Pages

Tuesday, February 21, 2012

ವರ್ಲಿ

ನನಗೆ ವರ್ಲಿ ಚಿತ್ರದ ಹುಚ್ಚು ಮತ್ತಷ್ಟು ಹೆಚ್ಚಾಗಿದೆ !! ಇಲ್ಲಿ ನೋಡಿ ನನ್ನ ಕೆಲವು ಪ್ರಯೋಗಗಳು!!


ನಮ್ಮ ಮನೆಯ ಗೋಡೆಯ ಮೇಲೆ ಗೀಚಿದ್ದು ಹೀಗೆ




Wednesday, February 8, 2012

ಪಂಜಾಬಿ ಅಡುಗೆ

ಪಂಜಾಬಿ ಅಡುಗೆ
------------------------------

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’



೧.ಪಂಜಾಬಿ ಆಲೂ ಅಮ್ರಿತ ಸರಿ

ಬೇಕಾಗುವ ಸಾಮಗ್ರಿಗಳು

ಆಲೂ ಗೆಡ್ಡೆ : ೨೫೦ ಗ್ರಾಂ
ನೀರುಳ್ಳಿ : ೨
ಶು೦ಠಿ ಬೆಳ್ಳುಳ್ಳಿ ಪೇಸ್ಟ್ : 2 ಚಮಚ
ಓಮ ಕಾಳು : ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕಡ್ಲೆ ಹಿಟ್ಟು : ಅರ್ಧ ಲೋಟ
ಕೊತ್ತಂಬರಿ ಪುಡಿ : ೧ ಚಮಚ
ಕೆಂಪು ಮೆಣಸಿನ ಪುಡಿ  ೧ ಚಮಚ
ಗರಂ ಮಸಾಲ ಪುಡಿ  : ಅರ್ಧ ಚಮಚ
ಅರಸಿನ :ಚಿಟಿಕೆ
ಎಣ್ಣೆ : ಸ್ವಲ್ಪ
ಕೊತ್ತಂಬರಿ ಸೊಪ್ಪು : ಒಂದು ಹಿಡಿ

ವಿಧಾನ
೧.ಅಲೂಗೆದ್ದೆಯನ್ನು ಉದ್ದನೆಯ ತುಂಡುಗಳಾಗಿ ಹೆಚ್ಚಿಕೊಳ್ಳಿ
೨.ಕಡ್ಲೆಹಿಟ್ಟಿಗೆ   ಉಪ್ಪು  ,ಶು೦ಠಿ ಬೆಳ್ಳುಳ್ಳಿ ಪೇಸ್ಟ್,ಓಮ ಕಾಳು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ
೩. ಅಲೂ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯಿರಿ.
೪. ಒಂದು ಬಾಣಲೆಯಲ್ಲಿ  ಚಮಚ ಎಣ್ಣೆ ಹಾಕಿ ,ಬಿಸಿ ಮಾಡಿ. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಇದರಲ್ಲಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಉಪ್ಪು, ಅರಸಿನ, ಕೆಂಪು ಮೆಣಸಿನ ಪುಡಿ,ಗರಂ ಮಸಾಲ ಪುಡಿ ಹಾಕಿ ಕಲಕಿ.
೫.ಇದರಲ್ಲಿ ಕರಿದು ಇಟ್ಟಿರುವ ಅಲೂಗೆದ್ದೆಯ ಚೂರುಗಳನ್ನು ಹಾಕಿ ಕಲಕಿ, ೩-೪ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
೬.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಒಲೆ ಆರಿಸಿ.
ಇದು ಚಪಾತಿ ,ಪರಾಠ  ಗಳ ಜತೆ ಬಹಳ ರುಚಿ.

೨.ಖೋಯ ಮಟರ್

ಬೇಕಾಗುವ ಸಾಮಗ್ರಿಗಳು
ಬಟಾಣಿ : ಒಂದು ಲೋಟ
ಖೋವ : ೫೦೦ ಗ್ರಾಂ
ಪುಡಿ ಮಾಡಿದೆ ಗೇರುಬೀಜ (ಗೋಡಂಬಿ )  : ೩ ಚಮಚ
ಕೆಂಪು ಮೆಣಸು : ೧
ಕೆಂಪು ಮೆಣಸಿನ ಪುಡಿ  ೧ ಚಮಚ
ದ್ರಾಕ್ಷಿ : ೨ ಚಮಚ
ಅರಸಿನ :ಚಿಟಿಕೆ
ಎಣ್ಣೆ : ಸ್ವಲ್ಪ
ಶು೦ಠಿ ಬೆಳ್ಳುಳ್ಳಿ ಪೇಸ್ಟ್ : ಅರ್ಧ  ಚಮಚ
ಹುರಿದ ಎಳ್ಳು : ಒಂದು ಚಮಚ
ಕೊತ್ತಂಬರಿ ಪುಡಿ : ೧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು : ಒಂದು ಹಿಡಿ
ನೀರುಳ್ಳಿ ಪೇಸ್ಟ್ : ಅರ್ಧ ಲೋಟ
ಟೊಮೇಟೊ ರಸ : ಅರ್ಧ ಲೋಟ
(೨-೩  ಟೊಮೇಟೊಗಳನ್ನೂ ನೀರು ಹಾಕದೆ ರುಬ್ಬಿದರೆ ಸಾಕು )

ವಿಧಾನ :
  1. ಕ್ಹೊವ ವನ್ನು ಸ್ವಲ್ಪ ಹುರಿದು ಇಟ್ಟುಕೊಳ್ಳಿ
  2. ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ
  3. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ನೀರುಳ್ಳಿ ಪೇಸ್ಟನ್ನು ಹುರಿಯಿರಿ  .
  4. ಇದಕ್ಕೆ ಶು೦ಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ.
  5. ಬಳಿಕ ಇದಕ್ಕೆ ಟೊಮೇಟೊ ರಸ, ಅರಸಿನ, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ.
  6. ಮಿಶ್ರಣ ಎಣ್ಣೆ ಬಿಡುತ್ತಿದ್ದಂತೆ ಇದಕ್ಕೆ ಬೇಯಿಸಿದ ಬಟಾಣಿ ಸೇರಿಸಿ.
  7. ಬಳಿಕ ಹುರಿದ ಖೋವ,ಉಪ್ಪು ಸೇರಿಸಿ. ಚೆನ್ನಾಗಿ ಕಲಕುತ್ತ ಇರಿ.
  8. ಮಿಶ್ರಣವು ಚೆನ್ನಾಗಿ ಬೇಯುತ್ತಿದ್ದಂತೆ ಇದಕ್ಕೆ ದ್ರಾಕ್ಷೆ ಮತ್ತು  ಗೋಡಂಬಿ ಚೂರುಗಳನ್ನು ಹಾಕಿ.
  9. ಕೊತ್ತಂಬರಿ ಪುಡಿ ಸೇರಿಸಿ  ಮತ್ತಷ್ಟು ಕಲಸ್ಕಿ, ಒಲೆ ಆರಿಸಿ.
  10. ಇದಕ್ಕೆ ಕೊತ್ತಂಬರಿ ಸೊಪ್ಪು, ಹುರಿದ ಎಳ್ಳು, ಕೆಂಪು ಮೆಣಸಿನ ಚೂರು, ಹಸಿ ಮೆಣಸಿನ ಚೂರುಗಳನ್ನು ಹಾಕಿ ಅಲಂಕರಿಸಿ.  

3.ದಾಲ್  ಮಖನಿ   

ಬೇಕಾಗುವ ಸಾಮಗ್ರಿಗಳು

ರಾಜ್ಮ :ಅರ್ಧ ಲೋಟ
ಕಪ್ಪು ಉದ್ದಿನ ಬೇಳೆ:ಅರ್ಧ ಲೋಟ
ಕಡ್ಲೆ ಬೇಳೆ :ಕಾಲು ಲೋಟ
ಎಣ್ಣೆ :ಸ್ವಲ್ಪ
ಜೀರಿಗೆ :ಒಂದು ಚಮಚ
ಇಂಗು
ಮೆಂತೆ ಕಾಳು:10
ಶು೦ಠಿ ಬೆಳ್ಳುಳ್ಳಿ ಪೇಸ್ಟ್: ಒಂದು ಚಮಚ
ಟೊಮೇಟೊ ರಸ ; ಎರಡು ಲೋಟ
ಕೆಂಪು ಮೆಣಸಿನ ಪುಡಿ  ೧ ಚಮಚ
ಹಾಲಿನ ಕೆನೆ : ಅರ್ಧ ಲೋಟ
ಬೆಣ್ಣೆ : ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
೧.ರಾಜ್ಮ ವನ್ನು ೧೬ ಗ೦ಟೆಗ ಕಾಲ  ನೆನೆ ಹಾಕಬೇಕು.ಕಪ್ಪು ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆಯನ್ನು ೮ ಗಂಟೆಗಳ ಕಾಲ ನೆನೆ ಹಾಕಬೇಕು.
೨.ನೆನೆದ ಕಾಳು/ಬೇಳೆಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ.
೩.ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ,ಮೆಂತೆ ಹಾಕಿ. ಬಳಿಕ ಇದಕ್ಕೆ ಶು೦ಠಿ ಬೆಳ್ಳುಳ್ಳಿ ಪೇಸ್ಟ್,ಟೊಮೇಟೊ ರಸ ಹಾಕಿ ಕಲಕಿ. ಇದು ಸರಿಯಾಗಿ ಬೇಯುತ್ತಿದ್ದಂತೆ
ಮೊದಲೇ ಬೇಯಿಸಿದ ಕಾಳು/ಬೆಳೆಗಳನ್ನು ಇದಕ್ಕೆ ಸೇರಿಸಿ, ಉಪ್ಪು ಹಾಕಿ, ಮತ್ತಷ್ಟು ಬೇಯಲು ಬಿಡಿ .
೪.ಕೆಂಪು ಮೆಣಸಿನ ಪುಡಿ ,ಹಾಲಿನ ಕೆನೆ,ಬೆಣ್ಣೆ ಹಾಕಿ ಮತ್ತಷ್ಟು ಕಲಕಿ.
೫.ಇದಕ್ಕೆ ಗರಂ ಮಸಾಲ ಪುಡಿ ಹಾಕಿ, ಸಣ್ಣ ಉರಿಯಲ್ಲಿ ೫-೧೦ ನಿಮಿಷ ಹಾಗೇ ಬಿಡಿ.
೬.ಕೊನೆಗೆ ಇದಕ್ಕೆ ಬೆಣ್ಣೆ ಹಾಕಿ, ಒಲೆ ಆರಿಸಿ.

೪.ಮೂಲಿ
ಪರಾಠ

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು : ಒಂದು ಕಾಲು  ಲೋಟ
ನೀರು :ಅರ್ಧ ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಹೆಚ್ಚಿದ ಮೂಲಂಗಿ :೨ ಲೋಟ
ಜೀರಿಗೆ :ಅರ್ಧ ಚಮಚ
ಹಸಿ ಮೆಣಸು : ಒಂದು
ಕೊತ್ತಂಬರಿ ಸೊಪ್ಪು :ಸ್ವಲ್ಪ
ಓಮ (ಅಜವಾನ ):ಅರ್ಧ ಚಮಚ

ಎಣ್ಣೆ :ಸ್ವಲ್ಪ

ವಿಧಾನ :

೧.ಒಂದು ಲೋಟ ಗೋಧಿ ಹಿಟ್ಟು, ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಹಾಗೇ ಇಟ್ಟುಕೊಳ್ಳಿ.
೨.ಹೆಚ್ಚಿದ ಮೂಲಂಗಿ,ಜೀರಿಗೆ,ಹಸಿ ಮೆಣಸು,ಕೊತ್ತಂಬರಿ ಸೊಪ್ಪು,ಓಮ ,ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ.
3.ಕಲಸಿಟ್ಟ ಗೋಧಿ ಹಿಟ್ಟಿನ ಸಣ್ಣ ಉ೦ಡೆಗ ಳನ್ನಾಗಿ ಮಾಡಿ.೩ ಇಂಚು ವ್ಯಾಸದ ಸಣ್ಣ ಚಪಾತಿಯ ಥರ ಲಟ್ಟಿಸಿ. ಬೇಕಿದ್ದರೆ ಗೋಧಿ ಹಿಟ್ಟನ್ನು ಚಿಮುಕಿಸಿಕೊಳ್ಳಬಹುದು ಇದರಲ್ಲಿ ಮೂಲಂಗಿ ಮಿಶ್ರಣವನ್ನು ಹಾಕಿ ಮುಚ್ಚಿ, ಲಟ್ಟಿಸಿ.
4.ನಂತರ ಇದನ್ನು ಚಪಾತಿಯ ಹಾಗೇ ಎಣ್ಣೆ ಹಾಕಿ  ಚಪಾತಿ ಹೆಂಚಿನ ಮೇಲೆ ಎರಡೂ ಬದಿ ಬೇಯಿಸಬೇಕು.
ಮೂಲಿ ಪರಾಠ ತಯಾರಾಯಿತು .ಇದನ್ನು ಮೊಸರು ಮತ್ತು ಉಪ್ಪಿನ ಕಾಯಿಯ ಜತೆ ಸವಿಯಿರಿ.


5.ಜೀರಾ ರೈಸ್




ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೪ ಚಮಚ
ನೀರುಳ್ಳಿ: ೧
ಪಲಾವು ಎಲೆ: ೧
ಲವಂಗ: ೪
ಲಿಂಬೆ ರಸ/ಆಮ್ ಚೂರ್ ಪೌಡರ್/ಹುಳಿ ಪುಡಿ: ಯಾವುದಾದರೂ ಒಂದು ( ಹುಳಿಗೆ ಬೇಕಾಗಿ )
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ

೧.ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ, ಕಲಕಿ.
೩.ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವ ತನಕ ಹುರಿಯಿರಿ.
೪.ಲವಂಗ ಮತ್ತು ಪಲಾವಿನ ಎಲೆಯನ್ನು ಇದಕ್ಕೆ ಸೇರಿಸಿ, ಇನ್ನೂ ಎರಡು ನಿಮಿಷ ಕಲಕಿ.
೫.ಬಾಣಲೆಗೆ ಅನ್ನ ಸೇರಿಸಿ, ಉಪ್ಪು, ಹುಳಿ ಪುಡಿ ಹಾಕಿ ಕಲಕಿ.
೬.ಜೀರಾ ರೈಸ್ ತಯಾರು.ಇದಕ್ಕೆ  ದಾಲ್   ಮಖನಿ   ಅತ್ಯುತ್ತಮ  ಜತೆ .