Pages

Wednesday, July 25, 2007

ಅನಿಸುತಿದೆ ಯಾಕೋ ಇಂದು...

(ಕವಿ ಜಯಂತ ಕಾಯ್ಕಿಣಿಯವರ ಕ್ಷಮೆ ಕೋರಿ..)

ಅನಿಸುತಿದೆ ಯಾಕೊ ಇಂದು
ರೈಲದು ಓಡಲೇಬೇಕು ಎಂದು
ಬೆಂಗಳೂರ ಲೋಕದಿಂದ
ಮಂಗಳೂರಿಗೆ ಬರಬೇಕೆಂದು
ಆಹಾ ಎಂಥ ಮಧುರ ಯೋಚನೆ
ರೈಲು ಸೀಟಿ ಕೂಗೆ ಒಮ್ಮೆ ಹಾಗೆ ಸುಮ್ಮನೆ ||

ಕಡಿಮೆಯಾದೀತು ತುಸು ಅಫಘಾತದ ತಳಮಳ
ಘಾಟಿಯ ಟ್ರಾಫಿಕ್ ಜಾಮ್ ರಜಾ ಹಾಕಲಿದೆ
ರೈಲಿನ ಮೊಗವನು ಕಂಡ ಕ್ಷಣ
ಹಸಿರು ಬಾವುಟ ತೋರಲಿ ಒಮ್ಮೆ
ಹಾಗೆ ಸುಮ್ಮನೆ||

ಓಡದ ರೈಲಲಿ ಕಾಣದ
ಕೈಗಳ ಕಹಿ ಇದೆ
ಹಳಿಯಲಿ ಬರೆಯದ ನಿನ್ನ
ಹೆಸರು ಕಡತದಲಿ ಉಳಿದಿದೆ||
ರೈಲಿಗುಂಟೆ ಇದರ ಕಲ್ಪನೆ?

ಓಡಬಾರದೆ ರೈಲು ಒಮ್ಮೆ
ಹಾಗೆ ಝುಮ್ಮನೆ!! || ಅನಿಸುತಿದೆ|
(ತರಂಗ ಆಗಸ್ಟ್ ೨,೨೦೦೭ ,ಪುಟ ಸಂಖ್ಯೆ ೨೨ ರಲ್ಲಿ ಪ್ರಕಟವಾಗಿದೆ )