಿ : ೨ ಲೋಟ
ಜೀರಿಗೆ : ಅರ್ಧ ಚಮಚ
ಸಣ್ಣ ಈರುಳ್ಳಿ : ೫
ಹಸಿ ಮೆಣಸು : ೧

ವಿಧಾನ
೧.ಸೂಚಿಸಿದ ಎಲ್ಲ ತರಕಾರಿಗಳನ್ನು ಮತ್ತು ಹಸಿಮೆಣಸನ್ನು ಉದ್ದಕ್ಕೆ ಹೆಚ್ಚಿ,ಬೇಯಿಸಿ ಇಟ್ಟುಕೊಳ್ಳಿ.
೨. ಅರೆಯಲು ಸೂಚಿಸಿದ ಎಲ್ಲ ಸಾಮಗ್ರಿಗಳನ್ನು ರುಬ್ಬಿ .
೩.ಈಗ ಬೆಂದ ತರಕಾರಿಗಳ ಜತೆ ರುಬ್ಬಿದ ಮಿಶ್ರಣ ಮತ್ತು ಅರಸಿನ ,ಉಪ್ಪು ,ಕರಿ ಬೇವಿನೆಲೆ ಹುಣಸೆ ರಸ ಅಥವಾ ಮಾವಿನ ಹೋಳನ್ನು ಹಾಕಿ ಮತ್ತಷ್ಟು ಬೇಯಿಸಿ.
೪.ಈಗ ಇದಕ್ಕೆ ತೆಂಗಿನೆಣ್ಣೆ ಸೇರಿಸಿ, ಒಲೆ ಆರಿಸಿ.
೫.ಬಿಸಿ ಬಿಸಿ ಅನ್ನದ ಜತೆ ಇದು ಬಹಳ ರುಚಿ.

ಸೂಚನೆ :
೧.ಹಲವು ತರಕಾರಿಗಳು ಸ್ವಲ್ಪ ಸ್ವಲ್ಪ ಉಳಿದಿದ್ದರೆ, ಸಾಮಾನ್ಯವಾಗಿ ಅವಿಯಲ್ ಮಾಡುವುದು ರೂಢಿ. ತರಕಾರಿ ಬೆಲೆ ಗಗನಕ್ಕೆರುತ್ತಿರುವಾಗ ಅವಿಯಲ್ ಮಾಡಿದರೆ ಅಳಿದುಳಿದ ತರಕಾರಿಯೂ ವ್ಯರ್ಥವಾಗುವುದಿಲ್ಲ. ರುಚಿಗೂ ಕೊರತೆಯಿಲ್ಲ!
೨.ಸುವರ್ನಗೆಡ್ಡೆಯ ಬದಲು ಕೆನೆ ಗೆಡ್ಡೆಯನ್ನು ಬಳಸಬಹುದು. ಕೆಲವೆಡೆ ಬಟಾಣಿಯನ್ನು ಸೇರಿಸುವುದೂ ಇದೆ.


----------------------------------------------------------------------------
2. ನೇಂದ್ರ ಬಾಳೆ ಹಣ್ಣಿನ ಬಜ್ಜಿ
-----------------------------------------------------------------------



ನೇಂದ್ರ ಬಾಳೆ ಹಣ್ಣು :೨
ಕಡ್ಲೆ ಹಿಟ್ಟು : ಒಂದು ಲೋಟ
ಅಕ್ಕಿ ಹಿಟ್ಟು : ಕಾಲು ಲೋಟ
ಮೆಣಸಿನ ಹುಡಿ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ವಿಧಾನ
೧.ನೇಂದ್ರ ಬಾಳೆ ಹಣ್ಣನ್ನು ಚಕ್ರಾಕಾರವಾಗಿ ಹೆಚ್ಚಿ.
೨.ಕಡ್ಲೆ ಹಿಟ್ಟು,ಅಕ್ಕಿ ಹಿಟ್ಟು, ಮೆಣಸಿನ ಹುಡಿ,ಉಪ್ಪು ಮತ್ತು ನೀರು ಸೇರಿಸಿ ಚೆನ್ನಾಗಿ ಕಲಕಿ. ಮಿಶ್ರಣವು ನೀರು ನೀರಾಗಿರಬಾರದು.ಸ್ವಲ್ಪ ದಪ್ಪಕ್ಕಿರಬೇಕು.
೩.ಎಣ್ಣೆಯನ್ನು ಬಿಸಿ ಮಾಡಿ.
೪.ಹೆಚ್ಚಿದ ನೇಂದ್ರ ಬಾಳೆ ಹಣ್ಣನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಕರಿಯಿರಿ.



---------------------------------------------------------------
೩.ಓಲನ್
--------------------------------------------------------------
ಇದು ಕೇರಳದ ಸಾಂಪ್ರದಾಯಿಕ ಖಾದ್ಯ. ಓಣಂ ಸಂದರ್ಭದಲ್ಲಿ ಇದನ್ನು ತಯಾರಿಸುತ್ತಾರೆ.

ಬೇಕಾಗುವ ಸಾಮಗ್ರಿಗಳು
ಅಲಸಂದೆ ಕಾಳು : ಅರ್ಧ ಲೋಟ
ಸೋರೆಕಾಯಿ ಹೋಳು : ಒಂದು ಲೋಟ
ಚೀನೀಕಾಯಿ ಹೋಳು : ಒಂದು ಲೋಟ
ಬಾಳೆಕಾಯಿ ಹೋಳು : ಅರ್ಧ ಲೋಟ
ಹಸಿ ಮೆಣಸು : ಒಂದು
ತೆಂಗಿನ ಕಾಯಿ : ೧
ಉಪ್ಪು :ರುಚಿಗೆ ತಕ್ಕಷ್ಟು
ಕರಿ ಬೇವಿನೆಲೆ : ಹತ್ತು

೧.ತೆಂಗಿನ ತುರಿಯನ್ನು ರುಬ್ಬಿ,ಹಾಲು ತೆಗೆದು ಇಟ್ಟುಕೊಳ್ಳಿ.
೨.ಅಲಸಂದೆ ಕಾಳನ್ನು ೪-೫ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.ಬಳಿಕ ಇವುಗಳನ್ನು ಉಪ್ಪು ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ
೩.ತೆಂಗಿನ ಹಾಲನ್ನು ಎರಡು ಸಮ ಪಾಲುಗಳಾಗಿ ಮಾಡಿ. ಒಂದನೇ ಅರ್ಧ ಭಾಗದಲ್ಲಿ ತರಕಾರಿಗಳನ್ನು ಮತ್ತು ಹಸಿ ಮೆಣಸನ್ನು ಬೇಯಿಸಿ. ಉಪ್ಪು ಮತ್ತು ಕರಿಬೇವಿನೆಲೆ ಹಾಕಿ.
೪.ತರಕಾರಿಗಳು ಬೇಯುತ್ತಿದ್ದಂತೆ ಇದಕ್ಕೆ ಬೇಯಿಸಿದ ಅಲಸಂದೆ ಕಾಳನ್ನು ಸೇರಿಸಿ.
೫.ಬಳಿಕ ಉಳಿದ ತೆಂಗಿನ ಹಾಲು ಸೇರಿಸಿ, ಮಂದ ಉರಿಯಲ್ಲಿ ಬೇಯಿಸಿ. ಮಿಶ್ರಣವು ಸ್ವಲ್ಪ ದಪ್ಪ ಆಗುವ ತನಕ ಬೇಯಿಸಬೇಕು.


--------------------------------------------------------------
೪.ತೋರನ್
----------------------------------------------------------------

ಬೀನ್ಸ್ : ೧ ಲೋಟ
ಕ್ಯಾರೆಟ್ : ಒಂದು ಲೋಟ
ಸಣ್ಣ ನೀರುಳ್ಳಿ : ಅರ್ಧ ಲೋಟ
ತೆಂಗಿನ ತುರಿ :೫ ಚಮಚ
ಸಾಸಿವೆ :ಅರ್ಧ ಚಮಚ
ಜೀರಿಗೆ : ಒಂದು ಚಮಚ
ಕರಿ ಬೇವು : ಹತ್ತು
ಅರಸಿನ :ಅರ್ಧ ಚಮಚ
ಕೆಂಪು ಮೆಣಸಿನ ಹುಡಿ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ : ಸ್ವಲ್ಪ
ವಿಧಾನ
೧.ಬೀನ್ಸ್, ಕ್ಯಾರೆಟ್ ಮತ್ತು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ.
೨.ತೆಂಗಿನ ತುರಿ, ಜೀರಿಗೆ ,ಕರಿಬೇವಿನೆಲೆ, ಬೆಳ್ಳುಳ್ಳಿ ಯನ್ನು ನೀರು ಹಾಕದೆ ರುಬ್ಬಿ.
೩.ಎಣ್ಣೆಯನ್ನು ಬಿಸಿ ಮಾಡಿ,ಸಾಸಿವೆ ,ಅರಸಿನ, ಕರಿಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ.
೪.ಇದಕ್ಕೆ ಹೆಚ್ಚಿದ ನೀರುಳ್ಳಿಯನ್ನು ಹಾಕಿ, ಅದು ಕಂದು ಬಣ್ಣ ಬರುವ ತನಕ ಹುರಿಯಿರಿ. ಇದಕ್ಕೆ ಬೀನ್ಸ್, ಕ್ಯಾರೆಟ್ ಸೇರಿಸಿ.ಕೆಂಪು ಮೆಣಸಿನ ಹುಡಿ , ಉಪ್ಪು ಮತ್ತು ರುಬ್ಬಿದ ಮಿಶ್ರಣ ಸೇರಿಸಿ,ಮಂದ ಉರಿಯಲ್ಲಿ ಬೇಯಿಸಿ.

-------------------------------------------------------------------------------------------------
೫.ಕಾಳನ್
--------------------------------------------------------------------------------------------------
ಇದು ನಾವು ಮಾಡುವ ಮಜ್ಜಿಗೆ ಹು ಳಿಯನ್ನು ಹೋಲುತ್ತದೆ

ಕೇನೆ ಗಡ್ಡೆ ಅಥವಾ ಸುವರ್ಣ ಗೆಡ್ಡೆ : ಒಂದು ಲೋಟ
ಬಾಳೆಕಾಯಿ : ಒಂದು
ಹಸಿ ಮೆಣಸು : 1
ಮೊಸರು : ಒಂದು ಲೋಟ
ತೆಂಗಿನ ತುರಿ : ಅರ್ಧ ಲೋಟ
ಜೀರಿಗೆ : ಒಂದು ಚಮಚ
ಸಾಸಿವೆ :ಅರ್ಧ ಚಮಚ
ಅರಸಿನ :ಚಿಟಿಕೆ
ಉಪ್ಪು : ರುಚಿಗೆ ತಕ್ಕಷ್ಟು
ತುಪ್ಪ : ೩ ಚಮಚ
ಕೆಂಪು ಮೆಣಸು: ೨
ಕರಿಬೇವು : ೧೦ ಎಸಳು
ಕಾಳು ಮೆಣಸಿನ ಹುಡಿ : ಒಂದು ಚಮಚ

ವಿಧಾನ

೧.ಸುವರ್ಣ ಗೆಡ್ಡೆ ಮತ್ತು ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ.
೨.ತೆಂಗಿನ ತುರಿ ಮತ್ತು ಜೀರಿಗೆಯನ್ನು ನೀರು ಹಾಕದೆ ನುಣ್ಣಗೆ ರುಬ್ಬಿ.
೩.ನೀರಿನಲ್ಲಿ ಕಾಳು ಮೆಣಸಿನ ಪುಡಿಯನ್ನು ಕರಗಿಸಿ,ಇದರಲ್ಲಿ ಹೆಚ್ಚಿದ ತರಕಾರಿಗಳನ್ನು ಸೇರಿಸಿ. ಹಸಿ ಮೆಣಸು,ಉಪ್ಪು ಮತ್ತು ಅರಸಿನ ಪುಡಿ ಹಾಕಿ,ಬೇಯಿಸಿ.
೪.ನೀರು ಕಡಿಮೆಯಾಗುತ್ತ ಬಂದಾಗ ಇದಕ್ಕೆ ತುಪ್ಪ ಹಾಕಿ .ಬಳಿಕ ಮೊಸರನ್ನು ಹಾಕಿ ಕಲಕಿ ,ಬೇಯಿಸಿ.
೫.ಇದು ದಪ್ಪವಾಗುತ್ತ ಬಂದಂತೆ ರುಬ್ಬಿದ ತೆಂಗಿನ ತುರಿ ಯ ಮಿಶ್ರಣವನ್ನು ಹಾಕಿ ,ಕಲಕಿ.
೫.ಕೆಂಪು ಮೆಣಸು , ಸಾಸಿವೆ, ಕರಿಬೇವಿನೆಲೆಯ ಒಗ್ಗರಣೆ ಕೊಡಿ.ಒಲೆ ಆರಿಸಿ,ಕೆಳಗಿಳಿಸಿ.

------------------------------------------------------------------------
೬.ತೆಂಗ ಚಾರು
------------------------------------------
ಟೊಮೇಟೊ :೨
ತೆಂಗಿನ ತುರಿ : ೪ ಚಮಚ
ಅರಸಿನ :ಚಿಟಿಕೆ
ಹಸಿ ಮೆಣಸು : ೨
ನೀರು :ಒಂದು ವರೆ ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಸಾಸಿವೆ : ಒಂದು ಚಮಚ
ಕರಿ ಬೇವಿನೆಲೆ : ೧೦
ಕೆಂಪು ಮೆಣಸು : ೧
ಎಣ್ಣೆ :ಒಂದು ಚಮಚ
ವಿಧಾನ
೧.ಟೊಮೇಟೊಗಳನ್ನು ನೀರಿನಲಿ ಬೇಯಿಸಿ.
೨.ಬೆಂದ ಬಳಿಕ ಇದಕ್ಕೆತೆಂಗಿನ ತುರಿ ,ಹಸಿ ಮೆಣಸು,ಉಪ್ಪು ಸೇರಿಸಿ ಮತ್ತಷ್ಟು ಕುದಿಸಿ.
೩.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸಾಸಿವೆ, ಕೆಂಪು ಮೆಣಸು,ಕರಿ ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ,ಬೇಯುತ್ತಿರುವ ಮಿಶ್ರಣಕ್ಕೆ ಹಾಕಿ. ಒಲೆ ಆರಿಸಿ.

Thursday, May 12, 2011

ನಾಗನ ಕಟ್ಟೆಯಲ್ಲೂ ವೈವಿಧ್ಯ


ಸುಧಾ ೧೯-ಮೇ-೨೦೧೧ -ನಿಮ್ಮ ಪುಟದಲ್ಲಿ ಪ್ರಕಟಿತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಪೂಜೆ ವಿಶೇಷ.ನಾಗ ಬನ, ನಾಗಕಟ್ಟೆ ಎಲ್ಲೆಲ್ಲೂ ಕಂಡು ಬರುತ್ತದೆ. ಪುತ್ತೂರಿನ ಮುರ ಗ್ರಾಮದಲ್ಲಿ ಶಂಖಾಕೃತಿಯ ನಾಗಕಟ್ಟೆಯಿದೆ.ಇದು ನಾಲ್ಕು ಅಡಿ ಉದ್ದವಾಗಿದ್ದು, ನೋಡಲು ಬಲು ಆಕರ್ಷಕವಾಗಿದೆ.

Sunday, May 8, 2011

ಮಾವು ಬಗೆ ಬಗೆ..


ಇವತ್ತಿನ ವಿಜಯಕರ್ನಾಟಕ-ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಲೇಖನ.
೧.ಆಮ್ರ :ಸಂಸ್ಕೃತದಲ್ಲಿ ಆಮ್ರ ಎಂದರೆ ಮಾವು. ಹಸಿ ಆಮ್ರ ಎಂದರೆ ಬೇಯಿಸದೆ ಮಾಡಿದ ಮಾವಿನ ಗೊಜ್ಜು. ಮಾವಿನಲ್ಲಿ ಮಾಡಿದ ಎಲ್ಲಾ ಅಡಿಗೆಯೂ ರುಚಿಕರವಾದುದೇ. ಆಮ್ರಕ್ಕೆ ಗಿರಿಜಾ ಕಲ್ಯಾಣದಲ್ಲಿ ಬರುವ ಉಪವನದ ವರ್ಣನೆಯ ಭಾಗವಿದೆ. "ಸಿರಿತ೦ದಿಕ್ಕಿದಶೋಕೆ , ವಾಗ್ವನಿತೆಯಿಟ್ಟಾಮ್ರಂ  " (೧-೩೧ ) ಆ ವನದಲ್ಲಿ ಲಕ್ಷ್ಮಿಯೇ ಅಶೋಕದ ಗಿಡವನ್ನೂ ಸರಸ್ವತಿಯೇ ಮಾವನ್ನೂ ನೆಟ್ಟು ಬೆಳೆಸಿದ್ದರ೦ತೆ.

--ಇಗೋ ಕನ್ನಡ ನಿಘಂಟು ಪುಟ ಸಂಖ್ಯೆ ೬೬ -ಪ್ರೊ.ಜಿ. ವೆಂಕಟ ಸುಬ್ಬಯ್ಯ

. ೨.  ರಸಾಯನ : ರಾಮಾಯಣದಲ್ಲೂ ಮಾವಿನ ಹಣ್ಣಿನ ಉಲ್ಲೇಖ ಬರುತ್ತದೆ. ಸೀತೆಯನ್ನು ಮರಳಿ ಅಯೋಧ್ಯೆಗೆ ಕರೆತರಲು ಸಹಕರಿಸಿದ ವಾನರ ಸೈನ್ಯಕ್ಕೆ ಶ್ರೀ ರಾಮಚಂದ್ರನು ಔತಣ ಹಾಕಿಸಿದ್ದು, ಅಲ್ಲಿ ಮಾವಿನ ಹಣ್ಣಿನ ರಸಾಯನ ಮಾಡಿದ್ದು, ವಾನರ ಸೇನೆಯ೦ತು ಒಬ್ಬರಿಗಿಂತ ಇನ್ನೊಬ್ಬರು ಮೇಲೆ ಎನ್ನುವಂತೆ ಮಾವಿನ   ಗೊರಟನ್ನು  ಎತ್ತರಕ್ಕೆ ಚಿಮ್ಮಿಸಿದ್ದು -ಔತಣ ಕೂಟ ಕ್ರೀಡಾ ಕೂಟ ವಾದದ್ದು ಈ ಕಥೆಯನ್ನು  ನೀವು ಕೇಳಿಯೇ ಇದ್ದೀರಿ.

೩. "ವಸಂತಕಾಲ ಬಂದಾಗ... ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೇ ಬೇಕು." ಎಂಬ ಜನಪ್ರಿಯ ಚಲನಚಿತ್ರ ಗೀತೆಯನ್ನು ನೀವು ಕೇಳಿರಬಹುದು. ಅಷ್ಟೇ ಏಕೆ ’ಎತ್ತಣ ಮಾಮರ ಎತ್ತಣ ಕೋಗಿಲೆ , ಎತ್ತನಿಂದೆತ್ತಣ ಸ೦ಬ೦ಧವಯ್ಯ ? ಎಂಬ ಪ್ರಸಿದ್ದವಾದ ವಚನವಿದೆ. ಇದಕ್ಕೆ ಹಿನ್ನೆಲೆಯಾಗಿ ಒಂದು ಪುರಾಣ ಕಥೆಯಿದೆ.   ವಿಷ್ಣುವಿಗೆ ಒಮ್ಮೆ ಅಮೃತ ಕುಡಿಯುವ ಆಸೆ ಆಯಿತಂತೆ. ಗರುಡನನ್ನು ಅಮೃತ ತರಲು ಕಳಿಸಿದ. ಗರುಡ ಅಮೃತವನ್ನು ತೆಗೆದುಕೊಂಡು ಬರುವಾಗ ಗಂಧರ್ವ ಕನ್ಯೆಯೋರ್ವಳು ಹೇಗಾದರೂ ಮಾಡಿ ಅಮೃತವನ್ನು ಪಡೆಯಬೇಕೆ೦ದು ಆಸೆ ಪಟ್ಟಳಂತೆ. ಆಕೆ  ಸುಮಧುರ ಕಂಠವನ್ನು ಹೊ೦ದಿದ್ದಾಕೆ. ಆಕೆ ಗರುಡ ನನ್ನು ಹಿಮ್ಬಾಲಿಸುವಾಗ ಒಂದು ಹನಿ ಅಮೃತ ಬಿದ್ದು ಹೋಯಿತು. ಆಕೆ ಅದನ್ನು ಪಡೆಯ ಹೊರಟಾಗ ಅದು ಭೂಮಿ ತಲುಪಿ, ಮಾವಿನ ಮರವಾಯಿತಂತೆ. ಇಷ್ಟೆಲ್ಲಾ ಆಗುವಾಗ ಅಮೃತವನ್ನು ವಿಷ್ಣುವಿಗೆ ತಲುಪಿಸಲು ಗರುಡನಿಗೆ ತಡವಾಯಿತು.  ಇದಕ್ಕೆ ಕಾರಣ ತಿಳಿದ ವಿಷ್ಣು ಆ ಗಂಧರ್ವ ಕನ್ಯೆಗೆ ಆಕೆಯ ಸುಮಧುರ ಸ್ವರ ಹೊರಟು ಹೋಗಲಿ ಮತ್ತು ಆಕೆ ಕಪ್ಪು ಹಕ್ಕಿಯಾಗಿ  ಹುಟ್ಟಲಿ ಎಂದು ಶಾಪ ಕೊಟ್ಟನಂತೆ. ಕಡೆಗೆ ಆಕೆ ಬೇಡಿಕೊಂಡಾಗ ವಸಂತ ಕಾಲದಲ್ಲಿ ಮಾವಿನ ಚಿಗುರನ್ನು ತಿಂದರೆ ನಿನ್ನ ಸ್ವರ ಇ೦ಪಾಗುತ್ತದೆ. ಜಗತ್ತು ನಿನ್ನ ಸ್ವರವನ್ನು ಹೊಗಳುತ್ತದೆ ಎಂದು ಹೇಳಿದನಂತೆ. ಆಕೆ ಹುಟ್ಟಿದ್ದು ಕೋಗಿಲೆಯಾಗಿ.  ಈಗ ಗೊತ್ತಾಯಿತೆ ಮಾವಿಗೂ ಕೋಗಿಲೆಗೂ ಇರುವ ಸಂಬಂಧ !!


4. ಮಾವಿನ ಕಾಯಿ ಎಂದೊಡನೆ ನನ್ನ ಮನಸ್ಸು ಬಾಲ್ಯದತ್ತ ಓಡುತ್ತದೆ. ತೋಟದಲ್ಲಿ ,ಗುಡ್ಡೆಯಲ್ಲಿ ಬೆಳೆದ ಮಾವಿನ ಮಿಡಿಗಳನ್ನು ಕಲ್ಲು ಉದುರಿಸಿಯೋ , ಉದ್ದನೆಯ ಕೋಲಿಗೆ ಕಟ್ಟಿದ ಕತ್ತಿಯಿಂದಲೋ ಬೀಳಿಸಿ, ಅದನ್ನು ಕತ್ತರಿಸಿ , ಹದವಾಗಿ ಉಪ್ಪು ಖಾರ ಸವರಿ ತಿನ್ನುವ ಪರಿ ಇದೆಯಲ್ಲ ಅದಕ್ಕೆ ಅದುವೇ ಸಾಟಿ. ಅದೊಂದು ರೀತಿಯ ಪರಮ ಸುಖ. ಹಾಗೇ ತಿನ್ನುವಾಗ ಖಾರ ನೆತ್ತಿಗೇರಿ, ಕಣ್ಣು ಮೂಗೆಲ್ಲ ಕೆಂಪಾದರೂ ನಮ್ಮ ಬಾಯಿಚಪಲ ಬಿಡಬೇಕಲ್ಲ !!  ಮಾವಿನ ಕಾಯಿ ತಿಂದು ನೀರು ಕುಡಿದರೆ ಜ್ವರ ಬರುತ್ತದೆ ಅಂತ ಒಂದು ಮಾತಿತ್ತು. ಅದು ಎಷ್ಟರ ಮಟ್ಟಿಗೆ ನಿಜವೆಂದು ಈಗಲೂ ನನಗೆ ಗೊತ್ತಿಲ್ಲ.  ಈಗ ಇದನ್ನು ಓದಿ ನಿಮಗೆ ಬಾಯಿಯಲ್ಲಿ ನೀರೂರಿದರೆ ನಾನು ಜವಾಬ್ದಾರಳಲ್ಲ!!


5. ಹಸಿದು ಹಲಸು , ಉಂಡು ಮಾವು ಎಂಬ ಗಾದೆ ಮಾತಿದೆ.  ’ಮಂತ್ರಕ್ಕೆ ಮಾವಿನಕಾಯಿ ಉದುರದು " ಎಂಬಲ್ಲಿಯೂ ಮಾವು ಪ್ರಸ್ತಾಪವಾಗಿದೆ. ಮಾವಿನ ಕಾಯಿ ಸರ (ಚಿನ್ನದ ಸರ ಕಣ್ರೀ !! ),ಮಾವಿನ ಕಾಯಿ ಬಾರ್ಡರ್ ನ ಸೀರೆಗೆ ಮನಸೋಲದ ಹೆ೦ಗಳೆ ಯರು೦ಟೇ? ತೋರಣ ಕಟ್ಟಲು ಮಾವಿನ ಎಲೆಯ ಬಳಕೆಯಾಗುತ್ತದೆ. ಬೇವಿನ ಕಡ್ಡಿ,ಮಾವಿನ ಎಲೆಗಳಿಂದ ಹಲ್ಲುಜ್ಜುವ ಪರಿಪಾಠವಿದೆ.



೬. ತಳಿರೊಳ್ ನೀನೆ ಬೆಡ೦ಗನೈ ನನೆಗಳೊಳ್
ನೀ೦ ನೀಳನೈ ಪುಷ್ಪ ಸಂ
ಕುಳದೊಳ್ ನೀನೆ ವಿಳಾಸಿಯೈ ಮಿಡಿಗಳೊ
ಳ್ನೀ೦ ಚೆಲ್ವನೈ ಪಣ್ತ ಪ
ಣ್ಗಳಿನೋವೋ ಪೆರತೇನೋ ನೀನೆ ಭುವನ
ಕ್ಕಾಧಾರನೈ ಭಂಗ ಕೋ
ಕಿಳ ಕೀರ ಪ್ರಿಯ ಚೂತ ರಾಜ ತರುಗಳ್
ನಿನ್ನಂತೆ ಚೆನ್ನ೦ಗಳೇ
---ಪಂಪ

೭.ಮಾವಿನ ಕೊನೆ ಮಾವಿನ ನನೆ
ಮಾವಿನ ಪೂ ಮಾವಿನೆಳೆಯ ಮಿಡಿ
ಮಾವಿನ ಕಾಯ್
ಮಾವಿನ ಪಣ್ಣಿಂದೆ ಜನಂ
ಭಾವಿಸೆ ಸರ್ವಾಂಗಸೌಂದರಂ ಮಾವೆಲ್ಲಂ ||

--ಕಾವ್ಯಾವಲೋಕನ

೮. ಮಾವಿನ ಜೀವನ ಚರಿತ್ರೆ :


ಪುದಿದೆಳೆಗಾಯ್ ವಸಂತದ ಮೊದಲ್
ನೆರೆದೊಪ್ಪುವ ದೋರೆಗಾಯ್ ವಸಂತದ
ನಡು ಪಣ್ ವಸಂತದ ಸೆರಗಿಂಗೆ

--ಶಾಂತಿ ಪುರಾಣ

೯. ಎಳೆ ಗಿಳಿವಿಂಡಿನೋದುವ ಮರಂ ಭ್ರಮರಂಗಳ
ಗೀತಶಾಲೆ ಕೆಂ
ದಳಿರ್ಗಳ ಜನ್ಮಭೂಮಿ ವನಲಕ್ಷ್ಮಿಯ
ಪೆರ್ಮಗನೋತಗಲ್ದ ಕೋ
ಮಳೆಯರ ಜೂಜ ಭೂತಳದ ಕಲ್ಪಕುಜಂ
ಸಕಲಾವನೀರುಹಂ
ಗಳ ತಲೆನಾಯಕಂ  ತುರುಗಿ ಬಂದುದು
ಚೂತಕುಜಂ ವಸಂತದೊಳ್
--ಸೂಕ್ತಿ ಸುಧಾರ್ಣವಂ


೧೦. " ಹಸುರುಗಾಯನ್ನು ಉಕ್ಕಿನ ಅಲಗಿನಿಂದ ಉದ್ದುದ್ದವಾಗಿ ಎರಡು ಸಮ ಭಾಗವಾಗುವಂತೆ ಕತ್ತರಿಸಿದಾಗ ಬೀಜವೂ ಇಬ್ಭಾಗವಾಗಿ ,ಬಿಳಿಯದಾಗಿದ್ದ ಬೀಜ ಮಾತ್ರ ನೀಲಿ ಬಣ್ಣಕ್ಕೆ ತಿರುಗುತ್ತದೆ. ಹೀಗಾದ ಹೋಳುಗಳು ಕಣ್ಣುಗಳನ್ನು ಹೋಲುತ್ತವೆ."
--ತಮಿಳು ಕಾವ್ಯ ಅಹನಾನೂರು


೧೧.ಮಾವಿನ ಕಾಯಿಯ ಉಪ್ಪಿನಕಾಯಿ ಎಂದರೆ ಅದೊಂದು ವಿಶಿಷ್ಟ ಬಗೆಯ ಸಂಭ್ರಮ. ಇಡೀ ವರ್ಷಕ್ಕಾಗುವಷ್ಟು ಉಪ್ಪಿನಕಾಯಿ ಮಾಡುವುದೆಂದರೆ ಸಣ್ಣ ವಿಷಯವೇ ? ಹಿಂದೆಲ್ಲಾ ಈಗಿನ ಥರ ಬಣ್ಣ ಬಣ್ಣದ ಬಾಟಲ್ಗಳಲ್ಲಿ ಉಪ್ಪಿನಕಾಯಿಗಳು ಸಿಗುತ್ತಿರಲಿಲ್ಲವೋ ಅಥವಾ ಆಗ ಉಪ್ಪಿನಕಾಯಿ ಎನ್ನುವುದು ಖರೀದಿ ಮಾಡಿ ತರುವ ವಸ್ತುವಾಗಿರಲಿಲ್ಲವೋ ಏನೋ ,ಪ್ರತಿ ಮನೆಯಲ್ಲಿ ಉಪ್ಪಿನಕಾಯಿ ಮಾಡುವುದು ಕಡ್ಡಾಯವಾಗಿತ್ತು. ಮಾವಿನ ಕಾಯಿ ಬಿಡುವ ಕಾಲದಲ್ಲಿ ಹೆಂಗಳೆಯರು ಭೇಟಿಯಾದಾಗಲೆಲ್ಲ " ನಿಮಗೆ ಸಿಕ್ಕಿತಾ ಮಾವಿನ ಮಿಡಿ " ಎಂತಲೋ ಅಥವಾ  " ನಿಮ್ಮಲ್ಲಿ ಉಪ್ಪಿನಕಾಯಿ ಆಯ್ತಾ " ಎಂತಲೋ ಪರಸ್ಪರ ಕುಶಲ ಸಮಾಚಾರ ವಿನಿಮಯವಾಗುತ್ತಿತ್ತು.

ಉಪ್ಪಿನಕಾಯಿ ತಯಾರಿ ಎಂದರೆ ಒಂಥರ ವ್ರತದ ಹಾಗೇ. ಪೂಜೆಗೆ ಮಡಿ ಎಂದು ಜಾಗ್ರತೆ ವಹಿಸುತ್ತಾರಲ್ಲ. ಅದಕ್ಕಿಂತಲೂ ಒಂದು ಕೈ ಮೇಲೆಯೇ. ತಯಾರಿಯ ಯಾವುದೇ ಹಂತದಲ್ಲಿಯೂ ಅದಕ್ಕೆ ನೀರು ಸೋಕುವಂತಿಲ್ಲ. ನಮಗೆಲ್ಲ ಉಪ್ಪಿನಕಾಯಿಯ ಭರಣಿಯ ಹತ್ತಿರ ಹೋಗಲೂ ಅವಕಾಶವಿರಲಿಲ್ಲ. ಕಡೆಗೊಂದು ದಿನ ಉಪ್ಪಿನಕಾಯಿ ತಯಾರಾದಾಗ ಅನ್ನದ ಜತೆ ತುಪ್ಪ ಹಾಕಿ  ,ಹೊಸ ಉಪ್ಪಿನಕಾಯಿಯ ಜತೆ ಕಲಸಿ ಉಣ್ಣು ವುದಿದೆಯಲ್ಲ ,ಅದು ಸ್ವರ್ಗಕ್ಕೆ ಮೂರೇ ಗೇಣು!


ಬಿ.ಜಿ.ಎಲ್ ಸ್ವಾಮಿಯವರು ತಮ್ಮ ಹಸಿರು ಹೊನ್ನು ಕೃತಿಯಲ್ಲಿ ಇದರ ಬಗ್ಗೆ ಒಂದು ಪ್ರಸಂಗವನ್ನು ವಿವರಿಸುತ್ತಾರೆ " ಗಂಟೆ ಒಂದೂವರೆಯಾಗಿತ್ತು. ಹುಡುಗರ ಮನಸ್ಸೆಲ್ಲ ಬುತ್ತಿಯ ಮೇಲೆ ಕೇಂದ್ರೀಕರಿಸಿತು. ತಿಳಿನೀರಿನ ಝರಿಯೊಂದರ ತಡಿಯಲ್ಲಿ ಕುಳಿತು ಊಟದ ಪೊಟ್ಟಣಗಳನ್ನು ಬಿಚ್ಚಿದೆವು. ಸೊಗಸಾದ ಮೊಸರನ್ನದ ಜತೆ ಷಡ್ರಸೋಪೇತವಾದ ’ಮಾವಡು!! ಹಳೆ ಕಾಲದಿಂದ ಬಂದಿರುವ ಸಂಪ್ರದಾಯದ ಜೋಡಿಯೇ! ಆದರೂ ಅದೇನು ಸೃಷ್ಟಿಯೋ , ನಮ್ಮ ನಾಲಗೆ ದಿನದಿನವೂ ಹೊಸ ಹೊಸ ರುಚಿಯಿಂದ ಕೂಡಿರುವಂಥ ಜೋಡಿ! ಮಾವಿನ ಉಪ್ಪಿನಕಾಯಿ ಉಷೆಯಂತೆ ಹಳೆಯದು. ದಿನ ದಿನವೂ ಹೊಸ ಹೊಸ ರುಚಿ ಕೊಡುವಂಥದು.  ಭಾಮೆಗೆ ಪಂಚ ಪ್ರಾಣವಾಗಿದ್ದ ಮಾವಡು ಅವಳ ಪ್ರಾಣಕ್ಕೆ ಊನ ತರುವಂಥ ಸ್ಥಿತಿಯನ್ನು ತಂದಿತು.  ಆಕೆ ಮೊಸರನ್ನದ ತುತ್ತಿನೊಂದಿಗೆ ಮಾವಡುವನ್ನು ನುಂಗಿದಳು.  ಮಾವಡು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತು. ಕೂಗಿಕೊಳ್ಳಲು ಸಾಧ್ಯವಾಗದೆ ತೇಲುಗಣ್ಣು ಮಾಡಿಕೊಂಡು ಕೈಕಾಲುಗಳನ್ನು ಝಾಡಿಸಿದಳು. ಗಂಟಲಲ್ಲಿ ಸಿಕ್ಕಿಕೊಂಡಾಗ ಬೆನ್ನಿನ ಮೇಲೆ ಗುದ್ದು ಕೊಡುವ ಸಿದ್ಧೌಷಧ ಎಲ್ಲಿ ಹುಟ್ಟಿಕೊಂಡಿತೋ ?  ಅವರಲ್ಲಿ ಯಾರೋ ಆ ಪ್ರಯೋಗ ಮಾಡಿದರು. ಮಾವಡು ಅನ್ನನಾಳಕ್ಕೆ ಇಳಿಯಿತು"



ಮಾವು ಬಗೆ ಬಗೆ

ಹಣ್ಣುಗಳ ರಾಜ ಮಾವು. ಈಗ ಮಾವಿನ ಹಣ್ಣಿನ ಕಾಲ. ಚಟ್ನಿ,ಗೊಜ್ಜು,ಉಪ್ಪಿನ ಕಾಯಿ,  ರಸಾಯನ, ತಂಬುಳಿ, ಸಾಸಿವೆ,ಮೆಣಸುಕಾಯಿ ಒಂದೇ ಎರಡೇ, ಮಾವಿನಿಂದ ಮಾಡಬಹುದಾದ ಖಾದ್ಯಗಳು ಹಲವಾರು. ಬನ್ನಿ ಮಾವಿನ ಬಗೆ ಬಗೆಯ ಖಾದ್ಯಗಳನ್ನು ಮಾಡುವ ವಿಧಾನವನ್ನು ಅರಿಯೋಣ.


---------------------------------
೧.ಮಾವಿನ ಹಣ್ಣಿನ ಸೀಕರಣೆ
--------------------------------

ಬೇಕಾಗುವ ಸಾಮಗ್ರಿಗಳು

ಮಾವಿನ ಹಣ್ಣು (ಕಸಿ ಮಾವು ) : ೩
ಸಕ್ಕರೆ : ೩ ಚಮಚ
ಏಲಕ್ಕಿ ಕಾಳು : ೪
ಬಾದಾಮಿ : ೫
ಹಾಲು: ಅರ್ಧ ಲೋಟ

ವಿಧಾನ :
೧.ಮಾವಿನ ಹಣ್ಣಿನ ಸಿಪ್ಪೆ ಮತ್ತು ಗೊರಟನ್ನು  ಹಿಂಡಿ,ರಸ ತೆಗೆಯಿರಿ.
೨.ಸಕ್ಕರೆ,ಏಲಕ್ಕಿ,ಬಾದಾಮಿ,ಹಾಲು ಮತ್ತು ಮಾವಿನ ಹಣ್ಣಿನ ರಸವನ್ನು ಚೆನ್ನಾಗಿ ರುಬ್ಬಿ. ಮಾವಿನ ಸೀಕರಣೆ ತಯಾರಾಯಿತು. ಇದು ಚಪಾತಿ, ಪೂರಿಯ ಜತೆ  ತುಂಬಾ ಚೆನ್ನಾಗಿರುತ್ತದೆ.

---------------------------------
೨.ಮಾವಿನ ಹಣ್ಣಿನ ಸಾಸಿವೆ
---------------------------------
ಕಾಡು ಮಾವಿನ ಹಣ್ಣು : ೧೦
ತೆಂಗಿನ ಕಾಯಿ ತುರಿ :ಕಾಲು ಲೋಟ
ಸಾಸಿವೆ: ಒಂದು ಚಮಚ
ಕೆಂಪು ಮೆಣಸು: ೧

ಬೆಲ್ಲ :ಸ್ವಲ್ಪ ( ಮಾವಿನ ಹಣ್ಣು ಹುಳಿಯನ್ನು ಅವಲಂಬಿಸಿ ಇದರ ಪ್ರಮಾಣವನ್ನು ಸರಿ ಹೊಂದಿಸಿಕೊಳ್ಳಿ)
ಉಪ್ಪು:ರುಚಿಗೆ ತಕ್ಕಷ್ಟು


ವಿಧಾನ :

೧.ಮಾವಿನ ಹಣ್ಣುಗಳನ್ನು ಹಿಂಡಿ ರಸ ತೆಗೆಯಿರಿ.
೨.ತೆಂಗಿನ ತುರಿ, ಸಾಸಿವೆ,ಕೆಂಪು ಮೆಣಸು,ಬೆಲ್ಲ,ಉಪ್ಪು ಇವುಗಳನ್ನು ಸ್ವಲ್ಪ ನೀರು ಹಾಕಿ ರುಬ್ಬಿ.
೩.ರುಬ್ಬಿದ ಮಿಶ್ರಣವನ್ನು ಮಾವಿನ ರಸದ ಜತೆ ಮಿಶ್ರ ಮಾಡಿ.ಇದಕ್ಕೆ ನಾಲ್ಕು ಐದು ಗೊರಟುಗಳನ್ನು ಹಾಕಬೇಕು.ಮಾವಿನ ಸಾಸಿವೆ ತಯಾರು.ಮಾವಿನ ಹಣ್ಣಿನ ಸಮಯದಲ್ಲಿ ಸಮಾರಂಭಗಳಿಗೂ ಇದನ್ನು ಮಾಡುತ್ತಾರೆ. ಮಾವಿನ ಸಾಸಿವೆ ಮಾಡಿದಾಗ ಹೆಚ್ಚು ಅನ್ನ ಹೊಟ್ಟೆಗೆ ಹೋಗುತ್ತದೆ! ಅಷ್ಟು ರುಚಿ ಅದು!!


---------------------------------
೩.ಮಾವಿನ ಹಣ್ಣಿನ ಸಿಹಿ ಗೊಜ್ಜು
--------------------------------

ಕಾಡು ಮಾವಿನ ಹಣ್ಣು : ೧೦
ತೆಂಗಿನ ಕಾಯಿ ತುರಿ :ಕಾಲು ಲೋಟ
ಅಕ್ಕಿ ಹಿಟ್ಟು : ಒಂದು ಚಮಚ
ಬೆಲ್ಲ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ

೧.ಮಾವಿನ ಹಣ್ಣುಗಳನ್ನು ಹಿಂಡಿ ರಸ ತೆಗೆಯಿರಿ.
೨.ತೆಂಗಿನ ತುರಿ,ಅಕ್ಕಿ ಹಿಟ್ಟು ,ಬೆಲ್ಲ ಮತ್ತು ಉಪ್ಪು ಇವುಗಳನ್ನು ನುಣ್ಣಗೆ ರುಬ್ಬಿ.
೩.ಮಾವಿನ ರಸ ಮತ್ತು ಮಾವಿನ ಗೊರಟುಗಳನ್ನು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಇದು ಬೇಯುತ್ತಿದ್ದಂತೆ ಇದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಂದ ಉರಿಯಲ್ಲಿ ಬೇಯಿಸಿ.ಮಾವಿನ ಸಿಹಿ ಗೊಜ್ಜು ತಯಾರಾಯಿತು.


----------------------------------
೪.ಮಾವಿನ ಹಣ್ಣಿನ ಮೆಣಸು ಕಾಯಿ
----------------------------------
ಕಾಡು ಮಾವಿನ ಹಣ್ಣು : ೧೦
ಬೆಲ್ಲ: ಎರಡು ಲಿಂಬೆ ಹಣ್ಣಿನ ಗಾತ್ರ ( ಮಾವಿನ ಹಣ್ಣು ಹುಳಿ ಜಾಸ್ತಿ ಇದ್ದರೆ, ಬೆಲ್ಲ ಜಾಸ್ತಿ ಹಾಕಬೇಕು. )
ಹಸಿ ಮೆಣಸು ; ೨
ತೆಂಗಿನ ತುರಿ: ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಮಸಾಲೆಗೆ:
ಕೆಂಪು ಮೆಣಸು: ೪
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಎಳ್ಳು: ೩ ಚಮಚ
ಮೆಂತೆ: ೧೦ ಕಾಳು
ಕೊತ್ತಂಬರಿ ಕಾಳು :೧ ಚಮಚ
ಇಂಗು: ಚಿಟಿಕೆ
ಕರಿಬೇವಿನೆಲೆ ಎಸಳು : ೧೦
ಎಣ್ಣೆ :ಒಂದು ಚಮಚ


ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕೆಂಪು ಮೆಣಸು :೧
ಕರಿಬೇವಿನೆಲೆ ಎಸಳು : ೧೦


ವಿಧಾನ :
೧.ಎಳ್ಳನ್ನು ಎಣ್ಣೆ ಹಾಕದೆ  ಚೆನ್ನಾಗಿ ಹುರಿಯಿರಿ.
೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಕೆಂಪು ಮೆಣಸು,ಕಡ್ಲೆ ಬೇಳೆ,ಉದ್ದು,ಮೆಂತೆ,ಕೊತ್ತಂಬರಿ ಕಾಳು ಇವುಗಳನ್ನು ಹುರಿಯಿರಿ.ಇದಕ್ಕೆ ಇಂಗು,ಅರಸಿನ,ಕರಿಬೇವಿನೆಲೆ ಸೇರಿಸಿ ಮತ್ತೊಂದು ನಿಮಿಷ ಹುರಿಯಿರಿ.
೩. ಹಂತ (೧) ಮತ್ತು (೨) ರಲ್ಲಿ ಸೂಚಿಸಿದ ಹುರಿದ ಸಾಮಗ್ರಿಗಳನ್ನು ತೆಂಗಿನ ತುರಿಯ ಜತೆ ನೀರು ಹಾಕಿ ಚೆನ್ನಾಗಿ ರುಬ್ಬಿ. ಮಸಾಲೆ ತಯಾರಾಯಿತು.
೪.ಕಾಡು ಮಾವಿನ ಹಣ್ಣಿನ ಸಿಪ್ಪೆ ತೆಗೆಯಿರಿ.ಸಿಪ್ಪೆಯನ್ನು ಹಿಂಡಿ ರಸ ತೆಗೆಯಿರಿ.
೫.ಗೊರಟು ಮತ್ತು ಸಿಪ್ಪೆಯ ರಸ ಇದಕ್ಕೆ ಅರ್ಧ ಲೋಟ ನೀರು ಹಾಕಿ ಬೇಯಿಸಿ. ಇದಕ್ಕೆ ಹಸಿ ಮೆಣಸು,ಬೆಲ್ಲ, ಉಪ್ಪು ಸೇರಿಸಿ ಮತ್ತಷ್ಟು ಹೊತ್ತು ಬೇಯಿಸಿ.ಇದಕ್ಕೆ ರುಬ್ಬಿಟ್ಟ ಮಸಾಲೆಯನ್ನು  ಸೇರಿಸಿ. ಮಂದ ಉರಿಯಲ್ಲಿ ೫ ನಿಮಿಷಗಳ ಕಾಲ ಬೇಯಿಸಿ.
೬.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನ ಎಸಳು ಹಾಕಿ,ಒಗ್ಗರಣೆ ತಯಾರಿಸಿ. ಇದನ್ನು ಬೇಯುತ್ತಿರುವ ಮಾವಿನ ಮಿಶ್ರಣಕ್ಕೆ ಹಾಕಿ.

ಈಗ ರುಚಿ ರುಚಿಯಾದ ಮಾವಿನ ಹಣ್ಣಿನ ಮೆಣಸುಕಾಯಿ ತಯಾರು.



--------------------------------------------------
೫.ಮಾವಿನ ಹಣ್ಣಿನ ತೊಕ್ಕು
-------------------------------------------------

ಬೇಕಾಗುವ ಸಾಮಗ್ರಿಗಳು


ಕಾಡು ಮಾವಿನ ಹಣ್ಣು : ೧೦
ಉಪ್ಪು :ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನ ಪುಡಿ : ೨ ಚಮಚ

ವಿಧಾನ:

೧.ಕಾಡು ಮಾವಿನ ಹಣ್ಣಿನ ರಸ ತೆಗೆಯಿರಿ.
೨.ಇದಕ್ಕೆ ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ,ಸಣ್ಣ ಉರಿಯಲ್ಲಿ ಬೇಯಿಸಿ. ಇದು ಬೇಯುತ್ತಿದ್ದಂತೆ ಗಟ್ಟಿಯಾಗುತ್ತಾ ಬರುತ್ತದೆ. ಆಗಾಗ್ಗೆ ಸೌಟಿನಿಂದ ಕೈಯಾಡಿಸಿ. ಮಿಶ್ರಣವು ಗಟ್ಟಿಯಾಗುತ್ತಾ ಬಂದಂತೆ ಒಲೆ ಆರಿಸಿ.

ಇದು ೨-೩ ತಿಂಗಳುಗಳ ಕಾಲ ಕೆಡುವುದಿಲ್ಲ. ಅನ್ನದ ಜತೆ ಹೆಚ್ಚಿದ ನೀರುಳ್ಳಿ,ಎಣ್ಣೆ ಹಾಕಿ ತಿಂದರೆ ಬಲು ಸೊಗಸು.


-------------------------------------
೬.ಮಾವಿನ ಹಣ್ಣಿನ ರಸಾಯನ
-----------------------------------

ಕಶಿ ಮಾವಿನ ಹಣ್ಣು : ೨
ಬೆಲ್ಲದ ಪುಡಿ : ಒಂದು ಲೋಟ
ಸಕ್ಕರೆ : ಕಾಲು ಲೋಟ
ಏಲಕ್ಕಿ ಪುಡಿ:ಚಿಟಿಕೆ
ತೆಂಗಿನ ಹಾಲು : ಒಂದು ವರೆ  ಲೋಟ
ಗೋಡಂಬಿ : ೧೦
ಬಾದಾಮಿ :೧೦

ವಿಧಾನ

೧.ಕಶಿ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು , ಹಣ್ಣನ್ನು ಸಣ್ಣ ಸಣ್ಣ  ಹೋಳುಗಳಾಗಿ ಕತ್ತರಿಸಿ.
೨. ಪುಡಿ ಮಾಡಿದ ಬೆಲ್ಲ ,ಸಕ್ಕರೆ,ಏಲಕ್ಕಿ ಪುಡಿ ಇವುಗಳನ್ನು ತೆಂಗಿನಹಾಲಿನಲ್ಲಿ ಚೆನ್ನಾಗಿ ಕಲಕಿ,ಕರಗಿಸಿ.
೩.ಇದಕ್ಕೆ ಹೆಚ್ಚಿದ ಮಾವಿನ ಹಣ್ಣಿನ ಹೋಳುಗಳನ್ನು ಸೇರಿಸಿ.
೪. ಗೋಡಂಬಿ ಮತ್ತು ಬಾದಾಮಿಯನ್ನು ಸ್ವಲ್ಪ ಪುಡಿ ಮಾಡಿ ಇದಕ್ಕೆ ಸೇರಿಸಿ.

ಮಾವಿನ ಹಣ್ಣಿನ ರಸಾಯನ ತಯಾರಾಯಿತು.


----------------------------------------
೭.ಮಾವಿನ ಹಣ್ಣಿನ ಬೋಳು ಹುಳಿ
---------------------------------------
ಕಾಡು ಮಾವಿನ ಹಣ್ಣು : ೧೦
ಉಪ್ಪು :ರುಚಿಗೆ ತಕ್ಕಷ್ಟು
ಬೆಲ್ಲ :ಸ್ವಲ್ಪ

ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಕೆಂಪು ಮೆಣಸು: ೪
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ
ಅರಸಿನ :ಚಿಟಿಕೆ
ಜೀರಿಗೆ: ಒಂದು ಚಮಚ

ವಿಧಾನ

೧.ಕಾಡು ಮಾವಿನ ಹಣ್ಣನ್ನು ಹೆಚ್ಚಿ.
೨.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ,ಜೀರಿಗೆ ಕೆಂಪು ಮೆಣಸು,ಉದ್ದು,ಕಡ್ಲೆ ಬೇಳೆ, ಅರಸಿನ ,ಕರಿಬೇವಿನೆಲೆ ಇವುಗಳನ್ನು ಹಾಕಿ ಒಗ್ಗರಣೆ ತಯಾರಿಸಿ .
೩.ಇದಕ್ಕೆ ಕತ್ತರಿಸಿದ ಮಾವಿನ ಹಣ್ಣುಗಳನ್ನು  ಹಾಕಿ. ಸ್ವಲ್ಪ ನೀರು ಹಾಕಿ ಬೇಯಿಸಿ. ಇದು ಬೇಯುತ್ತಿದ್ದಂತೆ ಬೆಲ್ಲ ಮತ್ತು ಉಪ್ಪು ಹಾಕಿ ಮತ್ತಷ್ಟು ಕುದಿಸಿ.


--------------------------------------------
೮.ಮಾವಿನ ಹಣ್ಣಿನ ಮಾಂಬಳ
---------------------------------------------
ಇದು ಮಾವಿನ ಹಣ್ಣಿನ ರಸವನ್ನು ಶೇಖರಿಸಿಡುವ ಒಂದು ವಿಧಾನ.


 ಮಾವಿನ ಹಣ್ಣುಗಳ ರಸ ತೆಗೆದು ಒಂದು ವಸ್ತ್ರದ ಮೇಲೆ ತೆಳುವಾಗಿ ಹರಡಿ ಬಿಸಿಲಲ್ಲಿ ಒಣಗಿಸಬೇಕು. ಮರುದಿನ ಇನ್ನಷ್ಟು ಮಾವಿನ ಹಣ್ಣುಗಳ ರಸವನ್ನು ಈ ಪದರದ ಮೇಲೇ ಹರಡಿ, ಒಣಗಿಸಬೇಕು. ಈ ರೀತಿ ೬-೭ ದಿನಗಳ ಕಾಲ ನಿತ್ಯವೂ ಮಾವಿನ ಹಣ್ಣುಗಳ ರಸವನ್ನು ಒಣಗಿಸುತ್ತಾ ಬರಬೇಕು. ಬಳಿಕ ಇದನ್ನು ನಿತ್ಯವೂ ಸುಮಾರು ಹತ್ತು ದಿನಗಳ ಕಾಲ ಬಿಸಿಲಲ್ಲಿ ಒಣಗಿಸಬೇಕು. ಈಗ ಇದನ್ನು ವಸ್ತ್ರದಿಂದ ಮಾವಿನ ಪದರವಾಗಿ ಎಬ್ಬಿಸಬಹುದು. ಇದಕ್ಕೆ ಮಾಂಬಳ ಎಂದು ಹೆಸರು.ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿ,ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿದರೆ, ಮಳೆಗಾಲದಲ್ಲಿ ಮಾವು ಇರದ ಕಾಲದಲ್ಲಿ ಹಾಗೇ  ತಿನ್ನಲು ಬಲು ರುಚಿ.

ಇದರಿಂದ ಗೊಜ್ಜು ಕೂಡ ತಯಾರಿಸಬಹುದು. ತೆಂಗಿನ ತುರಿಯ ಜತೆ ಕೆಂಪು ಮೆಣಸು ,ಸಾಸಿವೆ ಮತ್ತು ಮಾಂಬಳ ಹಾಕಿ ರುಬ್ಬಿದರೆ ಮಾಂಬಳ ಗೊಜ್ಜು ತಯಾರು.

---------------------------------
೯. ಮಾಂಗೋ ಲಸ್ಸಿ
----------------------------------

ಮಾವಿನ ಹಣ್ಣು : ೨
ಮೊಸರು : ಒಂದು ಲೋಟ
ಸಕ್ಕರೆ :೧ ಲೋಟ
ಚಿಟಿಕೆ ಏಲಕ್ಕಿ ಪುಡಿ



ವಿಧಾನ :
ಮಾವಿನ ಹಣ್ಣಿನ ತಿರುಳು, ಮೊಸರು, ಸಕ್ಕರೆ, ಏಲಕ್ಕಿ ಪುಡಿ ಇವುಗಳನ್ನು ಸೇರಿಸಿ ನುಣ್ಣಗೆ ರುಬ್ಬಿ, ಕುಡಿಯಿರಿ.



-------------------------------------------
೧೦.ಮಾಂಗೋ ಮಿಲ್ಕ್ ಶೇಕ್
----------------------------------------
ಮಾವಿನ ಹಣ್ಣು : ೧
ಹಾಲು : ಒಂದು ಲೋಟ
ವೆನಿಲ್ಲಾ ಐಸ್ ಕ್ರೀಂ: ಅರ್ಧ ಲೋಟ
ಸಕ್ಕರೆ :೩ ಚಮಚ

ವಿಧಾನ
ಮಾವಿನ ಹಣ್ಣಿನ ತಿರುಳು, ಸಕ್ಕರೆ, ಹಾಲು, ವೆನಿಲ್ಲ ಐಸ್ ಕ್ರೀಂ ಇವುಗಳನ್ನು ನುಣ್ಣಗೆ ರುಬ್ಬಿ.

ಇದನ್ನು ವೆನಿಲ್ಲಾ ಐಸ್ ಕ್ರೀಮ್ ಹಾಕದೆಯೂ ಮಾಡಬಹುದು.


------------------------------------------
೧೧.ಮಾವಿನ ಹಣ್ಣಿನ ಹಲ್ವಾ
-----------------------------------------

ಮಾವಿನ ಹಣ್ಣು : ೩
ರವೆ: ಒಂದು ಲೋಟ
ಸಕ್ಕರೆ : ಒಂದು ಲೋಟ
ತುಪ್ಪ : : ಒಂದು ಲೋಟ
ಏಲಕ್ಕಿ ಪುಡಿ :ಚಿಟಿಕೆ
ಗೋಡಂಬಿ : ಸ್ವಲ್ಪ


೧.ರವೆಯನ್ನು ಚೆನ್ನಾಗಿ ಹುರಿಯಿರಿ.
೨.ಮಾವಿನ ಹಣ್ಣಿನ ತಿರುಳನ್ನು ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.
೩.ದಪ್ಪ ತಳದ ಪಾತ್ರೆಯಲ್ಲಿ ಅರ್ಧ ಲೋಟ ನೀರಿಗೆ ಸಕ್ಕರೆ ಹಾಕಿ ಕುದಿಯಲು ಬಿಡಿ.
೪.ಸಕ್ಕರೆ ಕರಗುತ್ತಿದ್ದಂತೆ ಅದಕ್ಕೆ ಮಾವಿನ ತಿರುಳು ಹುರಿದ ರವೆ ಮತ್ತು ತುಪ್ಪ ಸೇರಿಸಿ.ಮಧ್ಯೆ ಮಧ್ಯೆ ಸೌಟಿನಿಂದ ಕೈಯಾಡಿಸುತ್ತಿರಿ.
೫.ಮಿಶ್ರಣವು ಕುದಿಯುತ್ತಿದ್ದಂತೆ ಪಾತ್ರೆಯ ತಳ ಬಿಡಲು ಶುರುವಾಗುತ್ತದೆ  ಈಗ ಒಲೆ ಆರಿಸಿ.
೬.ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳಿಂದ ಅಲಂಕರಿಸಿ ,ಬಡಿಸಿ.


----------------------------------------------
೧೨.ಮಾವಿನ ಹಣ್ಣಿನ ಬರ್ಫಿ
----------------------------------------------
ಮಾವಿನ ಹಣ್ಣು : ೪
ಖೊವ : ೨೦೦ ಗ್ರಾಮ್
ರವೆ : ೧ ಚಮಚ
ಕೊಬ್ಬರಿ ತುರಿ : ಅರ್ಧ ಲೋಟ
ಸಕ್ಕರೆ : ಅರ್ಧ ಲೋಟ
ತುಪ್ಪ : ೪ ಚಮಚ
ಏಲಕ್ಕಿ ಪುಡಿ :ಚಿಟಿಕೆ
ಗೋಡಂಬಿ :ಸ್ವಲ್ಪ



ವಿಧಾನ

೧.ಮಾವಿನ ಹಣ್ಣಿನ ತಿರುಳನ್ನು ನುಣ್ಣಗೆ ರುಬ್ಬಿ
೨.ರವೆಯನ್ನ್ನು ಚೆನ್ನಾಗಿ ಹುರಿಯಿರಿ.
೩.ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಇಟ್ಟುಕೊಳ್ಳಿ.
೪. ಮಾವಿನ ತಿರುಳು, ಸಕ್ಕರೆ ಯನ್ನು ಒಂದು ಪಾತ್ರೆಗೆ ಹಾಕಿ ಬೇಯಲು ಬಿಡಿ. ಮಿಶ್ರಣವು ಅರ್ಧದಷ್ಟಾಗಬೇಕು. ಆಗಾಗೆ ಸೌಟಿನಿಂದ ಕೈಯಾಡಿಸಿ.
೫.ಈಗ ಇದಕ್ಕೆ ೨ ಚಮಚ ತುಪ್ಪ, ಖೋವಾ, ಹುರಿದ ರವೆ ಸೇರಿಸಿ ಕಲಕುತ್ತಾ ಇರಿ.ಮಿಶ್ರಣ ತಳ ಬಿಡುತ್ತಿದ್ದಂತೆ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ.  ಒಲೆ ಆರಿಸಿ.
೬.ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಸುರಿದು,ಬಿಲ್ಲೆಗಳಾಗಿ ಕತ್ತರಿಸಿ.ಹುರಿದ ಗೋಡಂಬಿಯಿಂದ ಅಲಂಕರಿಸಿ.




---------------------------------------
೧೩.ಮಾವಿನ ಹಣ್ಣಿನ ಶ್ರೀಖಂಡ
---------------------------------------

ದಪ್ಪ ಮೊಸರು: ೩ ಲೋಟ
ಮಾವಿನ ಹಣ್ಣಿನ ತಿರುಳು : ೧ ವರೆ ಲೋಟ
ಸಕ್ಕರೆ : ಒಂದು ಲೋಟ
ಕೇಸರಿ ದಳ :ಸ್ವಲ್ಪ
ಏಲಕ್ಕಿ ಪುಡಿ :ಚಿಟಿಕೆ
ಬಾದಾಮಿ ಚೂರು :ಸ್ವಲ್ಪ
ಮಾವಿನ ಹಣ್ಣಿನ ಚೂರುಗಳು : ಎರಡು ಚಮಚ

ವಿಧಾನ

೧.ದಪ್ಪ ಮೊಸರನ್ನು ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ ನೇತು ಹಾಕಿ, ನೀರೆಲ್ಲಾ ಚೆಲ್ಲಿ ಹೋಗುವಂತೆ ಮಾಡಿ.
೨.ಇದಕ್ಕೆ ರುಬ್ಬಿದ ಮಾವಿನ ತಿರುಳು, ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಮಿಶ್ರಣವು ನುಣ್ಣಗೆ ಐಸ್ ಕ್ರೀಮ್ ಥರ ಆಗಬೇಕು.
೩.ಇದಕ್ಕೆ ಕೇಸರಿ ದಳ, ಏಲಕ್ಕಿ ಪುಡಿ,ಬಾದಾಮಿ ಚೂರು , ಮಾವಿನ ಹಣ್ಣಿನ ಚೂರು ಹಾಕಿ ಅಲಂಕರಿಸಿ.



---------------------------------
೧೪.ಮಾವಿನ ಹಣ್ಣಿನ ಶರಬತ್ತು
-----------------------------------

ಕಾಡು ಮಾವಿನ ಹಣ್ಣು : ೨
ಸಕ್ಕರೆ : ೨ ಚಮಚ
ನೀರು : ಒನ್ದು ಲೋಟ


ಕಾಡು ಮಾವಿನ ಹಣ್ಣನ್ನು ಚೆನ್ನಾಗಿ ಹಿಚುಕಿ ರಸ ತೆಗೆದು ಇದಕ್ಕೆ ಸಕ್ಕರೆ,ನೀರು ಸೇರಿಸಿ ಕಲಕಿದರೆ ಮಾವಿನ ಹಣ್ಣಿನ ಶರಬತ್ತು ತಯಾರು.


------------------------------------
೧೫.ಮಾವಿನ ಹಣ್ಣಿನ ಐಸ್ ಕ್ರೀಮ್
---------------------------------

ಮಾವಿನ ಹಣ್ಣು: ೩
ಹಾಲು : ಒಂದು ಲೀಟರ್
ಮಿಲ್ಕ್ ಮೆಯಿಡ್ : ಒಂದು ಲೋಟ
ವೆನಿಲ್ಲಾ ಎಸೆನ್ಸ್ : ಅರ್ಧ ಚಮಚ
ಸಕ್ಕರೆ : ೫ ಚಮಚ

ಮಾವಿನ ಹಣ್ಣಿನ ತಿರುಳನ್ನು ರುಬ್ಬಿ, ಇದಕ್ಕೆ ಹಾಲು, ಮಿಲ್ಕ್ ಮೆ ಯಿಡ್, ವೆನಿಲ್ಲಾ ಎಸೆನ್ಸ್, ಸಕ್ಕರೆ ಹಾಕಿ ಕಲಕಿ.ಇದನ್ನು ಫ಼್ರೀಜ಼ರ್ ನಲ್ಲಿ ಸುಮಾರು ೩೦ ನಿಮಿಷಗಳ ಕಾಲ ಇಟ್ಟು ಹೊರತೆಗೆದು,ಮಿಕ್ಸಿಯಲ್ಲಿ ರುಬ್ಬಿ.
ಈ ರೀತಿ ಮೂರು ನಾಲ್ಕು ಸಲ ಫ಼್ರೀಜರ್ ನಿಂದ ಪ್ರತಿ ಮೂವತ್ತು ನಿಮಿಷಗಳಿಗೊಮ್ಮೆ ತೆಗೆದು ರುಬ್ಬಬೇಕು.ಈ ರೀತಿ ಮಾಡುವುದರಿಂದ ಐಸ್ ಕ್ರೀಮ್ ನಯವಾಗುತ್ತದೆ.
ಬಳಿಕ ಇದನ್ನು ಸುಮಾರು ೭-೮ ಗಂಟೆಗಳ ಕಾಲ ಪ್ರೀಜರ್ ನಲ್ಲಿ ಇಡಿ.

ಇದನ್ನು ಫ್ರೀಜರ್ ನಿಂದ ಹೊರತೆಗೆದು  ಮಾವಿನ ಚೂರುಗಳಿಂದ ಅಲಂಕರಿಸಿ.
ಮಾಂಗೋ ಐಸ್ ಕ್ರೀಮ್ ತಯಾರು.


--------------------------------------------------------------------------------------------------------------------------------------------------
೧೬.ಮಾವಿನ ಕಾಯಿ ಆಪ್ಪೆ ಹುಳಿ.
---------------------------------------------------

ಮಾವಿನ ಕಾಯಿ : ೨

ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಕೆಂಪು ಮೆಣಸು: ೪
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ

ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ
ಮಾವಿನ ಕಾಯಿಯನ್ನು ಬೇಯಿಸಿ, ಸಿಪ್ಪೆ ತೆಗೆದು, ತಿರುಳನ್ನು ತೆಗೆಯಿರಿ.
ಇದನ್ನು ನುಣ್ಣಗೆ ರುಬ್ಬಿ, ನೀರು ಸೇರಿಸಿ. ಇದು ಸಾರಿನ ಹದಕ್ಕಿನ್ತಲೂ ತೆಳುವಾಗಿರಬೇಕು.

ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆಗೆ ಸೂಚಿಸಿರುವ ಸಾಮಗ್ರಿಗಳಿಂದ ಒಗ್ಗರಣೆ ತಯಾರಿಸಿ ಇದಕ್ಕೆ ಹಾಕಿ, ಕುದಿಸಿ.
ಉಪ್ಪು ಸೇರಿಸಿ, ಮತ್ತಷ್ಟು ಕುದಿಯಲು ಬಿಡಿ.

ಈಗ ಅಪ್ಪೆ ಹುಳಿ ತಯಾರಾಯಿತು. ಇದನ್ನು ಅನ್ನಕ್ಕೆ ಕಲಸಿ ಉಣ್ಣಬಹುದು ಅಥವಾ ಹಾಗೇ ಕುಡಿಯಬಹುದು.
ಇದನ್ನು ಕುಡಿದರೆ ಗಟ್ಟಿ ನಿದ್ದೆ! ಮಲೆನಾಡಿನ ಕಡೆ ಇದನ್ನು ಹೆಚ್ಚಾಗಿ ಮಾಡುತ್ತಾರೆ.



--------------------------------------
೧೭.ಮಾವಿನ ಕಾಯಿ ಚಟ್ನಿ-ವಿಧಾನ ೧
-------------------------------------


ಮಾವಿನ ಕಾಯಿ : ೧
ಮೆಂತೆ : ೧೦ ಕಾಳು
ಕೆಂಪು ಮೆಣಸು: ೬
ಉಪ್ಪು :ರುಚಿಗೆ ತಕ್ಕಷ್ಟು
ಬೆಲ್ಲ :ಸ್ವಲ್ಪ
ತೆಂಗಿನ ತುರಿ :ಕಾಲು ಲೋಟ


ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ
ನೆಲಕಡಲೆ :ಅರ್ಧ ಹಿಡಿ
ಜೀರಿಗೆ : ಅರ್ಧ ಚಮಚ

ವಿಧಾನ

೧.ಕೆಂಪು ಮೆಣಸು ಮತ್ತು ಮೆಂತೆಯನ್ನು ಎಣ್ಣೆ ಹಾಕದೆ ಹುರಿಯಿರಿ. ಇದನ್ನು ನಯವಾಗಿ ರುಬ್ಬಿ.
೨.ಇದಕ್ಕೆ ಹೆಚ್ಚಿದ ಮಾವಿನ ಕಾಯಿ ಚೂರು ,ತೆಂಗಿನ ತುರಿ,ನೀರು ಸೇರಿಸಿ ರುಬ್ಬಿ.
೩.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ,ಸಾಸಿವೆ,ಕರಿಬೇವಿನೆಲೆ ಎಸಳು,ಉದ್ದು,ಕಡ್ಲೆ ಬೇಳೆ,ಇಂಗು,ಜೀರಿಗೆ ಹಾಕಿ ಒಗ್ಗರಣೆ ತಯಾರಿಸಿ. ಇದಕ್ಕೆ ನೆಲಕಡಲೆ ಸೇರಿಸಿ .
೪.ನೆಲಕಡಲೆ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ರುಬ್ಬಿದ ಮಾವಿನ ಕಾಯಿಮಿಶ್ರಣ ಸೇರಿಸಿ. ಇದಕ್ಕೆ ಉಪ್ಪು, ಬೆಲ್ಲ ಹಾಕಿ ಕಲಕಿ.
೫.ಇದು ಚೆನ್ನಾಗಿ ಬೇಯಬೇಕು. ಮಿಶ್ರಣವು ಗಟ್ಟಿಯಾಗುತ್ತಾ ಬಂದಂತೆ ಒಲೆ ಆರಿಸಿ.


--------------------------------------------------------------------------
೧೮.ಮಾವಿನ ಕಾಯಿ ಚಟ್ನಿ-ವಿಧಾನ ೨
----------------------------------------------------------------------
ಮಾವಿನ ಕಾಯಿ : ಅರ್ಧ
ತೆಂಗಿನ ತುರಿ : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಹಸಿ ಮೆಣಸು : ೩

ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಅರ್ಧ ಚಮಚ
ಕರಿಬೇವಿನೆಲೆ ಎಸಳು : ೧೦
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಇಂಗು: ಚಿಟಿಕೆ
ನೆಲಕಡಲೆ :ಅರ್ಧ ಹಿಡಿ
ಜೀರಿಗೆ : ಅರ್ಧ ಚಮಚ

ವಿಧಾನ

ಮಾವಿನ ಕಾಯಿಯನ್ನು ಹೊಳುಗಳಾಗಿ ಕತ್ತರಿಸಿ, ತೆಂಗಿನ ತುರಿ,ಉಪ್ಪು ಮತ್ತು ಹಸಿ ಮೆಣಸಿನ ಜತೆ ನೀರು ಹಾಕಿ ನುಣ್ಣಗೆ ರುಬ್ಬಿ.
ಒಗ್ಗರಣೆಗೆ ಸೂಚಿಸಿರುವ ಸಾಮಗ್ರಿಗಳಿಂದ ಒಗ್ಗರಣೆ ತಯಾರಿಸಿ ಇದಕ್ಕೆ ಹಾಕಿ.

ದೋಸೆ,ಇಡ್ಲಿ ಜತೆ ಈ ಚಟ್ನಿ ಬಹಳ ಚೆನ್ನಾಗಿರುತ್ತದೆ.


------------------------------------------------------------
೧೯.ಮಾವಿನ ಮಿಡಿ ತಂಬುಳಿ
-------------------------------------------------------

ಮಾವಿನ ಕಾಯಿ,ತೆಂಗಿನ ತುರಿ,ಜೀರಿಗೆ ಇವುಗಳನ್ನು ನುಣ್ಣಗೆ ರುಬ್ಬಿ. ಸ್ವಲ್ಪ ಮೊಸರು ,ಉಪ್ಪು ಸೇರಿಸಿ.ಒಗ್ಗರಣೆ ಕೊಡಿ.


---------------------------------------------------------
೨೦.ಮಾವಿನ ಕಾಯಿ ಚಿತ್ರಾನ್ನ
--------------------------------------------------------
ಅಕ್ಕಿ : ೧ ಲೋಟ

ಅರಿಶಿನ ಪುಡಿ: ಕಾಲು  ಚಮಚ
ಸಾಸಿವೆ: ೨ ಚಮಚ
ನೆಲಕಡಲೆ : ಒಂದು ಹಿಡಿ
ತೆಂಗಿನ ತುರಿ: ಅರ್ಧ ಲೋಟ
ಒಣ ಮೆಣಸಿನಕಾಯಿ: ೩
ಕೊತ್ತಂಬರಿ ಸೊಪ್ಪು: ಸ್ವಲ್ಪ
ಮಾವಿನ ಕಾಯಿ :೧
ತೆಂಗಿನ ಎಣ್ಣೆ: ೫ ಚಮಚ
ರುಚಿಗೆ ತಕ್ಕಷ್ಟು ಇಂಗು, ಉಪ್ಪು

ತಯಾರಿಸುವ ವಿಧಾನ:

೧.ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರುದುರಾಗಿ ಅನ್ನ ಮಾಡಿ .
೨.ಒಣ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಅರಿಶಿನ, ೧ ಚಮಚ ಸಾಸಿವೆ, ಉಪ್ಪು, ಮಾವಿನ ಕಾಯಿ, ಕಾಯಿತುರಿ ಎಲ್ಲವನ್ನು ಮಿಕ್ಸಿಗೆ ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ..

೩. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ ಹಾಕಿ. ಅದಕ್ಕೆ ಕಡ್ಲೇಬೇಳೆ, ಉದ್ದಿನಬೇಳೆ ಹಾಕಿ ಹುರಿಯಿರಿ. ಅದು ಕೆಂಪಗಾದಾಗ ನೆಲಕಡಲೆ ಹಾಕಿ ಹುರಿಯಿರಿ ನಂತರ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿರಿ.
೪ ರುಬ್ಬಿದ ಮಿಶ್ರಣವನ್ನು ಇದಕ್ಕೆ ಬೆರೆಸಿ.
೫.ಇದಕ್ಕೆ ಅನ್ನವನ್ನು ಕಲಸಿ.


---------------------------------------------------------
೨೧.ಮಾವಿನ ಕಾಯಿ ಉಪ್ಪಿನಕಾಯಿ ವಿಧಾನ ೧
--------------------------------------------------------
ಮಾವಿನ ಮಿಡಿ :೧೦
ಉಪ್ಪು :ಎರಡು ಹಿಡಿ
ಕೆಂಪು ಮೆಣಸು : ೨೫
ಸಾಸಿವೆ :ಒಂದು ಹಿಡಿ
ಅರಸಿನ :ಚಿಟಿಕೆ


ಹೋಳುಗಾಯಿ:

ಮಾವಿನ ಮಿಡಿಯನ್ನು ಸಣ್ಣಗೆ ಹೆಚ್ಚಿ , ಉಪ್ಪು ಬೆರೆಸಿ ಮುಚ್ಚಿಡಿ.ಯಾವುದೇ ಕಾರಣಕ್ಕಾಗಿ ಇದಕ್ಕೆ ನೀರು ತಾಗದಂತೆ ಎಚ್ಚರಿಕೆ ವಹಿಸಿ.
೨-೩ ದಿನಗಳಲ್ಲಿ ಇದು ಉಪ್ಪು ನೀರು ಬಿಡುತ್ತದೆ.

ಆಗ ಅರಸಿನ, ಕೆಂಪು ಮೆಣಸು ಮತ್ತು ಸಾಸಿವೆ ಯನ್ನು ರುಬ್ಬಿ ಇದಕ್ಕೆ ಸೇರಿಸಬೇಕು. ಸುಮಾರು ಎರಡು ದಿನಗಳ ಕಾಲ ಹಾಗೇ ಬಿಡಿ. ಮಾವಿನ ಕಾಯಿಯು ಎಲ್ಲಾ ಮಸಾಲೆಗಳನ್ನು ಹೀರಿಕೊಳ್ಳುತ್ತದೆ. ಬಳಿಕ ಇದನ್ನು ಬಳಸಿ.


ಇಡಿ ಮಾವಿನ ಕಾಯಿ :
ಇಡೀ ಮಾವಿನ ಮಿಡಿಯನ್ನು ಬಳಸುವುದಾದರೆ ೫- ೬ ದಿನಗಳ ಕಾಲ ಉಪ್ಪಿನಲ್ಲಿ ಇಡಬೇಕಾಗುತ್ತದೆ.ಮತ್ತೆಲ್ಲ ವಿಧಾನ ಮೇಲಿನಂತೆಯೇ.




------------------------------------------------------------
೨೨.ಮಾವಿನಕಾಯಿ ಉಪ್ಪಿನಕಾಯಿ ವಿಧಾನ ೨
-----------------------------------------------------------

ಇದು ದಿಢೀರ್ ಉಪ್ಪಿನಕಾಯಿ ಮಾಡುವ ವಿಧಾನ.


ಎರಡು ಲೋಟ ನೀರು
ಉಪ್ಪು :ಎರಡು ಹಿಡಿ
ಕೆಂಪು ಮೆಣಸು : ೨೫
ಸಾಸಿವೆ :ಒಂದು ಹಿಡಿ
ಅರಸಿನ :ಚಿಟಿಕೆ



ನೀರಿಗೆ ಉಪ್ಪು ಹಾಕಿ,ಕುದಿಸಿ.
ಇದು ಕುದಿಯುತ್ತಿದ್ದಂತೆ ಮಾವಿನ ಹೋಳು ಹಾಕಿ ಎರಡು ನಿಮಿಷ ಬೇಯಿಸಿ.
ಬಳಿಕ ಇದಕ್ಕೆ ಉಪ್ಪಿನಕಾಯಿ ಮಸಾಲೆ(ರುಬ್ಬಿದ ಸಾಸಿವೆ, ಕೆಂಪು ಮೆಣಸು, ಅರಸಿನ ) ಇದನ್ನು  ಬೆರೆಸಿ.





------------------------------------------------
೨೩.ಆಮ್ ಕಾ ಪನ್ನಾ
-------------------------------------------------

ಇದು ಉತ್ತರ ಭಾರತದ ಕಡೆ ಜನಪ್ರಿಯವಾಗಿರುವ ಪೇಯ.

ಮಾವಿನ ಕಾಯಿ : ೨

ಜೀರಿಗೆ ಪುಡಿ : ಒಂದು ಚಮಚ
ಕರಿ ಮೆಣಸಿನ ಪುಡಿ :ಒಂದು ಚಮಚ
ಇಂಗು :ಚಿಟಿಕೆ
ಸಕ್ಕರೆ :ಅರ್ಧ ಲೋಟ
ಬ್ಲಾಕ್ ಸಾಲ್ಟ್ (ಕಾಲಾ ನಮಕ್ ) :ಚಿಟಿಕೆ


ವಿಧಾನ :
ಮಾವಿನ ಕಾಯಿಯನ್ನು ಬೇಯಿಸಿ, ಸಿಪ್ಪೆ ತೆಗೆದು ತಿರುಳನ್ನು ತೆಗೆಯಿರಿ.
ಇದು ತಣಿದ ಬಳಿಕ ತಿರುಳನ್ನು ರುಬ್ಬಿ, ಇದಕ್ಕೆ ಜೀರಿಗೆ ಪುಡಿ, ಕರಿ ಮೆಣಸಿನ ಪುಡಿ,ಕಾಲಾ ನಮಕ್ ,  ಇಂಗು,ಸಕ್ಕರೆ ಹಾಕಿ ಕಲಕಿ.
೩ ಲೋಟ  ನೀರು ಸೇರಿಸಿ, ಕಲಕಿ.
ಆಮ್ ಕಾ ಪನ್ನಾ ತಯಾರು.



------------------------------------------
೨೪.ಭೂತ ಗೊಜ್ಜು
------------------------------------------

ಮಾವಿನ ಕಾಯಿ : ೧
ಬೆಳ್ಳುಳ್ಳಿ ಎಸಳು : ೫
ಹಸಿ ಮೆಣಸು : ೩
ಬೆಲ್ಲ :ಸ್ವಲ್ಪ
ಎಣ್ಣೆ :ಎರಡು ಚಮಚ
ಸಾಸಿವೆ : ಒಂದು ಚಮಚ
ರುಚಿಗೆ ತಕ್ಕಷ್ಟು ಉಪ್ಪು


ವಿಧಾನ

ಮಾವಿನ ಕಾಯಿಯ ಸಿಪ್ಪೆ ತೆಗೆದು, ತಿರುಳನ್ನು ಬೇಯಿಸಿ
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ,ಬೆಳ್ಳುಳ್ಳಿ ಎಸಳು,ಸಾಸಿವೆ ,ಹಸಿ ಮೆಣಸಿನ ಚೂರು ಮತ್ತು ಬೆಂದ ಮಾವಿನ ಕಾಯಿ ತಿರುಳನ್ನು  ಹಾಕಿ.
ಇದು ಬೇಯುತ್ತಿದ್ದಂತೆ ಇದಕ್ಕೆ ಸ್ವಲ್ಪ ಬೆಲ್ಲ ಹಾಕಿ. ಸುಮಾರು ೨೦ ನಿಮಿಷ ಮಂದ ಉರಿಯಲ್ಲಿ ಬೇಯಿಸಿ.


--------------------------------------------
೨೫.ಮಾವಿನ ಕಾಯಿ ಸಾಸಿವೆ
-----------------------------------------------
ಮಾವಿನ ಕಾಯಿ : ೧
ತೆಂಗಿನ ತುರಿ : ಕಾಲು ಲೋಟ
ಮೊಸರು : ಒಂದು ಲೋಟ

ಸಾಸಿವೆ : ಒಂದು ಚಮಚ
ಕೊತ್ತಂಬರಿ ಕಾಳು : ಅರ್ಧ ಚಮಚ
ಕೆಂಪು ಮೆಣಸು : ೩
ಹಸಿ ಮೆಣಸು : ೧
ಅರಸಿನ :ಚಿಟಿಕೆ
ನೀರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಬೆಲ್ಲ :ಸ್ವಲ್ಪ


ವಿಧಾನ
೧.ಮಾವಿನ ಕಾಯಿಯ ಸಿಪ್ಪೆ ತೆಗೆದು, ಒಂದು ಲೊಟ ನೀರು ಮತ್ತು ಬೆಲ್ಲ ಸೇರಿಸಿ ಮಾವಿನ ಕಾಯಿಯನ್ನು ಬೇಯಿಸಿ.
೨.ಮಿಕ್ಸಿಯಲ್ಲಿ ಕೊತ್ತಂಬರಿ ಕಾಳು,ತೆಂಗಿನ ತುರಿ,ಕೆಂಪು ಮೆಣಸು,ಹಸಿ ಮೆಣಸು ,ಅರಸಿನ ಇವುಗಳನ್ನು ರುಬ್ಬಿ.
೩.ಮಾವಿನ ತಿರುಳನ್ನು ಚೆನ್ನಾಗಿ ಜಜ್ಜಿ. ಇದಕ್ಕೆ ರುಬ್ಬಿದ ಮಿಶ್ರಣ, ಮೊಸರು, ಉಪ್ಪು ಸೇರಿಸಿ ಕಲಕಿ. ಅನ್ನದ ಜತೆ ಸವಿಯಿರಿ.



----ಅರ್ಚನಾ ಹೆಬ್ಬಾರ್, ಬೆಂಗಳೂರು

ಓದಲು ಈ ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ.




Tuesday, April 26, 2011

ತಮಿಳು ಅಡಿಗೆ..

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’
ಸಖಿಯಲ್ಲಿ ಸ್ವಲ್ಪ ಸಮಯ ವಿವಿಧ ಪ್ರಾಂತ್ಯಗಳ ಅಡುಗೆ ವಿಧಾನವನ್ನು ಬರೆದಿದ್ದೆ. ಒಂದೊಂದಾಗಿ ಅವುಗಳನ್ನು ಬ್ಲಾಗ್ ನಲ್ಲಿ ಹಾಕುತ್ತೇನೆ..
ಈ ಸಲ ತಮಿಳು ಅಡುಗೆ ವಿಧಾನ ಇಲ್ಲಿದೆ..

-------------------------------------------
೧.ಅಡೈ
------------------------------------------
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ : ಒಂದು ಲೋಟ
ಉದ್ದು : ಮುಕ್ಕಾಲು ಲೋಟ
ಕಡ್ಲೆ ಬೇಳೆ:ಮುಕ್ಕಾಲು ಲೋಟ
ತೊಗರಿ ಬೇಳೆ:ಮುಕ್ಕಾಲು ಲೋಟ
ಶುಂಠಿ: ಸಣ್ಣ ಚೂರು
ಕೆಂಪು ಮೆಣಸು :ನಾಲ್ಕು
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಸ್ವಲ್ಪ

ವಿಧಾನ
೧.ಎಲ್ಲ ಬೇಳೆಗಳನ್ನು ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ಬಳಿಕ ಮೆಣಸು, ಶುಂಠಿ ಯ ಜತೆ ಚೆನ್ನಾಗಿ ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ ಬರಬೇಕು.ಇದನ್ನು ೬- ೭ ಗಂಟೆಗಳ ಕಾಲ ಹಾಗೇ ಬಿಡಿ.
೨. ಬಳಿಕ ಈ ದೋಸೆ ಹಿಟ್ಟಿಗೆ ಉಪ್ಪು ಹಾಕಿ ಚೆನ್ನಾಗಿ ಕಲಕಿ.
೩. ದೋಸೆ ಕಾವಲಿಯನ್ನು ಬಿಸಿ ಮಾಡಿ, ದೋಸೆ ಹೊಯ್ಯಿರಿ. ಬೇಕಿದ್ದರೆ ಇದಕ್ಕೆ ತೆಂಗಿನ ತುರಿ,ಜೀರಿಗೆಯನ್ನು ಕೂಡ ಹಾಕಬಹುದು.


------------------------------------------
೨.ಪೊಂಗಲ್
------------------------------------------------


ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಹೆಸರು ಬೇಳೆ: ಕಾಲು ಲೋಟ
ಕಾಳು ಮೆಣಸು: ೧ ಚಮಚ
ಜ಼ೀರಿಗೆ: ಒಂದು ಚಮಚ
ಶುಂಠಿ ಚೂರು: ಎರಡು ಚಮಚ
ಇಂಗು: ಚಿಟಿಕೆ
ತುಪ್ಪ: ಎರಡು ಚಮಚ
ಗೋಡಂಬಿ: ೧೦-೧೫
ಬೇವಿನೆಲೆ: ೧೦ ಎಸಳು
ಉಪ್ಪು: ರುಚಿಗೆ ತಕ್ಕಷ್ಟು
ಹಸಿ ಮೆಣಸು: ೨
ನೀರು: ೬ ಲೋಟ


ವಿಧಾನ:
೧.ತುಪ್ಪ ಬಿಸಿ ಮಾಡಿ, ಜೀರಿಗೆ, ಕಾಳು ಮೆಣಸು, ಹಸಿ ಮೆಣಸು, ಇಂಗು, ಶುಂಠಿ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ.
೨.ಇದಕ್ಕೆ ನೀರು ಹಾಕಿ, ತೊಳೆದ ಅಕ್ಕಿ ಮತ್ತು ಬೇಳೆ ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ.
೩.ಮೂರು ಸೀಟಿ ಆಗುತ್ತಿದ್ದಂತೆ ಒಲೆ ಆರಿಸಿ.
೪.ಅನ್ನ-ಬೇಳೆಯ ಮಿಶ್ರಣಕ್ಕೆ ಉಪ್ಪು ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ ಕಲಸಿ.
೫.ಪೊಂಗಲ್ ತಯಾರು.

-----------------------------------------------------
3.ಬೀನ್ಸ್ ಪರಪ್ಪು ಉಸ್ಲಿ
-------------------------------------------------------

ಬೇಕಾಗುವ ಸಾಮಗ್ರಿಗಳು
ತೊಗರಿ ಬೇಳೆ :ಅರ್ಧ ಲೋಟ
ಕಡ್ಲೆ ಬೇಳೆ : ಒಂದು ಹಿಡಿ
ಕೆಂಪು ಮೆಣಸು :ಎರಡು
ಹಸಿ ಮೆಣಸು : ಒಂದು
ಇಂಗು :ಚಿಟಿಕೆ
ಅರಸಿನ :ಚಿಟಿಕೆ
ಎಣ್ಣೆ :ಸ್ವಲ್ಪ
ಬೀನ್ಸ್ : ಎರಡು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ :ಸ್ವಲ್ಪ
ಸಾಸಿವೆ : ಅರ್ಧ ಚಮಚ
ಕೆಂಪು ಮೆಣಸು :ಎರಡು

ವಿಧಾನ:
೧.ಕಡ್ಲೆ ಬೇಳೆ ಮತ್ತು ತೊಗರಿ ಬೇಳೆಯನ್ನು ತೊಳೆದು ನೀರಿನಲ್ಲಿ ೩- ೪ ಗಂಟೆಗಳ ಕಾಲ ನೆನೆಸಿ.
೨.ಬೀನ್ಸನ್ನು ಸಣ್ಣಗೆ ಹೆಚ್ಚಿ,ಉಪ್ಪು ,ಅರಸಿನ ಹಾಕಿ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ನೆನೆದ ಕಡ್ಲೆ ಬೇಳೆ, ತೊಗರಿ ಬೇಳೆ, ೨ ಕೆಂಪು ಮೆಣಸು, ಒಂದು ಹಸಿ ಮೆಣಸು , ಉಪ್ಪು ,ಅರಸಿನ ಮತ್ತು ಇಂಗನ್ನು ತರಿ ತರಿಯಾಗಿ ರುಬ್ಬಿ.
೪.ರುಬ್ಬಿದ ಮಿಶ್ರಣವನ್ನು ಕುಕ್ಕರಿನಲ್ಲಿ ಸೀಟಿ ಇಲ್ಲದೆ ಹತ್ತು ನಿಮಿಷ ಬೇಯಿಸಿ. ಬಳಿಕ ಮಿಶ್ರಣವನ್ನು ಕುಕ್ಕರಿನಿಂದ ಹೊರತೆಗೆದು ,ಅದನ್ನು ಚೆನ್ನಾಗಿ ನಾದಿ.
೫. ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಕೆ೦ಪು ಮೆಣಸು ಹಾಕಿ .ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ,ಹೊಂಬಣ್ಣ ಬರುವ ತನಕ ಕದಡಿ .
೬.ಇದಕ್ಕೆ ಬೇಯಿಸಿದ ಬೀನ್ಸನ್ನು ಹಾಕಿ ಕಲಕಿ. ೩-೪ ನಿಮಿಷ ಹಾಗೇ ಬೇಯಿಸಿ.

-------------------------------------------------------------------------------
೪.ಮೊರು ಕೊಜ್ಹಂಬು
---------------------------------------------------------------------------------
ಬೇಕಾಗುವ ಸಾಮಗ್ರಿಗಳು
ಮೊಸರು : ಒಂದು ಲೋಟ
ಹೆಚ್ಚಿದ ಕುಂಬಳಕಾಯಿ : ಒಂದು ಲೋಟ
ಅರಸಿನ :ಚಿಟಿಕೆ
ನೆನೆಸಿದ ತೊಗರಿ ಬೇಳೆ : ಒಂದು ಚಮಚ
ಕೊತ್ತಂಬರಿ ಬೀಜ : ೨ ಚಮಚ
ಕಡ್ಲೆ ಬೇಳೆ : ಒಂದು ವರೆ ಚಮಚ
ಕೆಂಪು ಮೆಣಸು : ಒಂದು
ಮೆಂತೆ : ೪-೫ ಕಾಳು
ಎಣ್ಣೆ : ೨ ಚಮಚ
ತೆಂಗಿನ ತುರಿ : ೨ ಚಮಚ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆ ಗೆ: ಸಾಸಿವೆ : ಒಂದು ಚಮಚ , ಬೆವಿನೆಲೆ : ೪, ಸ್ವಲ್ಪ ಎಣ್ಣೆ


ವಿಧಾನ
೧.ತೊಗರಿ ಬೇಳೆ ಯನ್ನು ನೀರಿನಲ್ಲಿ ೨೦ ನಿಮಿಷ ನೆನೆಸಿಡಿ
೨. ಕೊತ್ತಂಬರಿ,ಮೆಂತೆ,ಕೆಂಪು ಮೆಣಸು ಕಡ್ಲೆ ಬೇಳೆ ಯನ್ನು ಎಣ್ಣೆಯಲ್ಲಿ ಹುರಿಯಿರಿ.
೩.ನೆನೆದ ತೊಗರಿ ಬೇಳೆ ಮತ್ತು ಹುರಿದ ಸಾಮಗ್ರಿಗಳನ್ನು ತೆಂಗಿನ ತುರಿಯ ಜತೆ ನುಣ್ಣಗೆ ರುಬ್ಬಿ.
೪.ಕುಂಬಳಕಾಯಿಯನ್ನು ಹೆಚ್ಚಿ ಅರ್ಧ ಲೋಟ ನೀರು, ಅರಸಿನ, ಇಂಗಿನ ಜತೆ ಬೇಯಿಸಿ.
೫.ಇದಕ್ಕೆ ಉಪ್ಪು,ರುಬ್ಬಿದ ಮಿಶ್ರಣವನ್ನು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ಕಲಕಿ. ೫ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
೬. ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸಾಸಿವೆ, ಬೇವಿನೆಲೆ ಹಾಕಿ ಒಗ್ಗರಣೆ ತಯಾರಿಸಿ, ಬೇಯುತ್ತಿರುವ ಮಿಶ್ರಣಕ್ಕೆ ಹಾಕಿ.

---------------------------------------------
೫.ಸಕ್ಕರೆ ಪೊಂಗಲ್
------------------------------------


ಇದು ತಮಿಳುನಾಡಿನ ವಿಶೇಷ ಅಡುಗೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ತುಪ್ಪ: ೪ ಚಮಚ
ಹೆಸರು ಬೇಳೆ: ೪ ಚಮಚ
ಹಾಲು: ಒಂದು ಲೋಟ
ಬೆಲ್ಲ : ೧.೫ ಲೋಟ
ಗೋಡಂಬಿ: ೧೦
ಒಣ ದ್ರಾಕ್ಷಿ: ೧೦
ಏಲಕ್ಕಿ ಪುಡಿ: ಸ್ವಲ್ಪ

ವಿಧಾನ

೧.ಕುಕ್ಕರಿನಲ್ಲಿ ಅಕ್ಕಿ, ಹೆಸರು ಬೇಳೆ ಇವುಗಳನ್ನು ಹಾಲು+ನೀರಿನ ಜತೆ ೧:೪ ಅನುಪಾತದಲ್ಲಿ ಬೇಯಿಸಿಕೊಳ್ಳಿ.
೨.ಒಂದು ಪಾತ್ರೆಯಲ್ಲಿ ೧.೫ ಲೋಟ ನೀರಿಗೆ ಬೆಲ್ಲವನ್ನು ಹಾಕಿ ಬಿಸಿ ಮಾಡಿ.
೩.ಬೆಲ್ಲದ ಪಾಕವಾಗುತ್ತಿದ್ದಂತೆ (ಅಂದರೆ ನೀರಿನಲ್ಲಿ ಸಂಪೂರ್ಣವಾಗಿ ಬೆಲ್ಲ ಕರಗುತ್ತಿದ್ದಂತೆ ), ಅದಕ್ಕೆ ಅನ್ನ-ಹೆಸರುಬೇಳೆಯ ಮಿಶ್ರಣವನ್ನು ಹಾಕಿ.
೪.೨-೩ ನಿಮಿಷ ಕಲಕುತ್ತಿರಿ. ಈಗ ತುಪ್ಪದಲ್ಲಿ ಹುರಿದ ದ್ರಾಕ್ಷೆ, ಗೋಡಂಬಿಯನ್ನು ಸೇರಿಸಿ.
೫.ಏಲಕ್ಕಿ ಪುಡಿಯನ್ನು ಉದುರಿಸಿ.

Thursday, March 24, 2011

ವರ್ಲಿ ಚಿತ್ರಕಲೆ ಮತ್ತೊಮ್ಮೆ

ಈ ಹಿಂದೆ ವರ್ಲಿ ಚಿತ್ರಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ಆ ಲೇಖನ ( ಇಲ್ಲಿದೆ. )

ಈ ಸಲ ನಾನು ವರ್ಲಿ ಚಿತ್ರಗಳ ಪ್ರಮುಖ ಪ್ರಕಾರವಾದ ಟರ್ಪಾ ನೃತ್ಯದ ಚಿತ್ರ ಅಭ್ಯಾಸ ಮಾಡಿದೆ. ಒಂದು ಪ್ರಯತ್ನ ಇಲ್ಲಿದೆ.


ಟರ್ಪಾ ಎನ್ನುವುದು ಒಂದು ರೀತಿಯ ಕೊಳವೆಯ ಆಕೃತಿಯ ವಾದ್ಯ. ಅದನ್ನು ಊದುವವನ ಸುತ್ತ ಜನರು ವೃತ್ತಾಕಾರವಾಗಿ ಸುತ್ತುವರೆದು ನೃತ್ಯ ಮಾಡುತ್ತಾರೆ.ವೃತ್ತ ಆಕೃತಿಯು ಸೂರ್ಯ ,ಚಂದ್ರರಿಂದ ಪ್ರೇರಣೆ ಪಡೆದು ರಚಿಸಿದ ಆಕೃತಿ. ವೃತ್ತ ಎನ್ನುವುದು ವರ್ಲಿ ಜನರಲ್ಲಿ ಜೀವನವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಸಾವು, ಬದುಕಿನ ಕೊನೆಯಲ್ಲ. ಅದು ಇನ್ನೊಂದು ಹೊಸ ಬದುಕಿನ ಆರಂಭ. ವೃತ್ತಕ್ಕೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ವರ್ಲಿ ಚಿತ್ರಗಳಲ್ಲಿ ಪ್ರಕೃತಿಯ ಜತೆಗೆ ಮಿಳಿತವಾಗಿರುವ ಬದುಕು ಎದ್ದು ತೋರುತ್ತದೆ.

ಅಂದ ಹಾಗೆ ಈ ಚಿತ್ರದಲ್ಲಿ ಟರ್ಪಾ ನೃತ್ಯಕ್ಕೆ ಜನ ತಯಾರಾಗುತ್ತಿದ್ದಾರೆ ಅಷ್ಟೆ. ಇನ್ನೂ ವೃತ್ತಾಕಾರ ಪೂರ್ತಿಯಾಗಿ ರೂಪುಗೊಂಡಿಲ್ಲ .

Friday, March 18, 2011

ಬಗೆ ಬಗೆ ಶರಬತ್ತು..

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

೧. ಬೆಲ್ಲದ ಪಾನಕ..

ಮನೆಗೆ ಅತಿಥಿಗಳು ಬಂದಾಗ ಬೆಲ್ಲ ನೀರು ಕೊಡುವುದು ವಾಡಿಕೆ. ಬೆಲ್ಲ ನೀರು ದಣಿವನ್ನು ನಿವಾರಿಸುತ್ತದೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೇಕಾಗುವ ವಸ್ತುಗಳು

ನೀರು :ಎರಡು ಲೋಟ
ಬೆಲ್ಲದ ಪುಡಿ: ಅರ್ಧ ಲೋಟ
ಏಲಕ್ಕಿ :ಚಿಟಿಕೆ
ಕಾಳು ಮೆಣಸಿನ ಪುಡಿ :ಚಿಟಿಕೆ.

ವಿಧಾನ
೧.ನೀರಿನಲ್ಲಿ ಬೆಲ್ಲದ ಪುಡಿಯನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿ ಇಡಿ.
೨.ಬೆಲ್ಲ ಸಂಪೂರ್ಣವಾಗಿ ಕರಗಿದಾಗ ಅದಕ್ಕೆ ಏಲಕ್ಕಿ ಪುಡಿ ಮತ್ತು ಕಾಳು ಮೆಣಸಿನ ಪುಡಿ ಬೆರೆಸಿ ಕಲಕಿ,ಕುಡಿಯಿರಿ.


೨. ಬಣ್ಣದ ಸೌತೆಕಾಯಿ ಪಾನಕ (ಮಂಗಳೂರು ಸೌತೆ ಪಾನಕ )

ಬೇಕಾಗುವ ವಸ್ತುಗಳು

ನೀರು : ಎರಡು ಲೋಟ
ಬೆಲ್ಲದ ಪುಡಿ: ಅರ್ಧ ಲೋಟ

ಮಂಗಳೂರು ಸೌತೆಕಾಯಿ : ಒಂದು

ವಿಧಾನ

೧. ಸಿಪ್ಪೆ ಸುಲಿದ ಸೌತೆಯನ್ನು ಸಣ್ಣಗೆ ಹೆಚ್ಚಿ,ಮಿಕ್ಸಿಯಲ್ಲಿ ರುಬ್ಬಿ .
೨.ಇದಕ್ಕೆ ಬೆಲ್ಲದ ಪುಡಿ, ನೀರು ಹಾಕಿ ಕಲಕಿ. ಬೇಕಿದ್ದರೆ ಏಲಕ್ಕಿ ಪುಡಿ ಹಾಕಿಕೊಳ್ಳಬಹುದು.
ಬಿಸಿಲಿನ ಬೇಗೆಗೆ ಅತ್ಯುತ್ತಮವಾದ ಪಾನಕ ಇದು.

೩.ಕರಬೂಜದ ಮಿಲ್ಕ್ ಶೇಕ್

ಬೇಕಾಗುವ ವಸ್ತುಗಳು

ಕರಬೂಜ : ಒಂದು
ಸಕ್ಕರೆ:ಎರಡು ಚಮಚ
ಹಾಲು :ಒಂದು ಲೋಟ
ನೀರು :ಒಂದು ಲೋಟ

ವಿಧಾನ

೧.ಬೀಜ ಮತ್ತು ಸಿಪ್ಪೆ ತೆಗೆದ ಕರಬೂಜವನ್ನು ಸಣ್ಣಗೆ ಹೆಚ್ಚಿ.
೨.ಮಿಕ್ಸಿಯಲ್ಲಿ ಹಾಲು,ಸಕ್ಕರೆ ಮತ್ತು ಕರಬೂಜವನ್ನು ಹಾಕಿ ಒಟ್ಟಿಗೆ ರುಬ್ಬಿ.
೩.ಬೇಕಿದ್ದರೆ ಇದಕ್ಕೆ ಅಇಸ್ ಕ್ರೀಮನ್ನು ಸೇರಿಸಿ ರುಬ್ಬಬಹುದು.
೪.ನೀರು ಸೇರಿಸಿ, ಕಲಕಿ , ಕುಡಿಯಿರಿ.

೪. ಬ್ರಾಹ್ಮಿ ಎಲೆಯ ಶರಬತ್ತು

ಬೇಕಾಗುವ ಸಾಮಗ್ರಿಗಳು :
ಎರಡು ಹಿಡಿ ಬ್ರಾಹ್ಮಿ ಎಲೆ
ಬೆಲ್ಲ :ಮಧ್ಯಮ ಗಾತ್ರದ ಚೂರು
ನೀರು ಸ್ವಲ್ಪ




ವಿಧಾನ:
ಬ್ರಾಹ್ಮಿ ಎಲೆಗಳನ್ನು ಚೆನ್ನಾಗಿ ತೊಳೆದು, ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಮತ್ತು ಬೆಲ್ಲ ಸೇರಿಸಿ.ನುಣ್ಣಗೆ ರುಬ್ಬಿ.
ಆಮೇಲೆ ಅದನ್ನು ಮಿಕ್ಸಿ ಯಿಂದ ತೆಗೆದು, ಸೋಸಿ.
ಬೇಕಿದ್ದರೆ ಮಂಜುಗಡ್ಡೆ ಸೇರಿಸಿ.
ಇನ್ನೇಕೆ ತಡ...ರುಚಿ ನೋಡಿ.
ಬೇಸಗೆಯ ಧಗೆಗೆ ತಂಪಾದ ,ಆರೋಗ್ಯಕರವಾದ ಪಾನೀಯ ಇದು!!

೫.ಪುದೀನಾ ನಿಂಬೆ ಶರಬತ್ತು

ಬೇಕಾಗುವ ವಸ್ತುಗಳು
ನಿಂಬೆ ರಸ : ಆರು ಚಮಚ
ಸಕ್ಕರೆ :ಎಂಟು ಚಮಚ
ಪುದೀನಾ ಎಲೆ : ಅರ್ಧ ಲೋಟ
ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ :ಚಿಟಿಕೆ
ಉಪ್ಪು :ರುಚಿಗೆ ತಕ್ಕಷ್ಟು
ನೀರು :ಎರಡು ಲೋಟ

ವಿಧಾನ
೧.ಪುದೀನಾ ಎಲೆಗಳನ್ನು ನೀರು ಹಾಕಿ ನುಣ್ಣಗೆ ರುಬ್ಬಿ.
೨.ಇದಕ್ಕೆ ಸಕ್ಕರೆ,ನಿಂಬೆ ರಸ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಕಿ.
೩.ಬೇಕಿದ್ದರೆ ಮಂಜುಗಡ್ಡೆ ಸೇರಿಸಿ.
೪.ಇನ್ನೇಕೆ ತಡ ಪುದೀನಾ-ನಿಂಬೆ ಶರಬತ್ತು ತಯಾರು. ಇದು ತುಂ ಬಾ ಆಹ್ಲಾದಕರವಾದ ಪಾನೀಯ.

ವಿ.ಸೂ.
ಇದಕ್ಕೆ ಸ್ವಲ್ಪ ಶು ೦ಠಿ ರಸವನ್ನು ಸೇರಿಸಿದರೆ ವಿಶಿಷ್ಟವಾದ ರುಚಿ ಬರುತ್ತದೆ .

೬.ಮಸಾಲ ಮಜ್ಜಿಗೆ

ಬೇಕಾಗುವ ವಸ್ತುಗಳು
ಮಜ್ಜಿಗೆ :ಎರಡು ಲೋಟ
ಕೊತ್ತಂಬರಿ ಸೊಪ್ಪು : ಸ್ವಲ್ಪ
ಶು೦ಠಿ: ಸಣ್ಣ ಚೂರು
ಹಸಿ ಮೆಣಸು : ೨
ಉಪ್ಪು :ರುಚಿಗೆ ತಕ್ಕಷ್ಟು
ಇಂಗು: ಚಿಟಿಕೆ

ವಿಧಾನ
೧.ಕೊತ್ತಂಬರಿ ಸೊಪ್ಪು, ಶು೦ಠಿ ,ಹಸಿ ಮೆಣಸು ಇವುಗಳನ್ನು ಸಣ್ಣಗೆ ಹೆಚ್ಚಿ.
೨.ಇ೦ಗಿಗೆ ಸ್ವಲ್ಪ ನೀರು ಹಾಕಿ,ಕರಗಿಸಿ.
೩.ಮಜ್ಜಿಗೆಗೆ ಹೆಚ್ಚಿದ ಕೊತ್ತಂಬರಿ,ಶು೦ಠಿ, ಹಸಿ ಮೆಣಸು ,ಇಂಗಿನ ನೀರು ,ಉಪ್ಪು ಹಾಕಿ ಕಲಸಿ.


೭.ಮಾ೦ಗೋ ಲಸ್ಸಿ

ಮೊಸರು :ಎರಡು ಲೋಟ
ಮಾವಿನ ಹಣ್ಣಿನ ಹೋಳುಗಳು :ಅರ್ಧ ಲೋಟ
ಸಕ್ಕರೆ:ಅರ್ಧ ಲೋಟ

ವಿಧಾನ

ಮೊಸರು,ಮಾವಿನ ಹಣ್ಣು ಮತ್ತು ಸಕ್ಕರೆಯನ್ನು ಒಟ್ಟಿಗೆ ರುಬ್ಬಿ, ಲೋಟದಲ್ಲಿ ಹಾಕಿ ಕುಡಿಯಿರಿ.

ವಿ.ಸೂ. ಸಕ್ಕರೆಯ ಪ್ರಮಾಣ ಮಾವಿನ ಸಿಹಿಯ ಮೇಲೆ ಅವಲಂಬಿತ.

೮. ಠ೦ಡಾಯೀ

ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾದ ಪೇಯ ಇದು.

ಬೇಕಾಗುವ ವಸ್ತುಗಳು

ಹಾಲು :ಒಂದು ಲೋಟ
ಬಾದಾಮಿ : ಹತ್ತು
ಏಲಕ್ಕಿ :ಚಿಟಿಕೆ
ಗಸಗಸೆ :ಒಂದು ಚಮಚ
ಗುಲಾಬಿ ನೀರು : ಎರಡು ಚಮಚ

ವಿಧಾನ
೧.ಬಾದಾಮಿಯನ್ನು ನೀರಿನಲ್ಲಿ ನಾಲ್ಕೈದು ಗಂಟೆಗಳ ಕಾಲ ನೆನೆಸಿ, ಬಳಿಕ ಸಿಪ್ಪೆ ತೆಗೆಯಿರಿ.
೨.ಸಿಪ್ಪೆ ತೆಗೆದ ಬಾದಾಮಿ, ಏಲಕ್ಕಿ,ಗಸಗಸೆ, ಗುಲಾಬಿ ನೀರು ಇವುಗಳನ್ನು ಒಟ್ಟಿಗೆ ರುಬ್ಬಿ.
೩.ರುಬ್ಬಿದ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿ.
೪.ಸ್ವಲ್ಪ ಮಂಜುಗಡ್ಡೆ ಚೂರುಗಳನ್ನು ಸೇರಿಸಿ. ಠ೦ಡಾಯೀ ತಯಾರು .



೯.ಕಲ್ಲಂಗಡಿ ಜೂಸ್

ಕಲ್ಲಂಗಡಿ ಹೋಳುಗಳು : ಮೂರು ಲೋಟ
ಸಕ್ಕರೆ : ಎರಡು ಚಮಚ

ವಿಧಾನ
೧.ಕಲ್ಲಂಗಡಿಯ ಸಿಪ್ಪೆ ತೆಗೆದು, ಹಣ್ಣಿನ ಸಣ್ಣ ಚೂರುಗಳನ್ನಾಗಿ ಮಾಡಿ.
೨.ಸಕ್ಕರೆಯ ಜತೆ ಈ ಹೋಳುಗಳನ್ನು ರುಬ್ಬಿ.
೩.ತೆಳುವಾದ ಬಟ್ಟೆಯಲ್ಲಿ ಇದನ್ನು ಸೋಸಿ, ಕುಡಿಯಿರಿ.

ವಿ.ಸೂ. ಇದಕ್ಕೆ ನೀರು ಹಾಕಬೇಕಾಗಿಲ್ಲ.


೧೦. ಕ್ಯಾರೆ ಟ್-ಶು೦ ಠಿ ಜ್ಯೂಸ್

ಕ್ಯಾರೆಟ್ :ಎರಡು
ಶು೦ ಠಿ :ಸಣ್ಣ ಚೂರು
ಸಕ್ಕರೆ :ಎರಡು ಚಮಚ
ನೀರು :ಎರಡು ಲೋಟ

ವಿಧಾನ
೧.ಕ್ಯಾರೆಟ್,ಶುಮ್ಥಿಯನ್ನು ನೀರಿನ ಜತೆ ಚೆನ್ನಾಗಿ ರುಬ್ಬಿ.
೨.ರುಬ್ಬಿದ ಮಿಶ್ರಣವನ್ನು ಬಟ್ಟೆಯಲ್ಲಿ ಸೋಸಿ.
೩. ಸೋಸಿದ ರಸಕ್ಕೆ ಸಕ್ಕರೆ ಹಾಕಿ ಕುಡಿಯಿರಿ.

--------------------------------------------------------------

Thursday, March 3, 2011

ಪಲ್ಯ..

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಇದರಲ್ಲಿ ಬರೆದಿರುವ ಆಲೂಗೆಡ್ಡೆ-ಹುಣಸೆ ರಸ ಪಲ್ಯಇದನ್ನು ನಾನು ಕಸ್ತೂರಿ ಟಿ.ವಿ. ಯ 'ನಳ ಪಾಕ 'ಕಾರ್ಯಕ್ರಮದಲ್ಲಿ ಅಡುಗೆ ಮಾಡಿ ತೋರಿಸಿದ್ದೆ :)


೧.ತೊಂಡೆಕಾಯಿ ,ಗೋಡಂಬಿ ಪಲ್ಯ




ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ : ಅರ್ಧ ಕಿಲೋ
ತೆಂಗಿನಕಾಯಿ : ಅರ್ಧ
ಗೋಡಂಬಿ :ಎರಡು ಹಿಡಿ
ಬೆಲ್ಲ : ಒಂದು ಸಣ್ಣ ಚೂರು
ಉಪ್ಪು:ರುಚಿಗೆ
ಸಾಸಿವೆ : ಒಂದು ಚಮಚ
ಕೆಂಪು ಮೆಣಸು : ೪
ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ತಲಾ ಒಂದು ಚಮಚ
ವಿಧಾನ :
೧.ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.ಸಾಸಿವೆ ಚಟ ಪಟ ಅನ್ನುತಿದ್ದಂತೆ ಒಲೆ ಆರಿಸಿ.
೨.ತೆಂಗಿನಕಾಯಿ,ಮೆಣಸು,ಸಾಸಿವೆ ಇವನ್ನು ಒಟ್ಟಿಗೆ ತರಿ ತರಿಯಾಗಿ ರುಬ್ಬಿ.
೩.ತೊಂಡೆಕಾಯಿ ಹಾಗೂ ಗೋಡಂಬಿಯನ್ನು ಕುಕ್ಕರಿನಲ್ಲಿ ೩ ಸೀಟಿ ಬರುವ ತನಕ ಬೇಯಿಸಿ.
೩.ಈಗ ಒಲೆ ಉರಿಸಿ, ಈಗಾಗಲೇ ಮಾಡಿಟ್ಟ ಒಗ್ಗರಣೆ ಯ ಪಾತ್ರೆಗೆ ತೆಂಗಿನಕಾಯಿಯ ಮಿಶ್ರಣ ಹಾಗೂ ಬೇಯಿಸಿದ ತೊಂಡೆಕಾಯಿ,
ಗೋಡಂಬಿಯನ್ನು ಸೇರಿಸಿ.
೪.ಮಂದ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಬೇಯಿಸಿ.
೫.ಈಗ ಬೆಲ್ಲ ಹಾಗೂ ಉಪ್ಪು ಸೇರಿಸಿ.ಮತ್ತೂ ಎರಡು ನಿಮಿಷ ಬೇಯಿಸಿ.

ಘಮಘಮಿಸುವ ಪಲ್ಯ ತಯಾರು!!
ಇದು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಖಾದ್ಯ.

ಸೂಚನೆ :
೧.ಗೋಡಂಬಿಯ ಬದಲು ನೆನೆದ ಕಡಲೆಯನ್ನು ಬಳಸಬಹುದು.
೨.ಭಿನ್ನವಾದ ರುಚಿಗೊಸ್ಕರ ತೆಂಗಿನ ಕಾಯಿಯ ಜತೆ ಸಾಸಿವೆಯ ಬದಲು ಜೀರಿಗೆ ರುಬ್ಬಿ ಪಲ್ಯ ಮಾಡಬಹುದು.
------------------------------------------------------------------------------------------------------------------------------------------

೨.ಸುಟ್ಟ ಬದನೇಕಾಯಿ ಪಲ್ಯ
--------------------------------------------------------------


ಬೇಕಾಗುವ ಸಾಮಗ್ರಿಗಳು:

ಬದನೇಕಾಯಿ :ದೊಡ್ಡದು (ನೇರಳೆ ಬಣ್ಣದ್ದು ) : ೨
ನೀರುಳ್ಳಿ : ಒಂದು

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ
ಹಸಿ ಮೆಣಸು : ನಾಲ್ಕು
ಬೆಳ್ಳುಳ್ಳಿ : ೧೦ ಎಸಳು

ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ :
೧.ಬದನೆ ಕಾಯಿಯನ್ನು ತೊಳೆದು ಗ್ಯಾಸ್ ನ ಒಲೆಯ ಮೇಲೆ ನೇರವಾಗಿ ಇಟ್ಟು, ಒಲೆ ಉರಿಸಿ.
೨.ಬದನೆ ಕಾಯಿಯು ಬೆಂಕಿಯಲ್ಲಿ ಚೆನ್ನಾಗಿ ಸುಡುವ ತನಕ ಒಲೆಯಲ್ಲಿ ಇರಿಸಿ. ಆಗಾಗ್ಗೆ ಅದನ್ನು ಮಗುಚಿ ಇಟ್ಟು,ಎಲ್ಲಾ ಭಾಗಗಳೂ ಸಮಾನವಾಗಿ ಸುಡುವಂತೆ ಮಾಡಿ. ಅದರ ಮೇಲ್ಗಡೆಯ ಸಿಪ್ಪೆ ಏಳುವಷ್ಟರ ತನಕ ಇದನ್ನು ಸುಡಬೇಕು.
೩.ಈಗ ಒಲೆ ಆರಿಸಿ, ಬದನೆಕಾಯಿಯ ಸಿಪ್ಪೆಯನ್ನು ಸುಲಿಯಿರಿ.
೪.ಸಿಪ್ಪೆ ರಹಿತ ಭಾಗವನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಈ ಹಂತದಲ್ಲಿ ಅದನ್ನು ಚೆನ್ನಾಗಿ ಪರಿಶೀಲನೆ ಮಾಡಿ. (ಕೆಲವೊಮ್ಮೆ ಬದನೆಕಾಯಿಯ ಒಳಗೆ ಹುಳ ಇರುತ್ತದೆ. ಹಾಗಾಗೆ ಪರಿಶೀಲನೆ ಅತೀ ಅಗತ್ಯ!! )
೫. ಬೆಂದಿರುವ ಬದನೆಕಾಯಿಯನ್ನು ಚೆನ್ನಾಗಿ ಕಿವುಚಿ.
೬.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಇದಕ್ಕೆ ಹಸಿಮೆಣಸಿನ ಚೂರು,ಬೆಳ್ಳುಳ್ಳಿಚೂರು , ಸಣ್ಣಗೆ ಹೆಚ್ಚಿದ ನೀರುಲ್ಲಿಯನ್ನು ಹಾಕಿ ,ಚೆನ್ನಾಗಿ ಹುರಿಯಿರಿ.
೭.ಬಳಿಕ ಕಿವುಚಿದ ಬದನೆ ,ಉಪ್ಪು,ನಿಂಬೆ ರಸ ಹಾಕಿ ಚೆನ್ನಾಗಿ ಕಲಕಿ. ಈಗ ಸುಟ್ಟ ಬದನೆ ಕಾಯಿ ಪಲ್ಯ ತಯಾರು!

ಸೂಚನೆ : ಇದನ್ನೇ ಉತ್ತರ ಭಾರತದ ಕಡೆ 'ಬೆಂಗನ್ ಭರ್ತ' ಎನ್ನುತ್ತಾರೆ.
ಈ ಪಲ್ಯ ಆರಿದ ಬಳಿಕ ಬೇಕಿದ್ದರೆ ಮೊಸರು ಹಾಕಿ ಕಲಕಬಹುದು. ಬದನೆಕಾಯಿಯ ಮೊಸರುಗೊಜ್ಜು ತಯಾರಾಗುತ್ತದೆ.

-------------------------------------------------------------------------------------------------------------------------------------
೩.ಆಲೂಗೆಡ್ಡೆ-ಹುಣಸೆ ರಸ ಪಲ್ಯ
--------------------------------------------------------------------------------------------------------------------------------------

ಬೇಕಾಗುವ ಸಾಮಗ್ರಿಗಳು:
ಸಣ್ಣ ಗಾತ್ರದ ಆಲೂಗಡ್ಡೆ : ೬

ಹುಣಸೆ ರಸ : ಕಾಲು ಲೋಟ
ಸಾರಿನ ಪುಡಿ:ಒಂದು ಚಮಚ
ಬೆಲ್ಲ :ಸಣ್ಣ ಚೂರು
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ

ಅಲಂಕಾರಕ್ಕೆ :
ನೀರುಳ್ಳಿ ಚೂರು :ಸ್ವಲ್ಪ
ಕೊತ್ತಂಬರಿ ಚೂರು :ಸ್ವಲ್ಪ

ವಿಧಾನ :
೧.ಸಣ್ಣ ಅಲೂಗದ್ದೆಗಳನ್ನು ಬೇಯಿಸಿ, ಸಿಪ್ಪೆ ಬೇರ್ಪಡಿಸಿ ಇಟ್ಟುಕೊಳ್ಳಿ.
೨.ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ.
೩.ಇದಕ್ಕೆ ಬೆಂದ ಆಲೂಗಡ್ಡೆಗಳನ್ನೂ ಸೇರಿಸಿ.
೪.ಬಳಿಕ ಹುಣಸೆ ರಸ,ಸಾರಿನ ಪುಡಿ,ಬೆಲ್ಲ,ಉಪ್ಪು ಹಾಕಿ ನಿಧಾನವಾಗಿ ಕಲಕಿ . ಅಲೂಗಡ್ಡೆಯ ಮೇಲೆ ಈ ಮಸಾಲೆಗಳೆಲ್ಲ ಸರಿಯಾಗಿ ತಗಲುವಂತೆ ಕಲಕಬೇಕು.
೫.ಸುಮಾರು ಹತ್ತು ನಿಮಿಷ ಮಂದ ಉರಿಯಲ್ಲಿ ಬೇಯಿಸಿ.
೬.ಸಣ್ಣಗೆ ಹೆಚ್ಚಿದ ನೀರುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

-------------------------------------------------------------------------------------------------------------------------

4.ತುರಿದ ಬೀಟ್ರೂಟ್ ಪಲ್ಯ
-------------------------------------------------------------------------------------------------------


ಬೀಟ್ರೂಟ್ : ಒಂದು
ತೆಂಗಿನ ತುರಿ :ಕಾಲು ಲೋಟ
ಬೆಲ್ಲ :ಸಣ್ಣ ಚೂರು
ಉಪ್ಪು :ರುಚಿಗೆ ತಕ್ಕಷ್ಟು
ಹುಣಸೆ ರಸ :ಅರ್ಧ ಚಮಚ

ಒಗ್ಗರಣೆಗೆ :
ಎಣ್ಣೆ, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ತಲಾ ಒಂದು ಚಮಚ
ಕೆಂಪು ಮೆಣಸು : ನಾಲ್ಕು
ಇಂಗು : ಚಿಟಿಕೆ

ವಿಧಾನ
೧.ಬೀಟ್ರೂಟ್ ಸಿಪ್ಪೆ ತೆಗೆದು, ಅದನ್ನು ತುರಿಯಿರಿ.
೨,ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದು,ಅರಿಸಿನ,ಸಾಸಿವೆ ,ಜೀರಿಗೆ,ಕಡಲೆ ಬೇಳೆ,ಕರಿಬೇವು ,ಕೆಂಪು ಮೆಣಸು ,ಇಂಗು ಹಾಕಿ ಒಗ್ಗರಣೆ ತಯಾರಿಸಿ.
೩.ಇದರಲ್ಲಿ ತುರಿದ ಬೀಟ್ರೂಟ್ ಹಾಕಿ ಬಾಡಿಸಿ.
೪.ಬಳಿಕ ಇದಕ್ಕೆ ತೆಂಗಿನ ತುರಿ,ಬೆಲ್ಲ,ಹುಣಸೆ ರಸ,ಉಪ್ಪು ಹಾಕಿ ಚೆನ್ನಾಗಿ ಕಲಕಿ.

----------------------------------------------------------------------------------------------------------------------------------------------------

5.ಟೊಮೇಟೊ ಮಸಾಲ
--------------------------------------------------------------------------------------------------------------------------


ಬೇಕಾಗುವ ಸಾಮಗ್ರಿಗಳು:
ಟೊಮೇಟೊ:೪
ನೀರುಳ್ಳಿ : ೨
ಎಣ್ಣೆ :ನಾಲ್ಕು ಚಮಚ

ದಾಲ್ಚಿನ್ನಿ :ಸಣ್ಣ ಚೂರು
ಲವಂಗ : 3
ಬೆಳ್ಳುಳ್ಳಿ : ೬ ಎಸಳು
ಕರಿಬೇವು : ೧೦ ಎಸಳು
ಹಸಿ ಮೆಣಸು : ೫
ಜೀರಿಗೆ: ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು

ವಿಧಾನ :
೧.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಜೀರಿಗೆ,ಕರಿಬೇವು, ಹಸಿ ಮೆಣಸು ಹಾಕಿ ಬಾಡಿಸಿಕೊಳ್ಳಿ.
೨.ಇದರಲ್ಲಿ ಹೆಚ್ಚಿದ ಟೊಮೇಟೊ,ನೀರುಳ್ಳಿ,ಬೆಳ್ಳುಳ್ಳಿ ಹಾಕಿ ಕಲಕಿ.
೩.ಟೊಮೇಟೊ ಸರಿಯಾಗಿ ಬೇಯುವ ತನಕ ಹಾಗೇ ಬಿಡಿ.ಈಗ ದಾಲ್ಚಿನ್ನಿ ಮತ್ತು ಲವಂಗ ಹಾಕಿ. ಮಧ್ಯ ಮಧ್ಯ sauTininda ತಿರುವುತ್ತಿರಿ.
೪.ಇದಕ್ಕೆ ಉಪ್ಪು ಹಾಕಿ, ಮತ್ತೆ ಮೂರು-ನಾಲ್ಕು ನಿಮಿಷ ಬೇಯಲು ಬಿಡಿ.

ಇದೀಗ ಟೊಮೇಟೊ ಮಸಾಲ ತಯಾರಾಯಿತು. ಚಪಾತಿಗೆ ಹೇಳಿ ಮಾಡಿಸಿದ ಜತೆ ಇದು

Friday, February 25, 2011

ಇವತ್ತಿನ ವಿಜಯ next ನಲ್ಲಿ ...

ವಿದ್ಯಾ ರಶ್ಮಿ ಪೆಲತ್ತಡ್ಕ ಬರೆದ 'ತವರು sickness ' ಲೇಖನದಲ್ಲಿ ...

ಪೂರ್ತಿ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
ಪುಟ ಸಂಖ್ಯೆ ೮, ಫೆಬ್ರವರಿ ೨೫,೨೦೧೧ ಇಲ್ಲಿದೆ ಆ ಲೇಖನ .

Thursday, February 24, 2011

ಮೊಸರು ಗೊಜ್ಜು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಬೇಸಗೆಯ ಬಿಸಿಲಿಗೆ ಅಥವಾ ಮಸಾಲೆಯುಕ್ತ ಪದಾರ್ಥಗಳ ಜತೆ ತಂಪು ನೀಡುವುದು ಮೊಸರಿನ ಈ ಖಾದ್ಯಗಳು. ತಯಾರಿಸಲು ಸುಲಭ. ಆರೋಗ್ಯಕ್ಕೆ ಹಿತಕರ. ಇನ್ನೇಕೆ ತಡ!! ಇವುಗಳನ್ನು ಮಾಡಿ ನೋಡಿ .

೧.ಅನಾನಸು ರಾಯಿತ


ಬೇಕಾಗುವ ವಸ್ತುಗಳು
ಅನಾನಸಿನ ಚೂರುಗಳು : ಒಂದು ಲೋಟ
ಮೊಸರು : ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಕಾಳು ಮೆಣಸಿನ ಪುಡಿ :ಚಿಟಿಕೆ
ಜೇನು : ಒಂದು ಚಮಚ

ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಕಲಸಿ.ಬಿಸಿ ಅನ್ನದ ಜತೆ ತಂಪಾದ ರಾಯಿತ ..ಆಹಾ ಏನು ಅಧ್ಭುತ ರುಚಿ !

೨.ಬಟಾಟೆ ಮೊಸರು ಗೊಜ್ಜು


ಬೇಕಾಗುವ ವಸ್ತುಗಳು
ಬಟಾಟೆ :೧
ಹಸಿ ಮೆಣಸು :೨
ಶು೦ಠಿ :ಸಣ್ಣ ಚೂರು
ಮೊಸರು : ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ, ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ
೧.ಬಟಾಟೆ ಯನ್ನು ಬೇಯಿಸಿ, ಸಿಪ್ಪೆ ತೆಗೆದು ,ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಿ.
೨.ಇದಕ್ಕೆ ಮೊಸರು,ಶು೦ಠಿ,ಕತ್ತರಿಸಿದ ಹಸಿ ಮೆಣಸು,ಉಪ್ಪು ಹಾಕಿ ಚೆನ್ನಾಗಿ ಕಲಸಿ.
೩.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಬಟಾಟೆಯ ಮಿಶ್ರಣಕ್ಕೆ ಹಾಕಿ.

೩.ತೊಂಡೆಕಾಯಿ ಮೊಸರು ಗೊಜ್ಜು

ಬೇಕಾಗುವ ವಸ್ತುಗಳು
ತೊಂಡೆಕಾಯಿ: ಒಂದು ಲೋಟ
ತೆಂಗಿನ ತುರಿ : ಕಾಲು ಲೋಟ
ಜೀರಿಗೆ : ಒಂದು ಚಮಚ
ಕಾಳು ಮೆಣಸು : ಅರ್ಧ ಚಮಚ
ಮೊಸರು : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ, ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ :

೧.ತೊಂಡೆಕಾಯಿಯನ್ನು ಇಡಿಯಾಗಿ ಬೇಯಿಸಿ ಇಟ್ಟುಕೊಳ್ಳಿ.
೨.ಇದನ್ನು ತೆಂಗಿನ ತುರಿ,ಜೀರಿಗೆ ,ಕಾಳು ಮೆಣಸು ಇವುಗಳ ಜತೆ ಒಟ್ಟಿಗೆ ರುಬ್ಬಿ.
೩.ರುಬ್ಬಿದ ಮಿಶ್ರಣಕ್ಕೆ ಮೊಸರು,ಉಪ್ಪು ಹಾಕಿ ಕಲಕಿ.
೪.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಬಟಾಟೆಯ ಮಿಶ್ರಣಕ್ಕೆ ಹಾಕಿ.


೪.ಪಡುವಲಕಾಯಿ ಹಶಿ


ಬೇಕಾಗುವ ವಸ್ತುಗಳು
ಪಡುವಲಕಾಯಿ:೧
ತೆಂಗಿನ ತುರಿ : ಕಾಲು ಲೋಟ
ಬೆಲ್ಲ : ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಎಣ್ಣೆ, ಸಾಸಿವೆ :ತಲಾ ಒಂದು ಚಮಚ
ಇಂಗು :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು
ಕೆಂಪು ಮೆಣಸು :೨

ವಿಧಾನ
೧.ಪಡುವಲಕಾಯಿಯನ್ನು ಸಣ್ಣಗೆ ಹೆಚ್ಚಿ
೨.ಇದನ್ನು ನೀರು,ಬೆಲ್ಲ ಮತ್ತು ಉಪ್ಪು ಇವುಗಳ ಜತೆ ಬೇಯಿಸಿ,ತಣಿಸಿ.
೩.ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿ,ತಣಿದ ಪಡುವಲಕಾಯಿ ಮಿಶ್ರಣಕ್ಕೆ ಹಾಕಿ.
೪.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸಾಸಿವೆ,ಕೆಂಪು ಮೆಣಸು ,ಇಂಗು ಹಾಕಿ .ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಪಡುವಲಕಾಯಿ ಮಿಶ್ರಣಕ್ಕೆ ಹಾಕಿ.


೫.ದೊಣ್ಣೆ ಮೆಣಸಿನ ಕಾಯಿ ರಾಯಿತ

ಬೇಕಾಗುವ ವಸ್ತುಗಳು
ದೊಣ್ಣೆ ಮೆಣಸಿನ ಕಾಯಿ :೨
ಮೊಸರು : ಎರಡು ಲೋಟ
ಬೆಲ್ಲ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ:ಎರಡು ಚಮಚ
ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಕೆಂಪು ಮೆಣಸು : 3
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ
೧.ದೊಣ್ಣೆ ಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಉದ್ದು, ಕೆಂಪು ಮೆಣಸು , ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ.
೩.ಇದಕ್ಕೆ ಹೆಚ್ಚಿದ ದೊಣ್ಣೆ ಮೆಣಸನ್ನು ಹಾಕಿ ಚೆನ್ನಾಗಿ ಬಾಡಿಸಿ.
೪.ಬಳಿಕ ಇದಕ್ಕೆ ಉಪ್ಪು ಮತ್ತು ಬೆಲ್ಲ ಹಾಕಿ ಮಂದ ಉರಿಯಲ್ಲಿ ಕಲಕಿ.
೫.ಒಲೆ ಆರಿಸಿ,ಇದನ್ನು ತಣಿಯಲು ಬಿಡಿ. ಬಳಿಕ ಇದಕ್ಕೆ ಮೊಸರು ಸೇರಿಸಿ.
೬.ದೊಣ್ಣೆ ಮೆಣಸಿನ ಕಾಯಿ ಮೊಸರು ಗೊಜ್ಜು ತಯಾರಾಯಿತು.
---------------------------------------------------------------------------------------------

Monday, February 7, 2011

ಬ್ಲಾಗ್ ಲೋಕದಲ್ಲಿ ಕಳ್ಳತನ..

'ಕನ್ನಡಹನಿಗಳಲ್ಲಿ ಹೊಸ ಕವಿತೆ ಬರೆದರೆ ಅದು ಕವಿತ್ವ...
ಕನ್ನಡಹನಿಗಳನ್ನೇ ಕದ್ದು ಬೇರೆಡೆ ಬರೆದರೆ ಅದು ಕಪಿತ್ವ
ಸೃಜನ ಶೀಲತೆಯನ್ನು ಪ್ರೋತ್ಸಾಹಿಸುವುದೇ ನೈಜತ್ವ'
ಈ ಸಾಲುಗಳು ಇರುವುದು ಕನ್ನಡ ಹನಿಗಳು ಎಂಬ ಜಾಲತಾಣದಲ್ಲಿ.

ಆದರೆ ಅವರು ನನ್ನ ಬ್ಲಾಗ್ ನಿಂದ ಸದ್ದಿಲ್ಲದೇ ಒಂದು ಛಾಯಾಚಿತ್ರವನ್ನು ಕದ್ದು ಅವರ ಜಾಲ ತಾಣದಲ್ಲಿ ಹಾಕಿಕೊಂಡಿದ್ದಾರೆ.

ನಾನು ನಮ್ಮ ಮನೆಯಲ್ಲಿ ನೆಲ್ಲಿಕಾಯಿ ತಂಬುಳಿ ತಯಾರಿಸಿ, ನನ್ನದೇ ಕ್ಯಾಮೆರ ದಲ್ಲಿ ತೆಗೆದ ನೆಲ್ಲಿಕಾಯಿ ತಂಬುಳಿಯ ಚಿತ್ರ ಯಥಾವತ್ತಾಗಿ ಅವರ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
nanna blog
kannada hanigaLu

ಈ ಬಗ್ಗೆ ನಾನು ಅವರಿಗೆ ಮೈಲ್ ಮಾಡಿದರೂ ಅದರ ಬಗ್ಗೆ ಯಾವುದೇ ಉತ್ತರ ಬಂದಿಲ್ಲ. ಇದಕ್ಕೆ ಏನು ಹೇಳಬೇಕು ?


ಇಂಥದ್ದೇ ಒಂದು ಸಂಗತಿಯನ್ನು ಕೆಲವು ದಿನಗಳ ಹಿಂದೆ ಪಾಕ ಚಂದ್ರಿಕೆಯ ನಾವಡರೂ ಪ್ರಸ್ತಾಪಿಸಿದ್ದರು.

Saturday, February 5, 2011

ಸಾಹಿತ್ಯ ಸಮ್ಮೇಳನ

ಕನ್ನಡ ಎನೆ ಕುಣಿದಾಡುವುದೆನ್ನೆದೆ..
ಇವತ್ತಿನ ವಿಜಯ ಕರ್ನಾಟಕದಲ್ಲಿ ಹರೀಶ್ ಕೇರ ಅವರ ಲೇಖನದಲ್ಲಿ..
ಇದನ್ನು ಓದಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ

Friday, February 4, 2011

ಸಾರು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

--------------------------------------------------
ಸಾರು
--------------------------------------------------


ದಕ್ಷಿಣ ಭಾರತೀಯ ಆಹಾರಕ್ರಮದಲ್ಲಿ ಅತಿ ಮುಖ್ಯವಾದ ಒಂದು ಪ್ರಕಾರವೆಂದರೆ ಸಾರು.
ರಸಂ, ಸಾರು, ಚಾರು ಎಂಬ ವಿವಿಧ ನಾಮಾಂಕಿತ ಸಾರು ಅತ್ಯಂತ ಸರಳ ಮತ್ತು ರುಚಿಕರವಾದದ್ದು.ಯಾರಿಗಾದರೂ ಅಡುಗೆ ಮಾಡಲು ಬರುವುದಿಲ್ಲ ಎಂದಿದ್ದರೆ ಅದನ್ನು ವ್ಯಕ್ತಪಡಿಸುವ ವಾಕ್ಯವೇನು ಗೊತ್ತೆ? ಆಕೆಗೆ/ಆತನಿಗೆ ಒಂದು ಅನ್ನ ಸಾರು ಮಾಡಲು ಬರುವುದಿಲ್ಲ ಎಂದು!!ಗಗನಕ್ಕೇರಿದ ಬೇಳೆ ಬೆಲೆಯಿಂದಾಗಿ ಸಾರಿಗೆ ಬೇಳೆ ಬೇಯಿಸುವುದು ಕಷ್ಟವಾಗುತ್ತಿರುವ ಈ ಕಾಲದಲ್ಲಿ ತೊಗರಿ ಬೇಳೆ ಇಲ್ಲದೆ ಮಾಡಬಹುದಾದ ಸಾರಿನ ವಿಧಾನಗಳನ್ನು ಬರೆಯುತ್ತಿದ್ದೇನೆ.ಇವುಗಳು ಮಳೆಗಾಲದಲ್ಲಿ ಕಾಡುವ ಜ್ವರ,ಶೀತ,ಕೆಮ್ಮಿಗೆ ಕೊಂಚ ಕಡಿವಾಣವನ್ನೂ ಹಾಕಬಲ್ಲವು. ಓದಿ , ಮನೆಯಲ್ಲಿ ಇವುಗಳನ್ನು ಮಾಡಿ ನೋಡಿ,ಹೇಗಾಯ್ತು ಅಂತ ತಿಳಿಸುತ್ತೀರಲ್ಲಾ ?

-----------------------------
೧.ಕಾಳು ಮೆಣಸು-ಜೀರಿಗೆ ಸಾರು
-----------------------------

ಕಾಳು ಮೆಣಸು : ಅರ್ಧ ಚಮಚ
ಜೀರಿಗೆ:ಒಂದು ಚಮಚ
ಬೆಲ್ಲದ ಪುಡಿ : ಒಂದು ಚಮಚ
ಬೆಳ್ಳುಳ್ಳಿ ಎಸಳು :೪

ಅರಸಿನ :ಕಾಲು ಚಮಚ
ಸಾಸಿವೆ :ಒಂದು ಚಮಚ
ತುಪ್ಪ :ಒಂದು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಹುಣಸೆ ಹುಳಿ: ನಿಂಬೆ ಗಾತ್ರದಷ್ಟು
ಬೇವಿನೆಲೆ :ಹತ್ತು ಎಸಳು
ಇಂಗು:ಚಿಟಿಕೆ



ವಿಧಾನ :

ಮೊದಲಿಗೆ ಜೀರಿಗೆ ಮತ್ತು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ.

ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ.

ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು, ಬೇವಿನೆಲೆ ಹಾಕಿ ಕಲಕಿ, ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ.

ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಕಿ.ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ.

ಇದೀಗ ನೋಡಿ ,ನಾಲಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ತಯಾರಾಯಿತು. ಇನ್ನೇಕೆ ತಡ, ಬಿಸಿ ಬಿಸಿ ಅನ್ನಕ್ಕೆ ಕಲಕಿ ತಿನ್ನುವುದೊಂದೇ ಬಾಕಿ!!

ಕಾಳು ಮೆಣಸು,ಜೀರಿಗೆ ಕೆಮ್ಮು,ಕಫಕ್ಕೆ ಅತ್ಯುತ್ತಮ ಔಷಧಿ!




---------------------------------------------
೨.ಸಾಂಬ್ರಾಣಿ ಎಲೆಯ ಸಾರು :
---------------------------------------------
ಬೇಕಾಗುವ ಸಾಮಗ್ರಿಗಳು:

ಸಾಂಬ್ರಾಣಿ ಎಲೆ : ಎರಡು ಹಿಡಿ
ನೀರುಳ್ಳಿ :ಒಂದು
ತುಪ್ಪ :ಎರಡು ಚಮಚ

ಉದ್ದು,ಅರಿಸಿನ,ಸಾಸಿವೆ ,ಜೀರಿಗ,ಎಣ್ಣೆ, : ತಲಾ ಒಂದು ಚಮಚ
ಕೆಂಪು ಮೆಣಸು : 3

ಹುಣಸೆ ರಸ :4 ಚಮಚ
ಬೆಲ್ಲ :ಮಧ್ಯಮ ಗಾತ್ರದ ಚೂರು
ಉಪ್ಪು :ರುಚಿಗೆ ತಕ್ಕಷ್ಟು


ಮೊದಲಿಗೆ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ.
ನೀರಿಗೆ ಹುರಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ಸೇರಿಸಿ, ಕುದಿಯಲು ಬಿಡಿ.
ಇದಕ್ಕೆ ಹುಣಸೆ ರಸ ಹಾಗೂ ಬೆಲ್ಲವನ್ನು ಸೇರಿಸಿ.
ಕುಡಿಯುತ್ತ ಬಂದಂತೆ ಉಪ್ಪನ್ನು ಹಾಕಿ.
ಆಮೇಲೆ ಒಲೆಯಿಂದ ಇಳಿಸಿ.

ಈಗ ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.

ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಒಲೆಯಿಂದ ಇಳಿಸಿ,ಕುದಿಸಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳ ಮಿಶ್ರಣಕ್ಕೆ ಹಾಕಿ.

ಈ ಸಾರು ಬಹಳ ರುಚಿ.ಅನ್ನಕ್ಕೆ ಬಹಳ ಒಳ್ಳೆಯ ಜತೆ!!


-------------------------
೩.ನಿಂಬೆ ಸಾರು
------------------------




ನಿಂಬೆ ರಸ ವಿಟಮಿನ್ ಸಿ ಯನ್ನು ಹೊಂದಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಂಬೆ ರಸ ಬಳಸುವುದು ಅತೀ ಉತ್ತಮ.


ಸಾಮಗ್ರಿಗಳು

ನಿಂಬೆ ರಸ:ಎರಡು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ನೀರು :ಎರಡು ಲೋಟ

ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು


------------------
ವಿಧಾನ
-------------------

೧.ನೀರನ್ನು ಕುದಿಸಿ, ಅದಕ್ಕೆ ಉಪ್ಪು,ಬೆಲ್ಲದ ಪುಡಿ ಹಾಕಿ.
೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.ಸಾರಿಗೆ ನಿಂಬೆ ರಸ ಹಿಂಡಿ,
೩.ಬೇಕಿದ್ದರೆ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಹಾಕಬಹುದು.


----------------------
೪.ಪುನರ್ಪುಳಿ ಸಾರು
---------------------


ದಕ್ಷಿಣ ಕನ್ನಡದಲ್ಲಿ ಬಹಳ ಜನಪ್ರಿಯವಾದ ಸಾರು ಇದು.ಪುನರ್ಪುಳಿಯನ್ನು ಸಾಮಾನ್ಯವಾಗಿ ಪಿತ್ತ ಹೆಚ್ಚಾದಾಗ, ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಟ್ಟರೆ, ತಲೆ ತಿರುಗುವಿಕೆ, ಅಲರ್ಜಿಯಂತಹ ತೊಂದರೆಗಳುಂಟಾದಾಗ ಹೆಚ್ಚಾಗಿ ಬಳಸುತ್ತಾರೆ.


ಬೇಕಾಗುವ ಸಾಮಗ್ರಿಗಳು

ಪುನರ್ಪುಳಿ (ಕೋಕಮ್) : ೮ ರಿಂದ ಹತ್ತು
ನೀರು :ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ಕಾಳುಮೆಣಸಿನ ಪುಡಿ:ಕಾಲು ಚಮಚ

ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು

ವಿಧಾನ :

೧.ಪುನರ್ಪುಳಿಯನ್ನು ನೀರಿನಲ್ಲಿ ಹದಿನೈದು ನಿಮಿಷಗಳ ಕಾಲ ನೆನೆಸಿ ಇಡಿ
೨.ಉಪ್ಪು,ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಇವುಗಳನ್ನು ಈ ನೀರಿಗೆ ಹಾಕಿ,ಕುದಿಯಲು ಬಿಡಿ.

೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.


ಅತ್ಯಂತ ಸರಳವೂ ರುಚಿಕರವೂ ಆದ ಸಾರು ಇದು.