Pages

Thursday, June 9, 2011

ಮಳೆಗಾಲದ ತಿಂಡಿಗಳು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಇದರಲ್ಲಿ ಬರೆದಿರುವ ಬಾಳೆ ಕಾಯಿ ಕಾಪು, ದಹಿ maTar ಚಾಟ್ ,ಪೆಪ್ಪರ್ ಗಾರ್ಲಿಕ್ ಸೂಪ್ ಇದನ್ನು ನಾನು ಕಸ್ತೂರಿ ಟಿ.ವಿ. ಯ 'ನಳ ಪಾಕ 'ಕಾರ್ಯಕ್ರಮದಲ್ಲಿ ಅಡುಗೆ ಮಾಡಿ ತೋರಿಸಿದ್ದೆ :)

ಮಳೆಗಾಲ ಎಂದರೆ ಮೊದಲೇ ಮಳೆ..ಥಂಡಿ . ಏನಾದರೂ ಬಿಸಿ ಬಿಸಿ,ಖಾರ ಖಾರ ತಿಂಡಿಗಳನ್ನು ಚಪ್ಪರಿಸಲು ಮನ ಹಾತೊರೆಯುತ್ತದೆ. ನಿಮಗಿದೋ ಕೆಲವೊಂದು ಐಡಿಯಾ ಗಳು.

1.ಬಾಳೆ ಕಾಯಿ ಕಾಪು

ಬೇಕಾಗುವ ಸಾಮಗ್ರಿಗಳು

ಬಾಳೆಕಾಯಿ :1
ಅಕ್ಕಿ ಹಿಟ್ಟು : ಒಂದು ಲೋಟ
ಕೊತ್ತಂಬರಿ : ಎರಡು ಚಮಚ
ಒಣ ಮೆಣಸು : ೫
ಉದ್ದು : ಒಂದು ಚಮಚ
ತೆಂಗಿನ ತುರಿ : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ : ಸ್ವಲ್ಪ
ಹುಣಸೆ ಹುಳಿ : ಸಣ್ಣ ಗೋಲಿ ಗಾತ್ರದ್ದು
ಬೆಲ್ಲ : ಸಣ್ಣ ಚೂರು

ವಿಧಾನ.
೧.ಅಕ್ಕಿಹಿಟ್ಟನ್ನು ಬಾಣಲೆಗೆ ಹಾಕಿ ಪರಿಮಳ ಬರುವ ತನಕ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ಕೊತ್ತಂಬರಿ,ಒಣ ಮೆಣಸು, ಉದ್ದು,ತೆಂಗಿನ ತುರಿ,ಉಪ್ಪು,ಹುಣಸೆ, ಬೆಲ್ಲ ಮತ್ತು ಹುರಿದ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರನ್ನು ಮಿಶ್ರ ಮಾಡಿ ರುಬ್ಬಿ. ಈ ಮಿಶ್ರಣವು ಬೋಂಡ ಹಿಟ್ಟಿನ ಹದದಲ್ಲಿ ಇರಬೇಕು.
೩.ಬಾಳೆ ಕಾಯಿಯನ್ನು ಬಿಲ್ಲೆಗಳಾಗಿ ಹೆಚ್ಚಿ ಈ ಮಿಶ್ರಣದಲ್ಲಿ ಹಾಕಿ.
೪.ಕಾವಲಿಯನ್ನು ಬಿಸಿ ಮಾಡಿ, ಒಂದು ಚಮಚ ಎಣ್ಣೆ ಹಾಕಿ. ಅಕ್ಕಿ ಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಬಾಲೆಕಾಯಿಯ ಬಿಲ್ಲೆಗಳನ್ನು ಕಾವಲಿಯಲ್ಲಿ ಹಾಕಿ ಬೇಯಿಸಿ. ೨-೩ ನಿಮಿಷ ಕಳೆದ ಮೇಲೆ ಬಾಳೆ ಕಾಯಿ ಬಿಲ್ಲೆಗಳನ್ನು ಮಗುಚಿ ಹಾಕಿ ಬೇಯಿಸಬೇಕು.

೨.ಭೇಲ್ ಪುರಿ.



ಬೇಕಾಗುವ ಸಾಮಗ್ರಿಗಳು

ಮಂಡಕ್ಕಿ : ನಾಲ್ಕು ಲೋಟ
ನೀರುಳ್ಳಿ : ಒಂದು
ಟೊಮೇಟೊ :ಒಂದು,
ನಿಂಬೆ ರಸ : ಒಂದು ಚಮಚ
ಖಾರದ ಪುಡಿ : ಒಂದು ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಎಣ್ಣೆ :ಎರಡು ಚಮಚ
ನೆಲಕಡಲೆ : ಒಂದು ಹಿಡಿ

ವಿಧಾನ :
೧.ನೀರುಳ್ಳಿ, ಟೊಮೇಟೊ ,ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ.
೨.ನೆಲಕಡಲೆಯನ್ನು ಹುರಿದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ.
೩.ಒಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ (೧) ಮತ್ತು (೨) ರಲ್ಲಿ ಸೂಚಿಸಿದ ವಸ್ತುಗಳನ್ನು ಹಾಕಿ ಕಲಕಿ. ಇದಕ್ಕೆ ನಿಂಬೆ ರಸ, ಉಪ್ಪು, ಖಾರದ ಪುಡಿ,ಎಣ್ಣೆ ಹಾಕಿ ಚೆನ್ನಾಗಿ ಕಲಕಿ ಕೂಡಲೇ ತಿನ್ನಿ.

ವಿ.ಸೂ. ಬೇಕಿದ್ದರೆ ತೆಳ್ಳಗಿನ ಸೇವು ( ಖಾರದ ಖಡ್ಡಿ ) ಸೇರಿಸ ಬಹುದು.


೩.ಪೆಪ್ಪರ್ ಗಾರ್ಲಿಕ್ ಸೂಪ್


ಬೇಕಾಗುವ ಸಾಮಗ್ರಿಗಳು

ಕಾಳು ಮೆಣಸು : ಒಂದು ಚಮಚ
ಬೆಳ್ಳುಳ್ಳಿ ಎಸಳು :ಹತ್ತು
ತೆಂಗಿನ ತುರಿ : ಕಾಲು ಲೋಟ
ಉದ್ದು : ಒಂದು ಚಮಚ
ನೀರು :ಎರಡು ಲೋಟ
ರುಚಿಗೆ ತಕ್ಕಷ್ಟು ಉಪ್ಪು

ತುಪ್ಪ :ಒಂದು ಚಮಚ
ನಿಂಬೆ ರಸ :ಒಂದು chamcha

ವಿಧಾನ :
೧.ಕಾಳು ಮೆಣಸು ಮತ್ತು ಉದ್ದನ್ನು ಚೆನ್ನಾಗಿ ಹುರಿದುಕೊಳ್ಳಿ.
೨.ಮಿಕ್ಸಿಯಲ್ಲಿ ತೆಂಗಿನ ತುರಿ, ಕಾಳು ಮೆಣಸು ಮತ್ತು ಉದ್ದನ್ನು ಹಾಕಿ ರುಬ್ಬಿ.
೩. ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ , ಬೆಳ್ಳುಳ್ಳಿಯನ್ನು ಕರಿಯಿರಿ.
೪.ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಸುರಿದು, ಅದಕ್ಕೆ ಕರಿದ ಬೆಳ್ಳುಳ್ಳಿಯನ್ನು ಸೇರಿಸಿ.
೫.ಈ ಮಿಶ್ರಣವನ್ನು ಕುದಿಯಲು ಬಿಡಿ,
೬.ಉಪ್ಪು ಮತ್ತು ನಿಂಬೆ ರಸ ಹಾಕಿ ಕೆಳಗಿಳಿಸಿ.

ಸೂಚನೆ : ಇದನ್ನು ಸೂಪ್ ನಂತೆ ಅಥವಾ ಸಾರಿನಂತೆ ಸವಿಯಬಹುದು. ಉದ್ದಿನ ಬದಲು ಜೀರಿಗೆ ಹಾಕಿದರೆ ವಿಭಿನ್ನ ರುಚಿ ಬರುತ್ತದೆ.


೪. ಕಷಾಯ

ಮಲೆನಾಡಿನಲ್ಲಿ ಕಷಾಯ ಎನ್ನುವುದು ಜನಪ್ರಿಯ ಪೇಯ.

ಬೇಕಾಗುವ ಸಾಮಗ್ರಿಗಳು

ಕಷಾಯದ ಪುಡಿ ಮಾಡಲು :
ಕಾಳು ಮೆಣಸು : ಎರಡು ಚಮಚ
ಜೀರಿಗೆ: ನಾಲ್ಕು ಚಮಚ
ಕೊತ್ತಂಬರಿ : ಒಂದು ಹಿಡಿ.
ಏಲಕ್ಕಿ : ಒಂದು
ಲವಂಗ: ೨
ಹಿಪ್ಪಲಿ : ಒಂದು ಚಮಚ
ಒಣ ಶುಂಥಿ : ಸಣ್ಣ ಚೂರು
ಅರಸಿನ : ಕಾಲು ಚಮಚ

ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ನುಣ್ಣಗೆ ನೀರು ಹಾಕದೆ ಪುಡಿ ಮಾಡಿ ಇಟ್ಟುಕೊಳ್ಳಿ. ಇದು ಕಷಾಯದ ಪುಡಿ.

ಕಷಾಯ ಮಾಡಲು

೧ ಚಮಚ ಕಷಾಯದ ಪುಡಿ
ಬೆಲ್ಲ : ಸಣ್ಣ ಚೂರು
ನೀರು :ಎರಡು ಲೋಟ

ನೀರಿಗೆ ಬೆಲ್ಲ, ಕಷಾಯದ ಪುಡಿ ಹಾಕಿ ಕುದಿಸಿ.
ಬಳಿಕ ಇದನ್ನು ಸೋಸಿ , ಕುಡಿಯಬೇಕು. ಬೇಕಿದ್ದರೆ ಹಾಲು ಸೇರಿಸಬಹುದು.

೫. ದಹಿ maTar ಚಾಟ್

ಬೇಕಾಗುವ ಸಾಮಗ್ರಿಗಳು

ಬಟಾಣಿ : ಎರಡು ಲೋಟ
ಮೊಸರು : ಕಾಲು ಲೋಟ
ಗರಂ ಮಸಾಲೆ ಅರ್ಧ ಚಮಚ
ಚಾಟ್ ಮಸಾಲೆ ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಹುಣಸೆ ರಸ :ಕಾಲು ಲೋಟ
ಬೆಲ್ಲ : ಸಣ್ಣ ಚೂರು
ಖಾರದ ಪುಡಿ : ಕಾಲು ಚಮಚ
ಕೊತ್ತಂಬರಿ ಸೊಪ್ಪು :swalpa
ನೀರುಳ್ಳಿ :೧

ವಿಧಾನ
೧.ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ.
೨.ಒಂದು ಪಾತ್ರೆಯಲ್ಲಿ ಹುಣಸೆ ರಸ ಹಾಕಿ ಕುದಿಸಿ.
೩.ಕುದಿ ಬರುತ್ತಿದ್ದಂತೆ ಅದಕ್ಕೆ ಬೆಲ್ಲ, ಉಪ್ಪು, ಖಾರದ ಪುಡಿ,ಚಾಟ್ ಮಸಾಲ, ಗರಂ ಮಸಾಲ ಹಾಕಿ ಕಲಕಿ.
೪.ಇದಕ್ಕೆ ಬೇಯಿಸಿದ ಬಟಾಣಿಯನ್ನು ಸೇರಿಸಿ ಮಂದ ಉರಿಯಲ್ಲಿ ಬೇಯಿಸಿ.
೫.ಇದನ್ನು ಬಡಿಸುವಗಾ ಒಂದು ತಟ್ಟೆಗೆ ಬೇಯಿಸಿದ ಬಟಾಣಿಮಿಶ್ರಣ ಹಾಕಿ, ಅದಕ್ಕೆ ಮೊಸರು, ಕೊತ್ತಂಬರಿ ಸೊಪ್ಪು ಮತ್ತು ಹೆಚ್ಚಿದ ನೀರುಳ್ಳಿ ಹಾಕಿ ತಿನ್ನಲು ಕೊಡಿ.ಲು

2 comments:

ಮಂಜು ಶಂಕರ್ said...

ಭೇಲ್ ಪುರಿ, ಬಾಳೆ ಕಾಯಿ ಕಾಪು - ಸೂಪರ್ ಆಗಿದೆ!

ಭಾವಜೀವಿ... said...

>>>
೫.ಈ ಮಿಶ್ರಣವನ್ನು ಕುಡಿಯಲು ಬಿಡಿ,
>>>

ಪಾತ್ರೆಯೆ ಸೂಪನ್ನು ಕುಡಿದರೆ ನಾವೇನು ಕುಡಿಯೋಣ!!? :)

ಮರೆತಿದ್ದೆ, ಎಲ್ಲಾ ತಿನಿಸುಗಳೂ ಬಾಯಲ್ಲಿ ನೀರೂರಿಸುತ್ತವೆ!