Pages

Friday, February 25, 2011

ಇವತ್ತಿನ ವಿಜಯ next ನಲ್ಲಿ ...

ವಿದ್ಯಾ ರಶ್ಮಿ ಪೆಲತ್ತಡ್ಕ ಬರೆದ 'ತವರು sickness ' ಲೇಖನದಲ್ಲಿ ...

ಪೂರ್ತಿ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
ಪುಟ ಸಂಖ್ಯೆ ೮, ಫೆಬ್ರವರಿ ೨೫,೨೦೧೧ ಇಲ್ಲಿದೆ ಆ ಲೇಖನ .

Thursday, February 24, 2011

ಮೊಸರು ಗೊಜ್ಜು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

ಬೇಸಗೆಯ ಬಿಸಿಲಿಗೆ ಅಥವಾ ಮಸಾಲೆಯುಕ್ತ ಪದಾರ್ಥಗಳ ಜತೆ ತಂಪು ನೀಡುವುದು ಮೊಸರಿನ ಈ ಖಾದ್ಯಗಳು. ತಯಾರಿಸಲು ಸುಲಭ. ಆರೋಗ್ಯಕ್ಕೆ ಹಿತಕರ. ಇನ್ನೇಕೆ ತಡ!! ಇವುಗಳನ್ನು ಮಾಡಿ ನೋಡಿ .

೧.ಅನಾನಸು ರಾಯಿತ


ಬೇಕಾಗುವ ವಸ್ತುಗಳು
ಅನಾನಸಿನ ಚೂರುಗಳು : ಒಂದು ಲೋಟ
ಮೊಸರು : ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಕಾಳು ಮೆಣಸಿನ ಪುಡಿ :ಚಿಟಿಕೆ
ಜೇನು : ಒಂದು ಚಮಚ

ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಕಲಸಿ.ಬಿಸಿ ಅನ್ನದ ಜತೆ ತಂಪಾದ ರಾಯಿತ ..ಆಹಾ ಏನು ಅಧ್ಭುತ ರುಚಿ !

೨.ಬಟಾಟೆ ಮೊಸರು ಗೊಜ್ಜು


ಬೇಕಾಗುವ ವಸ್ತುಗಳು
ಬಟಾಟೆ :೧
ಹಸಿ ಮೆಣಸು :೨
ಶು೦ಠಿ :ಸಣ್ಣ ಚೂರು
ಮೊಸರು : ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ, ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ
೧.ಬಟಾಟೆ ಯನ್ನು ಬೇಯಿಸಿ, ಸಿಪ್ಪೆ ತೆಗೆದು ,ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಿ.
೨.ಇದಕ್ಕೆ ಮೊಸರು,ಶು೦ಠಿ,ಕತ್ತರಿಸಿದ ಹಸಿ ಮೆಣಸು,ಉಪ್ಪು ಹಾಕಿ ಚೆನ್ನಾಗಿ ಕಲಸಿ.
೩.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಬಟಾಟೆಯ ಮಿಶ್ರಣಕ್ಕೆ ಹಾಕಿ.

೩.ತೊಂಡೆಕಾಯಿ ಮೊಸರು ಗೊಜ್ಜು

ಬೇಕಾಗುವ ವಸ್ತುಗಳು
ತೊಂಡೆಕಾಯಿ: ಒಂದು ಲೋಟ
ತೆಂಗಿನ ತುರಿ : ಕಾಲು ಲೋಟ
ಜೀರಿಗೆ : ಒಂದು ಚಮಚ
ಕಾಳು ಮೆಣಸು : ಅರ್ಧ ಚಮಚ
ಮೊಸರು : ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ, ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ :

೧.ತೊಂಡೆಕಾಯಿಯನ್ನು ಇಡಿಯಾಗಿ ಬೇಯಿಸಿ ಇಟ್ಟುಕೊಳ್ಳಿ.
೨.ಇದನ್ನು ತೆಂಗಿನ ತುರಿ,ಜೀರಿಗೆ ,ಕಾಳು ಮೆಣಸು ಇವುಗಳ ಜತೆ ಒಟ್ಟಿಗೆ ರುಬ್ಬಿ.
೩.ರುಬ್ಬಿದ ಮಿಶ್ರಣಕ್ಕೆ ಮೊಸರು,ಉಪ್ಪು ಹಾಕಿ ಕಲಕಿ.
೪.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಬಟಾಟೆಯ ಮಿಶ್ರಣಕ್ಕೆ ಹಾಕಿ.


೪.ಪಡುವಲಕಾಯಿ ಹಶಿ


ಬೇಕಾಗುವ ವಸ್ತುಗಳು
ಪಡುವಲಕಾಯಿ:೧
ತೆಂಗಿನ ತುರಿ : ಕಾಲು ಲೋಟ
ಬೆಲ್ಲ : ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಎಣ್ಣೆ, ಸಾಸಿವೆ :ತಲಾ ಒಂದು ಚಮಚ
ಇಂಗು :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು
ಕೆಂಪು ಮೆಣಸು :೨

ವಿಧಾನ
೧.ಪಡುವಲಕಾಯಿಯನ್ನು ಸಣ್ಣಗೆ ಹೆಚ್ಚಿ
೨.ಇದನ್ನು ನೀರು,ಬೆಲ್ಲ ಮತ್ತು ಉಪ್ಪು ಇವುಗಳ ಜತೆ ಬೇಯಿಸಿ,ತಣಿಸಿ.
೩.ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿ,ತಣಿದ ಪಡುವಲಕಾಯಿ ಮಿಶ್ರಣಕ್ಕೆ ಹಾಕಿ.
೪.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸಾಸಿವೆ,ಕೆಂಪು ಮೆಣಸು ,ಇಂಗು ಹಾಕಿ .ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ .ಇದನ್ನು ಪಡುವಲಕಾಯಿ ಮಿಶ್ರಣಕ್ಕೆ ಹಾಕಿ.


೫.ದೊಣ್ಣೆ ಮೆಣಸಿನ ಕಾಯಿ ರಾಯಿತ

ಬೇಕಾಗುವ ವಸ್ತುಗಳು
ದೊಣ್ಣೆ ಮೆಣಸಿನ ಕಾಯಿ :೨
ಮೊಸರು : ಎರಡು ಲೋಟ
ಬೆಲ್ಲ :ಸ್ವಲ್ಪ
ಉಪ್ಪು :ರುಚಿಗೆ ತಕ್ಕಷ್ಟು

ಒಗ್ಗರಣೆಗೆ
ಎಣ್ಣೆ:ಎರಡು ಚಮಚ
ಸಾಸಿವೆ,ಜೀರಿಗೆ,ಉದ್ದು :ತಲಾ ಒಂದು ಚಮಚ
ಕೆಂಪು ಮೆಣಸು : 3
ಅರಸಿನ :ಚಿಟಿಕೆ
ಕರಿಬೇವಿನೆಲೆ ಹತ್ತು ಎಸಳು

ವಿಧಾನ
೧.ದೊಣ್ಣೆ ಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ,ಸಾಸಿವೆ,ಜೀರಿಗೆ,ಉದ್ದು, ಕೆಂಪು ಮೆಣಸು , ಅರಸಿನ ಹಾಕಿ ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನೆಲೆ ಹಾಕಿ.
೩.ಇದಕ್ಕೆ ಹೆಚ್ಚಿದ ದೊಣ್ಣೆ ಮೆಣಸನ್ನು ಹಾಕಿ ಚೆನ್ನಾಗಿ ಬಾಡಿಸಿ.
೪.ಬಳಿಕ ಇದಕ್ಕೆ ಉಪ್ಪು ಮತ್ತು ಬೆಲ್ಲ ಹಾಕಿ ಮಂದ ಉರಿಯಲ್ಲಿ ಕಲಕಿ.
೫.ಒಲೆ ಆರಿಸಿ,ಇದನ್ನು ತಣಿಯಲು ಬಿಡಿ. ಬಳಿಕ ಇದಕ್ಕೆ ಮೊಸರು ಸೇರಿಸಿ.
೬.ದೊಣ್ಣೆ ಮೆಣಸಿನ ಕಾಯಿ ಮೊಸರು ಗೊಜ್ಜು ತಯಾರಾಯಿತು.
---------------------------------------------------------------------------------------------

Monday, February 7, 2011

ಬ್ಲಾಗ್ ಲೋಕದಲ್ಲಿ ಕಳ್ಳತನ..

'ಕನ್ನಡಹನಿಗಳಲ್ಲಿ ಹೊಸ ಕವಿತೆ ಬರೆದರೆ ಅದು ಕವಿತ್ವ...
ಕನ್ನಡಹನಿಗಳನ್ನೇ ಕದ್ದು ಬೇರೆಡೆ ಬರೆದರೆ ಅದು ಕಪಿತ್ವ
ಸೃಜನ ಶೀಲತೆಯನ್ನು ಪ್ರೋತ್ಸಾಹಿಸುವುದೇ ನೈಜತ್ವ'
ಈ ಸಾಲುಗಳು ಇರುವುದು ಕನ್ನಡ ಹನಿಗಳು ಎಂಬ ಜಾಲತಾಣದಲ್ಲಿ.

ಆದರೆ ಅವರು ನನ್ನ ಬ್ಲಾಗ್ ನಿಂದ ಸದ್ದಿಲ್ಲದೇ ಒಂದು ಛಾಯಾಚಿತ್ರವನ್ನು ಕದ್ದು ಅವರ ಜಾಲ ತಾಣದಲ್ಲಿ ಹಾಕಿಕೊಂಡಿದ್ದಾರೆ.

ನಾನು ನಮ್ಮ ಮನೆಯಲ್ಲಿ ನೆಲ್ಲಿಕಾಯಿ ತಂಬುಳಿ ತಯಾರಿಸಿ, ನನ್ನದೇ ಕ್ಯಾಮೆರ ದಲ್ಲಿ ತೆಗೆದ ನೆಲ್ಲಿಕಾಯಿ ತಂಬುಳಿಯ ಚಿತ್ರ ಯಥಾವತ್ತಾಗಿ ಅವರ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
nanna blog
kannada hanigaLu

ಈ ಬಗ್ಗೆ ನಾನು ಅವರಿಗೆ ಮೈಲ್ ಮಾಡಿದರೂ ಅದರ ಬಗ್ಗೆ ಯಾವುದೇ ಉತ್ತರ ಬಂದಿಲ್ಲ. ಇದಕ್ಕೆ ಏನು ಹೇಳಬೇಕು ?


ಇಂಥದ್ದೇ ಒಂದು ಸಂಗತಿಯನ್ನು ಕೆಲವು ದಿನಗಳ ಹಿಂದೆ ಪಾಕ ಚಂದ್ರಿಕೆಯ ನಾವಡರೂ ಪ್ರಸ್ತಾಪಿಸಿದ್ದರು.

Saturday, February 5, 2011

ಸಾಹಿತ್ಯ ಸಮ್ಮೇಳನ

ಕನ್ನಡ ಎನೆ ಕುಣಿದಾಡುವುದೆನ್ನೆದೆ..
ಇವತ್ತಿನ ವಿಜಯ ಕರ್ನಾಟಕದಲ್ಲಿ ಹರೀಶ್ ಕೇರ ಅವರ ಲೇಖನದಲ್ಲಿ..
ಇದನ್ನು ಓದಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ

Friday, February 4, 2011

ಸಾರು

’ಕನ್ನಡ ಪ್ರಭ-ಸಖಿ : ಹೊಟ್ಟೆಗೆ ಹಿಟ್ಟು ಅಂಕಣದಲ್ಲಿ ಪ್ರಕಟಿತ ’

--------------------------------------------------
ಸಾರು
--------------------------------------------------


ದಕ್ಷಿಣ ಭಾರತೀಯ ಆಹಾರಕ್ರಮದಲ್ಲಿ ಅತಿ ಮುಖ್ಯವಾದ ಒಂದು ಪ್ರಕಾರವೆಂದರೆ ಸಾರು.
ರಸಂ, ಸಾರು, ಚಾರು ಎಂಬ ವಿವಿಧ ನಾಮಾಂಕಿತ ಸಾರು ಅತ್ಯಂತ ಸರಳ ಮತ್ತು ರುಚಿಕರವಾದದ್ದು.ಯಾರಿಗಾದರೂ ಅಡುಗೆ ಮಾಡಲು ಬರುವುದಿಲ್ಲ ಎಂದಿದ್ದರೆ ಅದನ್ನು ವ್ಯಕ್ತಪಡಿಸುವ ವಾಕ್ಯವೇನು ಗೊತ್ತೆ? ಆಕೆಗೆ/ಆತನಿಗೆ ಒಂದು ಅನ್ನ ಸಾರು ಮಾಡಲು ಬರುವುದಿಲ್ಲ ಎಂದು!!ಗಗನಕ್ಕೇರಿದ ಬೇಳೆ ಬೆಲೆಯಿಂದಾಗಿ ಸಾರಿಗೆ ಬೇಳೆ ಬೇಯಿಸುವುದು ಕಷ್ಟವಾಗುತ್ತಿರುವ ಈ ಕಾಲದಲ್ಲಿ ತೊಗರಿ ಬೇಳೆ ಇಲ್ಲದೆ ಮಾಡಬಹುದಾದ ಸಾರಿನ ವಿಧಾನಗಳನ್ನು ಬರೆಯುತ್ತಿದ್ದೇನೆ.ಇವುಗಳು ಮಳೆಗಾಲದಲ್ಲಿ ಕಾಡುವ ಜ್ವರ,ಶೀತ,ಕೆಮ್ಮಿಗೆ ಕೊಂಚ ಕಡಿವಾಣವನ್ನೂ ಹಾಕಬಲ್ಲವು. ಓದಿ , ಮನೆಯಲ್ಲಿ ಇವುಗಳನ್ನು ಮಾಡಿ ನೋಡಿ,ಹೇಗಾಯ್ತು ಅಂತ ತಿಳಿಸುತ್ತೀರಲ್ಲಾ ?

-----------------------------
೧.ಕಾಳು ಮೆಣಸು-ಜೀರಿಗೆ ಸಾರು
-----------------------------

ಕಾಳು ಮೆಣಸು : ಅರ್ಧ ಚಮಚ
ಜೀರಿಗೆ:ಒಂದು ಚಮಚ
ಬೆಲ್ಲದ ಪುಡಿ : ಒಂದು ಚಮಚ
ಬೆಳ್ಳುಳ್ಳಿ ಎಸಳು :೪

ಅರಸಿನ :ಕಾಲು ಚಮಚ
ಸಾಸಿವೆ :ಒಂದು ಚಮಚ
ತುಪ್ಪ :ಒಂದು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಹುಣಸೆ ಹುಳಿ: ನಿಂಬೆ ಗಾತ್ರದಷ್ಟು
ಬೇವಿನೆಲೆ :ಹತ್ತು ಎಸಳು
ಇಂಗು:ಚಿಟಿಕೆ



ವಿಧಾನ :

ಮೊದಲಿಗೆ ಜೀರಿಗೆ ಮತ್ತು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ.

ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ.

ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು, ಬೇವಿನೆಲೆ ಹಾಕಿ ಕಲಕಿ, ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ.

ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಕಿ.ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ.

ಇದೀಗ ನೋಡಿ ,ನಾಲಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ತಯಾರಾಯಿತು. ಇನ್ನೇಕೆ ತಡ, ಬಿಸಿ ಬಿಸಿ ಅನ್ನಕ್ಕೆ ಕಲಕಿ ತಿನ್ನುವುದೊಂದೇ ಬಾಕಿ!!

ಕಾಳು ಮೆಣಸು,ಜೀರಿಗೆ ಕೆಮ್ಮು,ಕಫಕ್ಕೆ ಅತ್ಯುತ್ತಮ ಔಷಧಿ!




---------------------------------------------
೨.ಸಾಂಬ್ರಾಣಿ ಎಲೆಯ ಸಾರು :
---------------------------------------------
ಬೇಕಾಗುವ ಸಾಮಗ್ರಿಗಳು:

ಸಾಂಬ್ರಾಣಿ ಎಲೆ : ಎರಡು ಹಿಡಿ
ನೀರುಳ್ಳಿ :ಒಂದು
ತುಪ್ಪ :ಎರಡು ಚಮಚ

ಉದ್ದು,ಅರಿಸಿನ,ಸಾಸಿವೆ ,ಜೀರಿಗ,ಎಣ್ಣೆ, : ತಲಾ ಒಂದು ಚಮಚ
ಕೆಂಪು ಮೆಣಸು : 3

ಹುಣಸೆ ರಸ :4 ಚಮಚ
ಬೆಲ್ಲ :ಮಧ್ಯಮ ಗಾತ್ರದ ಚೂರು
ಉಪ್ಪು :ರುಚಿಗೆ ತಕ್ಕಷ್ಟು


ಮೊದಲಿಗೆ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ.
ನೀರಿಗೆ ಹುರಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳನ್ನು ಸೇರಿಸಿ, ಕುದಿಯಲು ಬಿಡಿ.
ಇದಕ್ಕೆ ಹುಣಸೆ ರಸ ಹಾಗೂ ಬೆಲ್ಲವನ್ನು ಸೇರಿಸಿ.
ಕುಡಿಯುತ್ತ ಬಂದಂತೆ ಉಪ್ಪನ್ನು ಹಾಕಿ.
ಆಮೇಲೆ ಒಲೆಯಿಂದ ಇಳಿಸಿ.

ಈಗ ಒಂದು ಸಣ್ಣ ಕಡಾಯಿಯಲ್ಲಿ ಎಣ್ಣೆ,ಮೆಣಸು, ಉದ್ದು,ಅರಿಸಿನ,ಸಾಸಿವೆ ,ಜೀರಿಗೆ ಇವುಗಳನ್ನು ಹಾಕಿ ,ಒಲೆಯ ಮೇಲೆ ಇಡಿ.

ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಒಲೆಯಿಂದ ಇಳಿಸಿ,ಕುದಿಸಿದ ನೀರುಳ್ಳಿ ಹಾಗೂ ಸಾಂಬ್ರಾಣಿ ಎಲೆಗಳ ಮಿಶ್ರಣಕ್ಕೆ ಹಾಕಿ.

ಈ ಸಾರು ಬಹಳ ರುಚಿ.ಅನ್ನಕ್ಕೆ ಬಹಳ ಒಳ್ಳೆಯ ಜತೆ!!


-------------------------
೩.ನಿಂಬೆ ಸಾರು
------------------------




ನಿಂಬೆ ರಸ ವಿಟಮಿನ್ ಸಿ ಯನ್ನು ಹೊಂದಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಂಬೆ ರಸ ಬಳಸುವುದು ಅತೀ ಉತ್ತಮ.


ಸಾಮಗ್ರಿಗಳು

ನಿಂಬೆ ರಸ:ಎರಡು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ನೀರು :ಎರಡು ಲೋಟ

ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು


------------------
ವಿಧಾನ
-------------------

೧.ನೀರನ್ನು ಕುದಿಸಿ, ಅದಕ್ಕೆ ಉಪ್ಪು,ಬೆಲ್ಲದ ಪುಡಿ ಹಾಕಿ.
೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.ಸಾರಿಗೆ ನಿಂಬೆ ರಸ ಹಿಂಡಿ,
೩.ಬೇಕಿದ್ದರೆ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಹಾಕಬಹುದು.


----------------------
೪.ಪುನರ್ಪುಳಿ ಸಾರು
---------------------


ದಕ್ಷಿಣ ಕನ್ನಡದಲ್ಲಿ ಬಹಳ ಜನಪ್ರಿಯವಾದ ಸಾರು ಇದು.ಪುನರ್ಪುಳಿಯನ್ನು ಸಾಮಾನ್ಯವಾಗಿ ಪಿತ್ತ ಹೆಚ್ಚಾದಾಗ, ಕರಿದ ಪದಾರ್ಥಗಳನ್ನು ತಿಂದು ಹೊಟ್ಟೆ ಕೆಟ್ಟರೆ, ತಲೆ ತಿರುಗುವಿಕೆ, ಅಲರ್ಜಿಯಂತಹ ತೊಂದರೆಗಳುಂಟಾದಾಗ ಹೆಚ್ಚಾಗಿ ಬಳಸುತ್ತಾರೆ.


ಬೇಕಾಗುವ ಸಾಮಗ್ರಿಗಳು

ಪುನರ್ಪುಳಿ (ಕೋಕಮ್) : ೮ ರಿಂದ ಹತ್ತು
ನೀರು :ಎರಡು ಲೋಟ
ಉಪ್ಪು:ರುಚಿಗೆ ತಕ್ಕಷ್ಟು
ಬೆಲ್ಲದ ಪುಡಿ:ಅರ್ಧ ಚಮಚ
ಕಾಳುಮೆಣಸಿನ ಪುಡಿ:ಕಾಲು ಚಮಚ

ಕೆಂಪು ಮೆಣಸು : ೪
ಎಣ್ಣೆ:ಒಂದು ಚಮಚ
ಸಾಸಿವೆ, ಜೀರಿಗೆ:ತಲಾ ಒಂದು ಚಮಚ
ಅರಸಿನ :ಕಾಲು ಚಮಚ
ಉದ್ದು:ಕಾಲು ಚಮಚ
ಬೇವಿನೆಲೆ : ೬ ಎಸಳು

ವಿಧಾನ :

೧.ಪುನರ್ಪುಳಿಯನ್ನು ನೀರಿನಲ್ಲಿ ಹದಿನೈದು ನಿಮಿಷಗಳ ಕಾಲ ನೆನೆಸಿ ಇಡಿ
೨.ಉಪ್ಪು,ಬೆಲ್ಲದ ಪುಡಿ, ಕಾಳು ಮೆಣಸಿನ ಪುಡಿ ಇವುಗಳನ್ನು ಈ ನೀರಿಗೆ ಹಾಕಿ,ಕುದಿಯಲು ಬಿಡಿ.

೨.ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ,ಅದಕ್ಕೆ ಸಾಸಿವೆ, ಜೀರಿಗೆ,ಉದ್ದು,ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಬೇವಿನೆಲೆ ಹಾಕಿ.ಇದನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಒಲೆ ಆರಿಸಿ.


ಅತ್ಯಂತ ಸರಳವೂ ರುಚಿಕರವೂ ಆದ ಸಾರು ಇದು.