Pages

Friday, July 24, 2009

ಅನ್ನದಲ್ಲಿ ಬಗೆ ಬಗೆ...
------------------------------


ಪುದೀನಾ ಪಲಾವು
------------------------------



ಪುದೀನಾ ಎಲೆ: ೧ ಲೋಟ
ಅಕ್ಕಿ: ೧ ಲೋಟ
ನೀರುಳ್ಳಿ: ೧
ಬೆಳ್ಳುಳ್ಳಿ: ೪ ಎಸಳು
ಶುಂಠಿ: ಒಂದು ಸಣ್ಣ ಚೂರು
ಲವಂಗ: ೪
ಕಾಳು ಮೆಣಸು: ೫
ಜಾಯಿಕಾಯಿ ಹೂವು: ಒಂದು ಸಣ್ಣ ಚೂರು
ಚಕ್ರ ಮೊಗ್ಗು: ೧ ಸಣ್ಣ ಚೂರು
ಎಣ್ಣೆ: ಎರಡು ಚಮಚ
ಹಸಿ ಮೆಣಸು: ೧
ಜೀರಿಗೆ: ೧ ಚಮಚ
ಲಿಂಬೆ ರಸ: ೧ ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು, ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಲವಂಗ, ಕಾಳು ಮೆಣಸು, ಜಾಯಿಕಾಯಿ ಹೂವು, ಚಕ್ರ ಮೊಗ್ಗು ಇವುಗಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
೩.ಮಿಕ್ಸಿಯಲ್ಲಿ ಪುದೀನಾ, ಬಾಣಲೆಯಲ್ಲಿ ಹುರಿದಿಟ್ಟ ಸಾಮಗ್ರಿಗಳು, ಶುಂಠಿ, ಬೆಳ್ಳುಳ್ಳಿ ಇವುಗಳನ್ನು ಒಟ್ಟಿಗೆ ರುಬ್ಬಿ.
೪.ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ.
೫.ಬಳಿಕ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ಕಂದು ಬಣ್ಣ ಬರುವ ತನಕ ಹುರಿಯಿರಿ. ಒಂದು ಹಸಿ ಮೆಣಸನ್ನು ಚೂರು ಮಾಡಿ ಹಾಕಿ.
೬.ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣವನ್ನು ಹಾಕಿ, ಕಲಕಿ.
೭.ಇದು ಕುದಿಯುತ್ತಿದ್ದಂತೆ, ಅನ್ನವನ್ನು ಸೇರಿಸಿ. ನಿಂಬೆ ರಸ, ಉಪ್ಪು ಹಾಕಿ ಕಲಕಿ.
೮.ಎರಡು ನಿಮಿಷ ಮಂದ ಉರಿಯಲ್ಲಿ ಕಲಕಿ. ಇದೀಗ ಪುದೀನಾ ಪಲಾವು ತಯಾರು. ಇದೇ ಥರ ಮೆಂತೆ ಸೊಪ್ಪಿನ ಪಲಾವನ್ನು ಮಾಡಬಹುದು.

-------------------------------------------
ಜೀರಾ ರೈಸ್
---------------------------------------------
ಅತ್ಯಂತ ಸುಲಭವಾದ ಅಡುಗೆ ವಿಧಾನ ಇದು.



ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಜೀರಿಗೆ: ೪ ಚಮಚ
ನೀರುಳ್ಳಿ: ೧
ಪಲಾವು ಎಲೆ: ೧
ಲವಂಗ: ೪
ಲಿಂಬೆ ರಸ/ಆಮ್ ಚೂರ್ ಪೌಡರ್/ಹುಳಿ ಪುಡಿ: ಯಾವುದಾದರೂ ಒಂದು ( ಹುಳಿಗೆ ಬೇಕಾಗಿ )
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ

೧.ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ.
೨.ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ, ಕಲಕಿ.
೩.ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವ ತನಕ ಹುರಿಯಿರಿ.
೪.ಲವಂಗ ಮತ್ತು ಪಲಾವಿನ ಎಲೆಯನ್ನು ಇದಕ್ಕೆ ಸೇರಿಸಿ, ಇನ್ನೂ ಎರಡು ನಿಮಿಷ ಕಲಕಿ.
೫.ಬಾಣಲೆಗೆ ಅನ್ನ ಸೇರಿಸಿ, ಉಪ್ಪು, ಹುಳಿ ಪುಡಿ ಹಾಕಿ ಕಲಕಿ.
೬.ಜೀರಾ ರೈಸ್ ತಯಾರು.

ವಿ.ಸೂ:ಇಡೀ ಲವಂಗದ ಬದಲು ಲವಂಗದ ಪುಡಿಯನ್ನೂ ಹಾಕಬಹುದು.

-----------------------------------------------------
ವಾಂಗಿ ಭಾತ್

ಬೇಕಾಗುವ ಪದಾರ್ಥಗಳು

ಅಕ್ಕಿ: ಒಂದು ಲೋಟ

ಬದನೆ ಪಲ್ಯಕ್ಕೆ:

ಬದನೆಕಾಯಿ: ೪
ಎಣ್ಣೆ: ೪ ಚಮಚ
ಸಾಸಿವೆ: ಒಂದು ಚಮಚ
ಜೀರಿಗೆ: ಒಂದು ಚಮಚ
ಉದ್ದು:ಒಂದು ಚಮಚ
ಅರಸಿನ: ಕಾಲು ಚಮಚ
ಇಂಗು: ಚಿಟಿಕೆ
ಕೆಂಪು ಮೆಣಸು: ೩
ಉಪ್ಪು:ರುಚಿಗೆ ತಕ್ಕಷ್ಟು
ಬೇವಿನ ಎಲೆ: ೧೦
ಲಿಂಬೆ ರಸ: ಒಂದು ಚಮಚ

ಮಸಾಲೆಗೆ:

ಕಡಲೆ ಬೇಳೆ, ಉದ್ದಿನ ಬೇಳೆ, ದಾಲ್ಚಿನ್ನಿ, ಲವಂಗ, ಗಸಗಸೆ, ಕಾಳು ಮೆಣಸು, ಕೊತ್ತಂಬರಿ ಕಾಳು: ತಲಾ ಒಂದು ಚಮಚ
ಕೊಬ್ಬರಿ ತುರಿ: ಅರ್ಧ ಲೋಟ





ವಿಧಾನ:

೧.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೨.ಮಸಾಲೆಗೆ ಎಂದು ಸೂಚಿಸಿದ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿದು, ಕೊಬ್ಬರಿ ತುರಿ ಜತೆ ನೀರು ಹಾಕದೆ ರುಬ್ಬಿ ಇಟ್ಟುಕೊಳ್ಳಿ.
೩.ಬಾಣಲೆಯಲ್ಲಿ ಎಣ್ಣೆ ಹಾಕಿ, ಕೆಂಪು ಮೆಣಸು, ಸಾಸಿವೆ, ಜೀರಿಗೆ, ಉದ್ದು, ಅರಸಿನ, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬೇವಿನ ಎಲೆ ಸೇರಿಸಿ.
೪.ಇದಕ್ಕೆ ಹೆಚ್ಚಿದ ಬದನೆ ಹೋಳುಗಳನ್ನು ಸೇರಿಸಿ, ಕಲಕಿ. ಸ್ವಲ್ಪ ಹೊತ್ತು ಬೇಯಿಸಿ.
೫.ಈಗ ಇದಕ್ಕೆ ಉಪ್ಪು ಮತ್ತು (೨) ಹಂತದಲ್ಲಿ ತಯಾರಾದ ಮಸಾಲೆಯನ್ನು ಸೇರಿಸಿ, ಕಲಕಿ.
೬.ಈಗ ಬದನೆಕಾಯಿಯ ಮಸಾಲೆ ಪಲ್ಯ ತಯಾರಾಯಿತು.
೭.ಇದಕ್ಕೆ ಅನ್ನ ಸೇರಿಸಿ ಕಲಸಿ. ಸ್ವಲ್ಪ ಉಪ್ಪು ಸೇರಿಸಿ, ನಿಂಬೆ ರಸ ಹಿಂಡಿ.
೮.ಆಹಾ..ರುಚಿರುಚಿಯಾದ ಈ ವಾಂಗಿ ಭಾತ್ ಗೆ ವಾಂಗಿ ಭಾತೇ ಸಾಟಿ.

--------------------------------------
ಪೀಸ್ ಪುಲಾವ್ (ಬಟಾಣಿ ಪುಲಾವು)
-----------------------------------------


ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಲೋಟ
ಬಟಾಣಿ: ಅರ್ಧ ಲೋಟ

ಎಣ್ಣೆ: ನಾಲ್ಕು ಚಮಚ
ಜೀರಿಗೆ, ಸಾಸಿವೆ, ಉದ್ದು ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ನೀರುಳ್ಳಿ: ಒಂದು
ಕಾಳು ಮೆಣಸು: ೧ ಚಮಚ
ಜಾಯಿಕಾಯಿ ಹೂವು: ೧ ಸಣ್ಣ ಚೂರು
ದಾಲ್ಚಿನ್ನಿ: ೧ ಸಣ್ಣ ಚೂರು
ಲವಂಗ: ೪
ಬೆಳ್ಳುಳ್ಳಿ: ೪ ಎಸಳು
ಹಸಿಮೆಣಸು: ೧
ನಿಂಬೆ ರಸ: ಒಂದು ಚಮಚ
ಉಪ್ಪು: ರುಚಿಗೆ ತಕ್ಕಷ್ಟು


ವಿಧಾನ:

೧.ನೀರುಳ್ಳಿ, ಕಾಳು ಮೆಣಸು, ಜಾಯಿಕಾಯಿ ಹೂವು, ದಾಲ್ಚಿನ್ನಿ, ಲವಂಗ, ಬೆಳ್ಳುಳ್ಳಿ, ಹಸಿಮೆಣಸು ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ.
೨.ಅನ್ನ ತಯಾರಿಸಿ ಇಟ್ಟುಕೊಳ್ಳಿ.
೩.ಬಟಾಣಿಯನ್ನು ನೀರಿನಲ್ಲಿ ೧೦ ನಿಮಿಷ ಬೇಯಿಸಿ.
೪.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಸಾಸಿವೆ, ಉದ್ದು ಇವುಗಳನ್ನು ಹಾಕಿ, ಒಗ್ಗರಣೆ ಮಾಡಿ.
೫.ಇದಕ್ಕೆ ರುಬ್ಬಿದ ಮಸಾಲೆ ಮತ್ತು ಬೇಯಿಸಿದ ಬಟಾಣಿಯನ್ನು ಹಾಕಿ ಕಲಕಿ. ಇದಕ್ಕೆ ಚಿಟಿಕೆ ಉಪ್ಪು ಸೇರಿಸಿ.
೬.ಮಂದ ಉರಿಯಲ್ಲಿ ೩-೪ ನಿಮಿಷ ಕಲಕಿ.
೭.ಇದಕ್ಕೆ ಅನ್ನವನ್ನು ಸೇರಿಸಿ, ಕಲಸಿ.ಉಪ್ಪು, ನಿಂಬೆ ರಸ ಸೇರಿಸಿ. ಇನ್ನೊಮ್ಮೆ ಕಲಕಿ.
೮.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
೯.ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಅಥವಾ ಟೊಮಾಟೊ ನೀರುಳ್ಳಿ ರಾಯಿತದೊಂದಿಗೆ ಸವಿಯಿರಿ.

------------------------------
ಕಾಶ್ಮೀರಿ ಪುಲಾವು
---------------------------------
ಬೇಕಾಗುವ ಸಾಮಗ್ರಿಗಳು
ಅಕ್ಕಿ: ಒಂದು ಲೋಟ
ಹಾಲು: ಒಂದು ಲೋಟ
ಹಾಲಿನ ಕೆನೆ: ೫ ಚಮಚ
ಹೆಚ್ಚಿದ ಹಣ್ಣುಗಳು: ೧ ಲೋಟ
ಸಕ್ಕರೆ: ಒಂದು ಚಮಚ
ತುಪ್ಪ: ಎರಡು ಚಮಚ
ಲವಂಗ: ೪
ಪಲಾವು ಎಲೆ: ೧
ದಾಲ್ಚಿನ್ನಿ: ಸಣ್ಣ ಚೂರು
ಏಲಕ್ಕಿ: ೪
ಜೀರಿಗೆ: ಎರಡು ಚಮಚ
ಗುಲಾಬಿ ನೀರು (ರೋಸ್ ವಾಟರ್): ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ವಿಧಾನ:
೧.ಅಕ್ಕಿಯನ್ನು ತೊಳೆದು ೧೫-೨೦ ನಿಮಿಷ ನೆನೆಸಿಡಿ.
೨.ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ, ಜೀರಿಗೆ, ಪಲಾವು ಎಲೆ ಇವುಗಳನ್ನು ಜಜ್ಜಿ ಹಾಕಿ.
೩.ನೆನೆಸಿದ ಅಕ್ಕಿಯಿಂದ ನೀರು ಬೇರ್ಪಡಿಸಿ, ಬಾಣಲೆಗೆ ಹಾಕಿ. ೨-೩ ನಿಮಿಷ ಕಲಕಿ.
೪.ಈಗ ಇದಕ್ಕೆ ಹಾಲು, ಕೆನೆ, ಸಕ್ಕರೆ ಇವುಗಳನ್ನು ಸೇರಿಸಿ. ಅರ್ಧ ಲೋಟ ನೀರು ಸೇರಿಸಿ, ಮುಚ್ಚಳ ಹಾಕಿ, ೧೫-೨೦ ನಿಮಿಷಗಳ ಕಾಲ ಬೇಯಿಸಿ.
೫.ಈಗ ಅನ್ನ ಬೆಂದಿದೆಯೋ ಇಲ್ಲವೊ ಎಂದು ಪರೀಕ್ಷಿಸಿ. ಇಲ್ಲವೆಂದಾದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಬೇಯಲು ಬಿಡಿ.
೬.ಅನ್ನ ಸರಿಯಾಗಿ ಬೆಂದ ಮೇಲೆ ಇದಕ್ಕೆ ಉಪ್ಪು, ಕತ್ತರಿಸಿಟ್ಟ ಹಣ್ಣುಗಳನ್ನು ಹಾಕಿ ಕಲಕಿ.
೭.ಕಾಶ್ಮೀರಿ ಪಲಾವು ತಯಾರು. ಬಡಿಸುವ ಮುನ್ನ, ರೋಸ್ ವಾಟರ್ ಚಿಮುಕಿಸಿ, ತುಪ್ಪದಲ್ಲಿ ಹುರಿದ ಒಣ ದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಿ ಬಡಿಸಿ.


---------------------------------------------
ಫ಼್ರೈಡ್ ರೈಸ್
--------------------------------------------

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ಸಣ್ಣಗೆ ಹೆಚ್ಚಿದ ನೀರುಳ್ಳಿ ಕಡ್ಡಿ (ಫ಼್ರೆಂಚ್ ಓನಿಯನ್ ): ೫
ಸೊಯಾ ಸಾಸ್: ೨ ಚಮಚ
ವಿನೆಗರ್: ೧ ಚಮಚ
ತುಪ್ಪ: ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಗೋಬಿ: ಸಣ್ಣಗೆ ಹೆಚ್ಚಿದ್ದು :ಕಾಲು ಲೋಟ
ಬಟಾಣಿ: ಅರ್ಧ ಲೋಟ


ವಿಧಾನ:

೧.ಬಾಣಲೆಯಲ್ಲಿ ತುಪ್ಪ ಹಾಕಿ, ಬಿಸಿ ಮಾಡಿ. ನೀರುಳ್ಳಿ ಕಡ್ಡಿಯನ್ನು ಸೇರಿಸಿ ೩-೪ ನಿಮಿಷ ಹುರಿಯಿರಿ.
೨.ಕುಕ್ಕರ್ ನಲ್ಲಿ ಗೋಬಿ ಮತ್ತು ಬಟಾಣಿಯನ್ನು ಬೇಯಿಸಿ.
೩. (೧) ರ ಮಿಶ್ರಣಕ್ಕೆ ಬೇಯಿಸಿದ ಗೋಬಿ ಮತ್ತು ಬಟಾಣಿಯನ್ನು ಸೇರಿಸಿ.
೪.ಇದಕ್ಕೆ ವಿನೆಗರ್, ಸೊಯ ಸಾಸ್, ಉಪ್ಪು ಹಾಕಿ ಕಲಕಿ.
೫.ಈ ಮಿಶ್ರಣಕ್ಕೆ ಅನ್ನ ಸೇರಿಸಿ, ಕಲಸಿ.
೬.೩-೪ ನಿಮಿಷ ಮಂದ ಉರಿಯಲ್ಲಿ ಕಲಕಿ.
೭.ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.


-------------------------------------------
ಆಲೂ ಭಾತ್
-------------------------------------------
ಇದು ಮಹಾರಾಷ್ಟ್ರ ಪ್ರಾಂತ್ಯದ ಅಡುಗೆ

ಬೇಕಾಗುವ ಸಾಮಗ್ರಿಗಳು

ಅಕ್ಕಿ: ೧ ಲೋಟ
ತುಪ್ಪ: ೮ ಚಮಚ
ಅಲೂಗಡ್ಡೆ: ೨
ಮೊಸರು: ಅರ್ಧ ಲೋಟ
ಶುಂಠಿ: ಒಂದು ಸಣ್ಣ ಚೂರು
ಅರಸಿನ: ಕಾಲು ಚಮಚ
ದಾಲ್ಚಿನ್ನಿ, ಲವಂಗ ಪುಡಿ, ಕೊತ್ತಂಬರಿ ಪುಡಿ: ತಲಾ ಒಂದು ಚಮಚ
ಕೊತ್ತಂಬರಿ ಸೊಪ್ಪು: ಕಾಲು ಲೋಟ
ಕೊಬ್ಬರಿ ತುರಿ: ಕಾಲು ಲೋಟ
ಹಸಿ ಮೆಣಸು: ೩
ಉಪ್ಪು: ರುಚಿಗೆ ತಕ್ಕಷ್ಟು
ಗೋಡಂಬಿ: ೧೦

ವಿಧಾನ:
೧.ಸಿಪ್ಪೆ ಸುಲಿದು ಸಣ್ಣಗೆ ಕತ್ತರಿಸಿದ ಆಲೂಗಡ್ಡೆಯನ್ನು ತುಪ್ಪದಲ್ಲಿ ಹುರಿಯಿರಿ.
೨.ಇದಕ್ಕೆ ದಾಲ್ಚಿನ್ನಿ, ಕೊತ್ತಂಬರಿ, ಲವಂಗ ಪುಡಿ, ಮೊಸರು ಮತ್ತು ಜಜ್ಜಿದ ಶುಂಠಿಯನ್ನು ಹಾಕಿ ಕಲಕಿ.
೩.ಸಣ್ಣ ಉರಿಯಲ್ಲಿ ಅದನ್ನು ಬೇಯಿಸಿ. ಸ್ವಲ್ಪ ನೀರು ಚಿಮುಕಿಸಿ.
೪.ಆಲೂಗಡ್ಡೆ ಸರಿಯಾಗಿ ಬೆಂದ ಮೇಲೆ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕಲಸಿ.
೫.ಈಗ ಇದಕ್ಕೆ ಅನ್ನವನ್ನು ಸೇರಿಸಿ. ೨-೩ ನಿಮಿಷ ಕಲಕಿ.
೬.ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

----------------------------------------------------------------------------------


ವಿ.ಸೂ:
೧.ಸಾಧಾರಣ ಅಕ್ಕಿಯ ಬದಲಿಗೆ ಬಾಸ್ಮತಿ ಅಕ್ಕಿಯನ್ನು ಬಳಸಿದರೆ ಅದರ ಸೊಗಸೇ ಬೇರೆ.
೨.ಅನ್ನ ಮಾಡುವಾಗ ಸ್ವಲ್ಪ ಎಣ್ಣೆ ಅಥವಾ ನಿಂಬೆ ರಸ ವನ್ನು ಅಕ್ಕಿಯ ಜತೆ ಹಾಕಿದರೆ ಅನ್ನ ಉದುರುದುರಾಗಿರುತ್ತದೆ.
೩.ಸಿಹಿ ಅಡುಗೆಗೆ ತುಪ್ಪ, ಖಾರದ ಅಡುಗೆಗೆ ಎಣ್ಣೆ ಬಳಸುವುದು ವಾಡಿಕೆ. ಆದರೂ ಖಾರದ ಅಡುಗೆಗೂ ತುಪ್ಪ ಬಳಸಿದರೆ ವಿಷೇಷ ರುಚಿ ಬರುತ್ತದೆ.
೪.ಮೇಲೆ ಸೂಚಿಸಿದ ಎಲ್ಲಾ ಪ್ರಮಾಣಗಳು ಇಬ್ಬರಿಗೆ ಸಾಕಾಗುವಷ್ಟು.

ಸುಧಾದಲ್ಲಿ ಪ್ರಕಟಿತ